ಅಜ್ಞಾನದ ಕತ್ತಲೆಯನ್ನು ಕಳೆದು ಸುಜ್ಞಾನದ ಬೆಳಕನ್ನು ನೀಡಿ ಬದುಕಿನೂದ್ದಕ್ಕೂ ಉಪದೇಶದ ಪ್ರಭೆಯಲ್ಲಿ ಜೀವಿಸುವಂತೆ ಮಾರ್ಗದರ್ಶನ ಮಾಡಿದ ಗುರುವಿನ ಋಣವನ್ನು ತೀರಿಸಲು ಈ ಮರ್ತ್ಯದಲ್ಲಿಯೇ ಏನು ಇಲ್ಲ
ಅಜ್ಞಾನದ ಕತ್ತಲೆಯನ್ನು ಕಳೆದು ಸುಜ್ಞಾನದ ಬೆಳಕನ್ನು ನೀಡಿ ಬದುಕಿನೂದ್ದಕ್ಕೂ ಉಪದೇಶದ ಪ್ರಭೆಯಲ್ಲಿ ಜೀವಿಸುವಂತೆ ಮಾರ್ಗದರ್ಶನ ಮಾಡಿದ ಗುರುವಿನ ಋಣವನ್ನು ತೀರಿಸಲು ಈ ಮರ್ತ್ಯದಲ್ಲಿಯೇ ಏನು ಇಲ್ಲ
ಕೊಪ್ಪಳ
ಅಜ್ಞಾನದ ಕತ್ತಲೆಯನ್ನು ಕಳೆದು ಸುಜ್ಞಾನದ ಬೆಳಕನ್ನು ನೀಡಿ ಬದುಕಿನೂದ್ದಕ್ಕೂ ಉಪದೇಶದ ಪ್ರಭೆಯಲ್ಲಿ ಜೀವಿಸುವಂತೆ ಮಾರ್ಗದರ್ಶನ ಮಾಡಿದ ಗುರುವಿನ ಋಣವನ್ನು ತೀರಿಸಲು ಈ ಮರ್ತ್ಯದಲ್ಲಿಯೇ ಏನು ಇಲ್ಲ. ಶಿಷ್ಯನಾದವನು ಗುರುವನ್ನು ಮೀರಿ ಬೆಳೆದಾಗ ಗುರುವಿಗೆ ಪರಮಾನಂದವಾಗುತ್ತದೆ ಎಂದು ಪ್ರೋ. ಬಿಕೆ ಮಾದಿ ಹೇಳಿದರು.
ಕಾರಟಗಿಯ ಶ್ರೀ ಶರಣಬಸವೇಶ್ವರರ ಶಿಕ್ಷಣ ಸಂಸ್ಥೆಯ 1998-99 ನೇ ಸಾಲಿನ ಹಳೆಯ ವಿಧ್ಯಾರ್ಥಿಗಳ ಗುರುವಂದನೆ ಹಾಗೂ ಸ್ನೇಹಸಮ್ಮಿಲನ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಗುರುವಿನ ಉಪದೇಶವನ್ನು ಲಕ್ಷ್ಯವಹಿಸಿ ಕೇಳಿದ ತಾವು ಜ್ಞಾನದ ಲಕ್ಷಾಧಿಪತಿಗಳಾಗಿದ್ದೀರಿ. ಜಗತ್ತಿನಲ್ಲಿ ಅತ್ಯಂತ ಪವಿತ್ರವಾದುದ್ದು ಜ್ಞಾನ ಒಂದೇ ಅದನ್ನು ಪಡೆಯುವ ಮೂಲಕ ನಾಡಿನಾದ್ಯಂತ ಉತ್ತಮ ಸ್ಥಾನವನ್ನು ಪಡೆದಿದ್ದೀರಿ ನೀವು ಹಮ್ಮಿಕೊಂಡ ಈ ಗುರುವಂದನೆಯ ಮೂಲಕ ನಾವು ನಮ್ಮ ಆಚಾರ್ಯ ಕುಲವನ್ನೇ ಸ್ಮರಿಸಲು ಅವಕಾಶ ಕಲ್ಪಿಸಿದ್ದೀರಿ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷರಾದ ಡಾ. ಎಸ್ ಬಿ ಶೇಟ್ಟರ ಮಾತನಾಡುತ್ತಾ ಸಾಧಿಸುವ ಛಲ ಗುರುಭಕ್ತಿ, ಆತ್ಮವಿಶ್ವಾಸ, ಸತತ ಪರಿಶ್ರಮದಿಂದ ಅಸಾಧ್ಯವಾಗಿರುವುದು ಸಾಧಿಸಲು ಸಾಧ್ಯವೆಂದರು. ತಮ್ಮ ಕೈಯಲ್ಲಿ ಕಲಿತ ವಿಧ್ಯಾರ್ಥಿಗಳು ಸಾಧನೆಗೆ ಅಂದಿನ ಶಿಕ್ಷಕವೃಂದವೇ ಹೆಮ್ಮೆಪಟ್ಟು ಹಿತನುಡಿಗಳನ್ನೇಳಿದರು. ಶಿಕ್ಷಕರಾದ ಬಿ ಎಸ್ ಪೋಲೀಸ್ ಪಾಟೀಲ್, ಪ್ರೋ. ಎಸ್ ಬಿ ಹಿರೇಮಠ, ಮಲ್ಲಿಕಾರ್ಜುನ ಅರಳಿ, ವಿರೇಶ ಮ್ಯಾಗೇರಿ, ನಾಗಾಲಾಂಭಿಕ, ಸಿ ಕೆ ದಿಂಡೂರ, ಮುಖ್ಯೋಪಾಧ್ಯಾಯಿನಿ ವಿಜಯಲಕ್ಷ್ಮಿ ಮೇಲ್ಮನಿ, ಹಂಪೇಶ, ಶಾಂತಯ್ಯ, ಅಮರಗುಂಡಪ್ಪ ಮಾತನಾಡಿದರು. ಪ್ರತಿಯೊಬ್ಬ ವಿದ್ಯಾರ್ಥಿಗಳು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಮಾರ್ಗದರ್ಶನ ಮಾಡಿದ ಗುರುವೃಂದವನ್ನು ಪುಷ್ಪವೃಷ್ಠಿಯೊಂದಿಗೆ ಕರೆತಂದು ಸನ್ಮಾನಿಸಿದರು.
ವರದಿ : ವಿರೇಶ ಹಿರೇಮಠ
Like
Dislike
Love
Angry
Sad
Funny
Wow
Your experience on this site will be improved by allowing cookies.
ಠೀಕೆಗಳು 0