ಜಾಗತೀಕ ತಾಪಮಾನ ಏರಿಕೆ ಹವಾಮಾನ ವೈಪರೀತ್ಯದಿಂದ,ಹತಿವೃಷ್ಠಿ, ಅನಾವೃಷ್ಟಿಗಳಿಂದ ನಮ್ಮನ್ನು ರಕ್ಷಿಸಿಕೊಳ್ಳಲು ಸಸಿ ನೆಟ್ಟು ಗಿಡ ಮರಗಳನ್ನು ಬೆಳೆಸಿ ಎಂದು ಕುಕನೂರು ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ರಾಮಣ್ಣ ದೊಡ್ಡಮನಿ ಹೇಳಿದರು.
ಜಾಗತೀಕ ತಾಪಮಾನ ಏರಿಕೆ ಹವಾಮಾನ ವೈಪರೀತ್ಯದಿಂದ,ಹತಿವೃಷ್ಠಿ, ಅನಾವೃಷ್ಟಿಗಳಿಂದ ನಮ್ಮನ್ನು ರಕ್ಷಿಸಿಕೊಳ್ಳಲು ಸಸಿ ನೆಟ್ಟು ಗಿಡ ಮರಗಳನ್ನು ಬೆಳೆಸಿ ಎಂದು ಕುಕನೂರು ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ರಾಮಣ್ಣ ದೊಡ್ಡಮನಿ ಹೇಳಿದರು.
ಕುಕನೂರು :
ಜಾಗತೀಕ ತಾಪಮಾನ ಏರಿಕೆ ಹವಾಮಾನ ವೈಪರೀತ್ಯದಿಂದ,ಹತಿವೃಷ್ಠಿ, ಅನಾವೃಷ್ಟಿಗಳಿಂದ ನಮ್ಮನ್ನು ರಕ್ಷಿಸಿಕೊಳ್ಳಲು ಸಸಿ ನೆಟ್ಟು ಗಿಡ ಮರಗಳನ್ನು ಬೆಳೆಸಿ ಎಂದು ಕುಕನೂರು ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ರಾಮಣ್ಣ ದೊಡ್ಡಮನಿ ಹೇಳಿದರು.
ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ತಾಲೂಕು ಪಂಚಾಯತ್ ಮತ್ತು ಆದರ್ಶ ವಿದ್ಯಾಲಯ ಇಟಗಿ ಆವರಣದಲ್ಲಿ ಆಯೋಜಿಸಲಾಗಿದ್ದ ಸಸಿ ನೆಡುವ ಕಾರ್ಯಕ್ರಮದಲ್ಲಿ ಸಸಿ ನೆಟ್ಟು ಮಾತನಾಡಿದ ಅವರು ಜಗತ್ತಿನಲ್ಲಿ ಜೀವಿಗಳು ವಾಸಿಸುವ ಒಂದೇ ಒಂದು ಪ್ರದೇಶ ಅಂದರೆ ಅದು ಭೂಪ್ರದೇಶ, ಈ ಭೂಪ್ರದೇಶ ಸಾವಿರಾರು ವರ್ಷಗಳಿಂದ ಇದೆ ಆದರೆ ಕೇವಲ ಕೆಲವು ದಶಕಗಳಲ್ಲಿ ಹಾಳಾಗುತ್ತಿರುವ ಬಗ್ಗೆ ವರದಿಗಳು ಬರುತ್ತಿವೆ. ಭೂಮಿಯ ವಾತಾವರಣವನ್ನು ಸಮತೋಲನ ವಾಗಿಟ್ಟುಕೊಳ್ಳಲು ಸಸ್ಯ ಸಂಕುಲ ಅತ್ಯಗತ್ಯವಾಗಿವೆ,ಜಾಗತೀಕ ತಾಪಮಾನ ಏರಿಕೆ ಹವಾಮಾನ ವೈಪರೀತ್ಯದಿಂದ,ಹತಿವೃಷ್ಠಿ, ಅನಾವೃಷ್ಟಿಗಳಿಂದ ನಮ್ಮನ್ನು ರಕ್ಷಿಸಿಕೊಳ್ಳಲು ಸಸಿ ನೆಟ್ಟು ಗಿಡ ಮರಗಳನ್ನು ಬೆಳೆಸಿ ಬೇಕು, ಪರಿಸರವನ್ನು ಹಾಳು ಮಾಡದೇ ಮುಂದಿನ ಪೀಳಿಗೆಗೆ ಉಳಿಸಿ ಕೊಡುವ ಜವಬ್ದಾರಿ ಇಂದಿನ ನಾಗರೀಕರದ್ದಾಗಿದೆ ಅದಕ್ಕಾಗಿ ಎಲ್ಲರೂ ಒಂದು ಮರವನ್ನು ನೆಡುವ ಪ್ರತಿಜ್ಞೆ ಮಾಡಬೇಕು ಎಂದರು. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ಈ ವರ್ಷ ಒಂದು ಸಾರಿ ಬಳಸುವ ಪ್ಲಾಸ್ಟಿಕ್ ಅನ್ನು ತ್ಯಜಿಸಬೇಕು ಎನ್ನುವ ಗುರಿ ಹೋಂದಲಾಗಿದೆ. ಅದಕ್ಕಾಗಿ ಪರಿಸರವನ್ನು ಉಳಿಸಬೇಕು, ಮರಗಳನ್ನು ಬೆಳಸಬೇಕು ಎಂದರು.
ಆಕರ್ಷಣೆ;
ಆದರ್ಶ ಶಾಲೆಯ ಎಸ್.ಡಿ.ಎಮ್.ಸಿ ಅಧ್ಯಕ್ಷರಾದ ಶ್ರೀಕಾಂತ ಪೂಜಾರ ಪರಿಸರ ಸಂರಕ್ಷಣೆಗೆ ಸಂಬಂದಿಸಿದಂತೆ ಸ್ವತಃ ತಾವೆ ಬರೆದಿರುವ ಗೀತೆಯನ್ನು ಹಾಡಿ ಮಕ್ಕಳನ್ನು ಪರಿಸರ ಸಂರಕ್ಷಣೆ ಮಾಡಲು ಪ್ರೇರೆಪಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶರಣಪ್ಪ ಹಿರೇಮನಿ, ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರು , ಆದರ್ಶ ವಿದ್ಯಾಲಯದ ಪ್ರಿನ್ಸಿಪಾಲರು,ಶಿಕ್ಷಕರು,ಮತ್ತು ವಿದ್ಯಾರ್ಥಿಗಳು ಇದ್ದರು.
ನಿಂಗರಾಜ ದೊಡ್ಡಮನಿ
Like
Dislike
Love
Angry
Sad
Funny
Wow
Your experience on this site will be improved by allowing cookies.
ಠೀಕೆಗಳು 0