ಯುವಕರು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ದುಶ್ಚಟಕ್ಕೆ ಬಲಿಯಾಗದಂತೆ ಪಾಲಕರು ಎಚ್ಚರ ವಹಿಸಬೇಕು ಎಂದು ಟಕ್ಕೇದ ದರ್ಗಾದ ಪೀಠಾಧಿಪತಿ ಹಜರತ್ ನಿಜಾಮುದ್ದಿನಷಾ ಆಶ್ರಫಿ ಮಕಾನದಾರ ಹೇಳಿದರು.
ಯುವಕರು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ದುಶ್ಚಟಕ್ಕೆ ಬಲಿಯಾಗದಂತೆ ಪಾಲಕರು ಎಚ್ಚರ ವಹಿಸಬೇಕು ಎಂದು ಟಕ್ಕೇದ ದರ್ಗಾದ ಪೀಠಾಧಿಪತಿ ಹಜರತ್ ನಿಜಾಮುದ್ದಿನಷಾ ಆಶ್ರಫಿ ಮಕಾನದಾರ ಹೇಳಿದರು.
ಗಜೇಂದ್ರಗಡ :
ಯುವಕರು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ದುಶ್ಚಟಕ್ಕೆ ಬಲಿಯಾಗದಂತೆ ಪಾಲಕರು ಎಚ್ಚರ ವಹಿಸಬೇಕು ಎಂದು ಟಕ್ಕೇದ ದರ್ಗಾದ ಪೀಠಾಧಿಪತಿ ಹಜರತ್ ನಿಜಾಮುದ್ದಿನಷಾ ಆಶ್ರಫಿ ಮಕಾನದಾರ ಹೇಳಿದರು.
ಸ್ಥಳೀಯ ಟೆಕ್ಕೇದ ದರ್ಗಾದಲ್ಲಿ ಹಮ್ಮಿಕೊಂಡಿದ್ದ ಮೃಗಾಶೀರ ನಕ್ಷತ್ರ ಪ್ರವೇಶ ನಿಮಿತ್ತ ಅಸ್ತಮಾ ರೋಗಿಗಳಿಗೆ ಮಾತ್ರೆ ವಿತರಣೆ ಸಮಾರಂಭದಲ್ಲಿ ದಿವ್ಯ ಸಾನಿಧ್ಯ ವಹಿಸಿ ಅವರು ಮಾತನಾಡಿತ್ತಾ ಧೂಮಪಾನ ಮಾಡುವುದರಿಂದ ಶ್ವಾಸಕೋಶದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಇದರಿಂದ ಕಫವಾಗಿ ಅಸ್ತಮಾ ರೋಗ ಬರುತ್ತದೆ. ಬೀಡಿ, ಸೀಗರೇಟ್ನಂತಹ ದುಶ್ಚಟಗಳಿಂದ ದೂರವಿರಬೇಕು ಎಂದರು.
ಡಾ. ಶಿವಕುಮಾರ ಹುದ್ದಾರ ಮಾತನಾಡಿ ಅಸ್ತಮಾ ಎನ್ನುವುದು ಕೆಲವು ಜನರನ್ನು ಬಾಲ್ಯದಿಂದ ಹಿಡಿದು ಜೀವಮಾನವಿಡಿ ಕಾಡುತ್ತಲೇ ಇರುತ್ತದೆ. ಇದು ಅನುವಂಶೀಯವಾಗಿಯೂ ಬರಬಹುದು ಅಥವಾ ಬೇರೆ ಕಾರಣಗಳಿಂದಲೂ ಬರಬಹುದಾಗಿದೆ. ಅಸ್ತಮಾ ಇರುವಂತಹ ಜನರು ಕೆಲವೊಂದು ಆಹಾರ ಕ್ರಮದಲ್ಲಿ ಬದಲಾವಣೆ ಮಾಡಿಕೊಂಡರೆ ಅಸ್ತಮಾ ನಿಯಂತ್ರಣದಲ್ಲಿಡಲು ಪ್ರಮುಖ ಪಾತ್ರ ವಹಿಸುತ್ತದೆ. ಅದರಲ್ಲೂ ಅಸ್ತಮಾ ಅತಿಯಾಗಿರುವಂತಹ ರೋಗಿಗಳು ಕೆಲವೊಂದು ಆಹಾರಗಳನ್ನು ಕಡೆಗಣಿಸಲೇಬೇಕು ಎಂದರು.
ಇದೇ ಸಂದರ್ಭದಲ್ಲಿ ಸುತ್ತಮುತ್ತಲಿನಿಂದ ಆಗಮಿಸಿದ್ದ ವರಿಗೆ ೫.೧೫ ಕ್ಕೆ ಮೃಗಶೀರ ಮಳೆ ಪ್ರವೇಶಿಸುವ ವೇಳೆ ದರ್ಗಾದಿಂದ ಔಷಧಿಯನ್ನು ವಿತರಣೆ ಮಾಡಲಾಯಿತು.
ಗ್ರಂಥಪಾಲಕ ಎಸ್ ಐ ಪತ್ತಾರ ಮಾತನಾಡಿದರು. ಮಾಜಿ ಪುರಸಭಾ ಸದಸ್ಯ ಎಂ ಎಸ್ ಮಕಾನದಾರ, ಅಂಜುಮಾನ್ ಇಸ್ಲಾಂ ಕಮೀಟಿ ಕಾರ್ಯದರ್ಶಿ ಮಾಸುಮಲಿ ಮದಗಾರ, ಎಸ್.ಎಸ್.ನರೇಗಲ್ಲ, ಮೈನು ಮಕಾನದಾರ, ಮುರ್ತುಜಖಾದ್ರಿ ಮದಗಾರ, ಪಾಷಾ ಹವಾಲ್ದಾರ್, ಸೇರಿದಂತೆ ಸುತ್ತಮುತ್ತಲಿನ ಭಕ್ತರು ಪಾಲ್ಗೊಂಡಿದ್ದರು. ಕಾರ್ಯಕ್ರಮವನ್ನು ದಾವಲಸಾಬ ತಾಳಿಕೋಟಿ ನಿರೂಪಿಸಿದರು.
Like
Dislike
Love
Angry
Sad
Funny
Wow
Your experience on this site will be improved by allowing cookies.
ಠೀಕೆಗಳು 0