ಅಭಿವೃದ್ಧಿ ಎಂದರೆ ಬರಿ ಕಾಂಕ್ರಿಟ್ ರಸ್ತೆ ಮಾಡುವುದು ರಸ್ತೆಯ ಮೇಲೆ ಹೊಸ ರಸ್ತೆ ಮಾಡುವುದು ಅಲ್ಲ ಜನ ಸಾಮಾನ್ಯರ ಆರ್ಥಿಕ ಸ್ಥಿತಿ ಸುಧಾರಿಸಿದೆ ಮಾತ್ರ ನಿಜವಾದ ಅಭಿವೃದ್ಧಿ ಎಂದು ಪಕ್ಷೇತರ ಅಭ್ಯರ್ಥಿ ಬಾಳಪ್ಪ ಎಸ್ ವೀರಾಪುರ
ಅಭಿವೃದ್ಧಿ ಎಂದರೆ ಬರಿ ಕಾಂಕ್ರಿಟ್ ರಸ್ತೆ ಮಾಡುವುದು ರಸ್ತೆಯ ಮೇಲೆ ಹೊಸ ರಸ್ತೆ ಮಾಡುವುದು ಅಲ್ಲ ಜನ ಸಾಮಾನ್ಯರ ಆರ್ಥಿಕ ಸ್ಥಿತಿ ಸುಧಾರಿಸಿದೆ ಮಾತ್ರ ನಿಜವಾದ ಅಭಿವೃದ್ಧಿ ಎಂದು ಪಕ್ಷೇತರ ಅಭ್ಯರ್ಥಿ ಬಾಳಪ್ಪ ಎಸ್ ವೀರಾಪುರ
ಕುಕನೂರು : ಅಭಿವೃದ್ಧಿ ಎಂದರೆ ಬರಿ ಕಾಂಕ್ರಿಟ್ ರಸ್ತೆ ಮಾಡುವುದು ರಸ್ತೆಯ ಮೇಲೆ ಹೊಸ ರಸ್ತೆ ಮಾಡುವುದು ಅಲ್ಲ ಜನ ಸಾಮಾನ್ಯರ ಆರ್ಥಿಕ ಸ್ಥಿತಿ ಸುಧಾರಿಸಿದೆ ಮಾತ್ರ ನಿಜವಾದ ಅಭಿವೃದ್ಧಿ ಎಂದು ಪಕ್ಷೇತರ ಅಭ್ಯರ್ಥಿ ಬಾಳಪ್ಪ ಎಸ್ ವೀರಾಪುರ ಹೇಳಿದರು.
ಹಿರೇಮ್ಯಾಗೇರಿ ಗ್ರಾಮದಲ್ಲಿ ಮನೆ ಮನೆ ಪ್ರಚಾರ ಮಾಡುತ್ತ ಮಾತನಾಡಿದ ಅವರು ಸ್ವಾತಂತ್ರ ಸಿಕ್ಕು 75 ವರ್ಷಾಗಳಾದರು ಸಹ ನಮ್ಮ ಯಲಬುರ್ಗಾ ವಿಧಾನಸಭಾ ಕ್ಷೇತ್ರ ಹಿಂದುಳಿದ ತಾಲೂಕು ಎಂಬ ಹಣೆಪಟ್ಟಿ ಕಟ್ಟಿಕೊಂಡಿದೆ ಅಭಿವೃದ್ಧಿ ಮಾಡಿದೆ ಉಳಿದಿದೆ, ಅಭಿವೃದ್ದಿ ಎಂದರೆ ಕೇವಲ ಕಾಂಕ್ರೀಟ್ ರಸ್ತೆಗಳನ್ನು ಮಾಡುವುದು ಅಷ್ಟೇ ಅಲ್ಲ, ರೈತರಿಗೆ ಅನುಕೂಲವಾಗುವ ನೀರಾವರಿ ಯೋಜನೆಗಳು ಜಾರಿಯಾಗಬೇಕು, ಎಪಿಎಂಸಿ ನಿರ್ಮಾಣವಾಗಬೇಕು, ಬೆಳೆದ ಬೆಳೆಗಳಿಗೆ ಬೆಂಬಲ ಬೆಲೆ ಸಿಗಬೇಕು, ರೈತರ ಬದುಕು ಹಸನಾಗಬೇಕು, ನಿರುದ್ಯೋಗ ತೊಲಗಬೇಕು ಜನ ಸಾಮಾನ್ಯರ ಆರ್ಥಿಕ ಸ್ಥಿತಿ ಸುಧಾರಿಸಬೇಕು ಎಂದಾಗ ಮಾತ್ರ ಕ್ಷೇತ್ರ ಅಭಿವೃದ್ಧಿಯಾಗತ್ತದೆ,
ನಾನು ಅನೇಕ ರೈತ ಪರ ಹೋರಾಟಗಳನ್ನು ಮಾಡಿದ್ದೇನೆ, ಎಲ್ಲಾ ರೈತರ ಬೆಂಬಲವು ನನಗೆ ಇದೆ, ತಾಲೂಕಿನ ಅಭಿವೃದ್ಧಿಗೆ ನಾನು ಕಂಕಣ ಬದ್ಧ 2023ರ ಈ ಚುನಾವಣೆಯಲ್ಲಿ ನೀವು ನನಗೆ ಆಶೀರ್ವದಿಸಬೇಕು ಈ ಬಾರಿಯ ಚುನಾವಣೆಯಲ್ಲಿ ನನ್ನನ್ನು ಶಾಸಕನನ್ನಾಗಿ ಮಾಡಿ ನಾನು ಅಭಿವೃದ್ಧಿ ಮಾಡಿ ತೋರಿಸುತ್ತೇನೆ ಎಂದು ಹೇಳಿದರು
ಈ ಸಂದರ್ಭದಲ್ಲಿ ವಕೀಲರಾದ ಅಮರೇಶ್ ಎಚ್, ರವಿ, ಅನಿಲ, ಭೀಮೇಶ್, ರಾಜು, ಹಾಗೂ ಗ್ರಾಮಸ್ಥರು ಇದ್ದರು.
ವರದಿಗಾರ ನಿಂಗರಾಜ ದೊಡ್ಡಮನಿ
Like
Dislike
Love
Angry
Sad
Funny
Wow
Your experience on this site will be improved by allowing cookies.
ಠೀಕೆಗಳು 0