ಬೇಸಿಗೆ ರಜೆಯಲ್ಲಿ ವಿದ್ಯಾರ್ಥಿಗಳು ಓದು ಬರಹವನ್ನು ಮರೆತು ಆಟ ಮತ್ತು ಇನ್ನಿತರ ಚಟುವಟಿಕೆಗಳತ್ತ ಗಮನ ಹರಿಸುವುದನ್ನು ತಪ್ಪಿಸಲು ಬೇಸಿಗೆ ಶಿಬಿರಗಳು ತುಂಬಾ ಸಹಕಾರಿಯಾಗಿವೆ ಇಂತಹ ಬೇಸಿಗೆ ಶಿಬಿರಗಳನ್ನು ಆಯೋಜಿಸಿರುವುದು ಸಂತಸದ ಸಂಗತಿ ಆಗಿದೆ ಎಂದು ಮಹೆಬೂಬ ಸಾಬ್ ಗುಡಿಯಿಂದಲ್ ತಿಳಿಸಿದರು.
ಬೇಸಿಗೆ ರಜೆಯಲ್ಲಿ ವಿದ್ಯಾರ್ಥಿಗಳು ಓದು ಬರಹವನ್ನು ಮರೆತು ಆಟ ಮತ್ತು ಇನ್ನಿತರ ಚಟುವಟಿಕೆಗಳತ್ತ ಗಮನ ಹರಿಸುವುದನ್ನು ತಪ್ಪಿಸಲು ಬೇಸಿಗೆ ಶಿಬಿರಗಳು ತುಂಬಾ ಸಹಕಾರಿಯಾಗಿವೆ ಇಂತಹ ಬೇಸಿಗೆ ಶಿಬಿರಗಳನ್ನು ಆಯೋಜಿಸಿರುವುದು ಸಂತಸದ ಸಂಗತಿ ಆಗಿದೆ ಎಂದು ಮಹೆಬೂಬ ಸಾಬ್ ಗುಡಿಯಿಂದಲ್ ತಿಳಿಸಿದರು.
ಕುಕನೂರು :
ಬೇಸಿಗೆ ರಜೆಯಲ್ಲಿ ವಿದ್ಯಾರ್ಥಿಗಳು ಓದು ಬರಹವನ್ನು ಮರೆತು ಆಟ ಮತ್ತು ಇನ್ನಿತರ ಚಟುವಟಿಕೆಗಳತ್ತ ಗಮನ ಹರಿಸುವುದನ್ನು ತಪ್ಪಿಸಲು ಬೇಸಿಗೆ ಶಿಬಿರಗಳು ತುಂಬಾ ಸಹಕಾರಿಯಾಗಿವೆ ಇಂತಹ ಬೇಸಿಗೆ ಶಿಬಿರಗಳನ್ನು ಆಯೋಜಿಸಿರುವುದು ಸಂತಸದ ಸಂಗತಿವಾಗಿದೆ ಎಂದು ಮಹೆಬೂಬ ಸಾಬ್ ಗುಡಿಯಿಂದಲ್ ತಿಳಿಸಿದರು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಮತ್ತು ಮಂಡಲಗಿರಿ ಗ್ರಾಮ ಪಂಚಾಯಿತಿ ಕಾರ್ಯಾಲಯದಿಂದ 19.05.2023ರಿಂದ 27 5 2023ರ ವರೆಗೆ ಆಯೋಜಿಸಿದ ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರ ಓದುವ ಬೆಳಕು ಕಾರ್ಯಕ್ರಮದ ಉದ್ದೇಶಿಸಿ ಮಾತನಾಡಿದ ಶಿಕ್ಷಕ ಮಹಿಬೂಬ್ ಸಾಬ್ ಗುಡಿಹಿಂದಲ್ ಪ್ರತಿ ವರ್ಷ ಬೇಸಿಗೆ ಅವಧಿಯಲ್ಲಿ ಶೈಕ್ಷಣಿಕ ವಾರ್ಷಿಕ ಮುಕ್ತಾಯಗೊಂಡು ಏಪ್ರಿಲ್ ಮತ್ತು ಮೇ ತಿಂಗಳುಗಳು ಶಾಲಾ ವಿದ್ಯಾರ್ಥಿಗಳಿಗೆ ಸಾಮಾನ್ಯವಾಗಿ ಬೇಸಿಗೆ ರಜಾ ದಿನಗಳಾಗಿರುತ್ತವೆ. ಇಂತಹ ರಜಾ ದಿನಗಳಲ್ಲಿ ಮಕ್ಕಳು ಶೈಕ್ಷಣಿಕ ಚಟುವಟಿಕೆಗಳನ್ನು ಮರೆತು ಆಟೋಟಗಳ ಕಡೆಗೆ ಹೆಚ್ಚು ಒಲವು ತೋರುವ ಸಾಧ್ಯತೆ ಇದ್ದು ಇಂತಹ ಸಮಯದಲ್ಲಿ ತಾಲೂಕ ಪಂಚಾಯಿತಿ ಕಾರ್ಯಾಲಯದ ವತಿಯಿಂದ ಪ್ರತಿ ಗ್ರಾಮಗಳಲ್ಲಿ ಬೇಸಿಗೆ ಶಿಬಿರ ಆಯೋಜಿಸಿರುವುದು ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆಗಳಿಗೆ ಪೂರಕವಾಗಿದೆ ಎಂದು ಶಿಕ್ಷಕ ಮಹಿಬೂಬ್ ಸಾಬ ಗುಡಿ ಇಂದ ಹೇಳಿದರು.
ಮಂಡಲಗಿರಿ ಗ್ರಾಮದ ಗ್ರಂಥಾಲಯದ ಗ್ರಂಥ ಪಾಲಕಿ ಖಾಜಾಬನಿ ಬಾಗಲಿ ಮಾತನಾಡುತ್ತಾ ಮಕ್ಕಳಲ್ಲಿ ಓದುವ ಹವ್ಯಾಸ ಹುಟ್ಟಿಸುವ ಕುರಿತು ಗಣಿತ ಮತ್ತು ವಿಜ್ಞಾನ ವಿಷಯಗಳ ಯೋಜನಾ ಚಟುವಟಿಕೆಗಳ ಓದುವ ಬೆಳಕು ಕಾರ್ಯಕ್ರಮ ಮಕ್ಕಳನ್ನು ಆಕರ್ಷಿಸುತ್ತಿದ್ದು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಿಕೆ ನಮಗೂ ಸಹ ಸಂತಸವನ್ನು ಮೂಡಿಸಿದೆ. ಮಕ್ಕಳು ಮಕ್ಕಳು ದಿನದಿಂದ ದಿನಕ್ಕೆ ಗಣನೀಯ ಪ್ರಮಾಣವಾಗಿ ಹಾಜರಾತಿ ದಾಖಲಾಗುತ್ತಿರುವುದು ಓದುವ ಬೆಳಕು ಕಾರ್ಯಕ್ರಮ ಮಕ್ಕಳ ಮನಸ್ಸನ್ನು ಯಶಸ್ವಿಯಾಗಿ ಮುಟ್ಟಿದೆ ಎನ್ನಬಹುದಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಿಕ್ಷಕಿಯಾದ ಶೃತಿ ಕೆಸರಟ್ಟಿ, ಮಹಾಲಕ್ಷ್ಮಿ ಮಡಿವಾಳರ್ ,ಗ್ರಾಮ ಪಂಚಾಯಿತಿ ಸಿಬ್ಬಂದಿಗಳು ಪಾಲ್ಗೊಂಡಿದ್ದರು.
ನಿಂಗರಾಜ ದೊಡ್ಡಮನಿ
Like
Dislike
Love
Angry
Sad
Funny
Wow
Your experience on this site will be improved by allowing cookies.
ಠೀಕೆಗಳು 0