ತಾಲೂಕಿನಾದ್ಯಂತ ವರುಣ ರಾಯನ ಮುನಿಸು ಮುಂದುವರೆದಿದ್ದು ಮುಂಗಾರುಮಳೆ ಕೈಕೊಟ್ಟು ಬರಗಾಲದ ಛಾಯೆ ಆವರಿಸಿ ಬಡವರ, ರೈತರ ಜೀವನ ಚಿಂತಾಜನಕವಾಗಿದೆ ಇಂತಹ ಬರಗಾಲದ ದಿನಗಳಲ್ಲಿ ನೆರೇಗಾ ಕಾಮಗಾರಿಯು ಬಡವರ ರೈತರ ಬವಣೆ ನೀಗಿಸಲು ಸಹಕಾರಿಯಾಗಿದೆ ಎಂದು ಕಾಯಕ ಯೋಗಿ ಮಲ್ಲು ದೊಡ್ಡಮನಿ ಹೇಳಿದರು.
ತಾಲೂಕಿನಾದ್ಯಂತ ವರುಣ ರಾಯನ ಮುನಿಸು ಮುಂದುವರೆದಿದ್ದು ಮುಂಗಾರುಮಳೆ ಕೈಕೊಟ್ಟು ಬರಗಾಲದ ಛಾಯೆ ಆವರಿಸಿ ಬಡವರ, ರೈತರ ಜೀವನ ಚಿಂತಾಜನಕವಾಗಿದೆ ಇಂತಹ ಬರಗಾಲದ ದಿನಗಳಲ್ಲಿ ನೆರೇಗಾ ಕಾಮಗಾರಿಯು ಬಡವರ ರೈತರ ಬವಣೆ ನೀಗಿಸಲು ಸಹಕಾರಿಯಾಗಿದೆ ಎಂದು ಕಾಯಕ ಯೋಗಿ ಮಲ್ಲು ದೊಡ್ಡಮನಿ ಹೇಳಿದರು.
ಕುಕನೂರು :
ತಾಲೂಕಿನಾದ್ಯಂತ ಮಳೆರಾಯನ ಮುನಿಸು ಮುಂದುವರೆದಿದ್ದು ಮುಂಗಾರುಮಳೆ ಕೈಕೊಟ್ಟು ಬರಗಾಲದ ಛಾಯೆ ಆವರಿಸಿ ಬಡವರ, ರೈತರ ಜೀವನ ಚಿಂತಾಜನಕವಾಗಿದೆ. ಇಂತಹ ಬರಗಾಲದ ದಿನಗಳಲ್ಲಿ ನೆರೇಗಾ ಕಾಮಗಾರಿಯು ಬಡವರ ರೈತರ ಬವಣೆ ನೀಗಿಸಲು ಸಹಕಾರಿಯಾಗಿದೆ ಎಂದು ಕಾಯಕ ಯೋಗಿ ಮಲ್ಲು ದೊಡ್ಡಮನಿ ಹೇಳಿದರು.
ತಾಲೂಕಿನ ಗಾವರಾಳ ಗ್ರಾಮದಲ್ಲಿ ನೆರೇಗಾ ಯೋಜನೆ ಅಡಿಯಲ್ಲಿ ನಾಲಾ ಸುಧಾರಣಾ ಕಾಮಗಾರಿ ನಡೆಯುವ ಸ್ಥಳದಲ್ಲಿ ಮಾತನಾಡಿದ ಅವರು ಕುಕನೂರು ತಾಲೂಕು ಒಣ ಬೇಸಾಯದ ಪದ್ದತಿಯನ್ನು ಹೊಂದಿರುವ ತಾಲೂಕಾಗಿದ್ದು ಮಳೆಯನ್ನೆ ಅವಲಂಬಿಸಿವೆ,ಈ ಬಾರಿಯ ಮುಂಗಾರುಮಳೆ ಕೈಕೊಟ್ಟಿದ್ದು ತಾಲೂಕಿನಾದ್ಯಂತ ವರುಣ ರಾಯನ ಮುನಿಸು ಮುಂದುವರೆದಿದು ಬರದ ಛಾಯೆ ಆವರಿಸಿ ಬಡವರ ರೈತರ ಶ್ರಮಿಕರ ಜೀವನ ಅಸ್ತವ್ಯಸ್ತವಾಗಿದೆ,ಇಂತಹ ಬರಗಾಲದ ಸಮಯದಲ್ಲಿ ರೈತರ ಬಡವರ ಜೀವನೋಪಾಯಕ್ಕೆ ಆಸರೆಯಾಗಿ ನೆರೇಗಾ ಯೋಜನೆ ನಿಂತಿದೆ, ಹಳ್ಳಿಗಳ ಜನ ಬೇಸಿಗೆ ಕಾಲದಲ್ಲಿ ಗುಳೆ ಹೋಗುವುದನ್ನು ತಪ್ಪಿಸಿ ಗ್ರಾಮೀಣ ಪ್ರದೇಶಗಳಲ್ಲಿ ನೇಲೆಯುರುವಂತೆ ಮಾಡಿ ಗ್ರಾಮೀಣ ಪ್ರದೇಶದ ಜಲಮೂಲಗಳನ್ನು ಉನ್ನತಿಕರಿಸಿ ಜಲಮೂಲಗಳ ಸಂರಕ್ಷಣೆ ಮಾಡಿದ ನೆರೇಗಾ ಯೋಜನೆ ಇಂದು ಬರಗಾಲದ ಸಮಯದಲ್ಲಿ ರೈತರ ಬಡವರ ಜೀವನೋಪಾಯಕ್ಕೆ ಆಸರೆಯಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾರುತಿ ಇಟಗಿ,ಮಾರುತಿ ಮ್ಯಾಗಳಮನಿ,ಪ್ರಭು, ನಿಂಗರಾಜ ದೊಡ್ಡಮನಿ,ದೇವಕ್ಕ ಹಲಗೇರಿ ಸೇರಿದಂತೆ ನೂರಾರು ಸಂಖ್ಯೆಯ ನೆರೇಗಾ ಕಾರ್ಮಿಕರು ಉಪಸ್ಥಿತರಿದ್ದರು.
ನಿಂಗರಾಜ ದೊಡ್ಡಮನಿ
Like
Dislike
Love
Angry
Sad
Funny
Wow
Your experience on this site will be improved by allowing cookies.
ಠೀಕೆಗಳು 0