ಚಾಮರಾಜನಗರದಲ್ಲಿ ವಿ.ಸೋಮಣ್ಣ ಚುನಾವಣೆಯಲ್ಲಿ ಸೋಲುವುದಕ್ಕೆ ಪ್ರಮುಖ ಕಾರಣ ರುದ್ರೇಶ್ ಎಂಬ ವಿಚಾರ ಈಗಾಗಲೇ ಬಾರೀ ಸದ್ದು ಮಾಡಿತ್ತು. ಮಾಜಿ ಸಚಿವ ವಿ. ಸೋಮಣ್ಣ ನೇರವಾಗಿಯೇ ಬಿಜೆಪಿ ನಾಯಕರ ಎದುರು ಹೇಳಿಕೊಂಡಿದ್ದರು. ಆದರೂ ವಿಜಯೇಂದ್ರ ಅಧ್ಯಕ್ಷರಾದ ಬಳಿಕ ರುದ್ರೇಶ್ ಅವರನ್ನು ತಮ್ಮ ಹಿಂದೆ ಮುಂದೆಯೇ ಬಿಟ್ಟುಕೊಂಡು ರಾಜ್ಯ ಸುತ್ತುತ್ತಿದ್ದಾರೆ.
ಚಾಮರಾಜನಗರ :
ಚಾಮರಾಜನಗರದಲ್ಲಿ ಚುನಾವಣೆಯಲ್ಲಿ ಸೋಲುವುದಕ್ಕೆ ಪ್ರಮುಖ ಕಾರಣ ರುದ್ರೇಶ್ ಎಂಬ ವಿಚಾರ ಈಗಾಗಲೇ ಬಾರೀ ಸದ್ದು ಮಾಡಿತ್ತು. ಮಾಜಿ ಸಚಿವ ವಿ. ಸೋಮಣ್ಣ ನೇರವಾಗಿಯೇ ಬಿಜೆಪಿ ನಾಯಕರ ಎದುರು ಹೇಳಿಕೊಂಡಿದ್ದರು. ಆದರೂ ವಿಜಯೇಂದ್ರ ಅಧ್ಯಕ್ಷರಾದ ಬಳಿಕ ರುದ್ರೇಶ್ ಅವರನ್ನು ತಮ್ಮ ಹಿಂದೆ ಮುಂದೆಯೇ ಬಿಟ್ಟುಕೊಂಡು ರಾಜ್ಯ ಸುತ್ತುತ್ತಿದ್ದಾರೆ. ನಾವು ಕೊಟ್ಟ ದೂರಿಗೆ ಯಾವುದೇ ಬೆಲೆ ಇಲ್ಲವೇ ಎನ್ನುವ ಪ್ರಶ್ನೆ ಎದುರಾಗಿತ್ತು. ಆ ಬಳಿಕ ದೆಹಲಿಗೂ ತೆರಳಿ ಹೈಕಮಾಂಡ್ ಎದುರಲ್ಲೂ ಅದೇ ದೂರು ಸಲ್ಲಿಸಿದ್ದರು. ಈಗ ಎಲ್ಲರೂ ಸಂಬಂಧಗಳನ್ನು ಸುಧಾರಿಸಿಕೊಳ್ಳಲು ಮುಂದಾಗಿದ್ದಾರೆ.
ಚಾಮರಾಜನಗರದಲ್ಲಿ ಮಾಧ್ಯಮಗಳ ಎದುರು ಮಾತನಾಡಿರುವ , ಚುನಾವಣೆ ವೇಳೆ ನಾನು ಬಂದಿರಲೂ ಇಲ್ಲ. ಚುನಾವಣೆ ಸಂದರ್ಭದಲ್ಲಿ ನಾನು ಕಾರ್ಯಕರ್ತರನ್ನ ಭೇಟಿಯೂ ಆಗಿರಲಿಲ್ಲ. ಏನೂ ಹೇಳಿಲ್ಲ. ಒಂದು ವೇಳೆ ಸೋಮಣ್ಣ ನನ್ನನ್ನ ಕರೆದಿದ್ರೆ ನಾನೇ ಬಂದು ಪ್ರಚಾರ ಮಾಡುತ್ತಿದ್ದೆ. ವಿ.ಸೋಮಣ್ಣ ದೊಡ್ಡವರು. ಸೋಮಣ್ಣ ಎಲ್ಲೂ ನನ್ನ ಹೆಸರನ್ನ ಹೇಳಿಲ್ಲ. ನಾನೇ ಹೋಗಿ ಸೋಮಣ್ಣನವರ ಬಳಿ ಮಾತನಾಡುತ್ತೇನೆ. ನನ್ನಿಂದ ಏನು ತಪ್ಪಾಗಿದೆ ಎಂದು ಕೇಳುತ್ತೇನೆ. ಸೋಮಣ್ಣನವರು ಯಾರ ಬಗ್ಗೆ ಮಾತನಾಡಿದ್ದಾರೆ ಏನು ಹೇಳಿದ್ದಾರೆ ಎಂಬುದು ನನಗೆ ಗೊತ್ತಿಲ್ಲ. ನಮ್ಮದು ರಾಷ್ಟ್ರೀಯ ಪಕ್ಷ ಹಿರಿಯ ನಾಯಕರಿದ್ದಾರೆ ಅವರ ಅಣತಿಯಂತೆ ನಡೆಯಬೇಕು. ಇಲ್ಲಿ ವೈಯಕ್ತಿಕ ಹೇಳಿಕೆಗೆ ಅವಕಾಶವಿಲ್ಲ ಎಂದಿದ್ದಾರೆ.
ಭಾರತೀಯ ಜನತಾ ಪಕ್ಷದಲ್ಲಿ ನಾನು ಹಲವು ವರ್ಷದಿಂದ ಪಕ್ಷದ ಪರವಾಗಿ ಓಡಾಡುತ್ತಿದ್ದೇನೆ. ಯಾವತ್ತೂ ಪಕ್ಷ ವಿರೋಧಿ ಕೆಲಸ ಮಾಡಿಲ್ಲ. ಮಾಜಿ ಸಚಿವ ವಿ ಸೋಮಣ್ಣ ವಿರುದ್ದವೂ ಮಾತನಾಡಿಲ್ಲ ಎಂದಿದ್ದಾರೆ. ಇನ್ನು ಚಾಮರಾಜನಗರ ವಿಧಾನಸಭಾ ಚುನಾವಣೆಯ ಸೋಲಿನ ಬಳಿಕ ಮಾಜಿ ಸಚಿವ ವಿ.ಸೋಮಣ್ಣ ರುದ್ರೇಶ್ ವಿರುದ್ಧ ಪರೋಕ್ಷವಾಗಿ ಆಕ್ರೋಶ ಹೊರ ಹಾಕಿದ್ದರು. ನನ್ನ ಚುನಾವಣೆ ಸೋಲಿಗೆ ಯಾರೆಲ್ಲ ಕೆಲಸ ಮಾಡಿದ್ದಾರೆ ಎಂದು ನನಗೆ ಚೆನ್ನಾಗಿ ಗೊತ್ತಿದೆ ಎಂದು ಮಾರ್ಮಿಕವಾಗಿ ಹೇಳಿದ್ದರು. ಬಿಜೆಪಿ ರಾಜ್ಯಾಧ್ಯಕ್ಷರಾಗಿರುವ ಬಿ.ವೈ ವಿಜಯೇಂದ್ರ ಆಪ್ತ ರುದ್ರೇಶ್ ಚಾಮರಾಜನಗರದಲ್ಲಿ ಪ್ರಬಲವಾಗಿದ್ದು, ಪರೋಕ್ಷವಾಗಿ ಸೋಮಣ್ಣ ವಿರುದ್ಧ ರುದ್ರೇಶ್ ಕೆಲಸ ಮಾಡಿದ್ದರು ಎನ್ನುವುದು ವಿ.ಸೋಮಣ್ಣ ಆರೋಪವಾಗಿತ್ತು. ಇದೀಗ ರುದ್ರೇಶ್ ಸೋಮಣ್ಣರನ್ನು ಭೇಟಿ ಮಾಡಲು ಮುಂದಾಗಿದ್ದಾರೆ.
ಹೈಕಮಾಂಡ್ ಭೇಟಿ ಬಳಿಕ ಎಲ್ಲವೂ ಫಲಪ್ರದವಾಗಿದೆ ಎಂದಿದ್ದರು ವಿ ಸೋಮಣ್ಣ. ಇದೀಗ ವಿಜಯೇಂದ್ರ ಬಳಗ ಸೋಮಣ್ಣ ಜೊತೆಗೆ ಹೊಂದಾಣಿಕೆಯ ಪ್ರಕ್ರಿಯೆಗಳು ಆರಂಭ ಆಗಿವೆ. ಇತ್ತೀಚಿಗಷ್ಟೇ ಸೋಮಣ್ಣ ಜೊತೆಗೆ ನಾನೂ ಮಾತನಾಡುತ್ತೇನೆ ಎಂದಿದ್ದರು ಬಿ.ವೈ ವಿಜಯೇಂದ್ರ. ಮುಂದಿನ ದಿನಗಳಲ್ಲಿ ಸೋಮಣ್ಣ ಅವರನ್ನು ಒಟ್ಟುಗೂಡಿಸಿಕೊಂಡು ಲೋಕಸಭಾ ಚುನಾವಣೆ ಎದುರಿಸಲು ಹೈಕಮಾಂಡ್ ನಾಯಕರ ಸೂಚನೆ ಬಂದಿರುವ ಬೆನ್ನಲ್ಲೇ ಬಂಡಾಯ ಶಮನ ಮಾಡುವ ಕೆಲಸ ಶುರುವಾಗಿದೆ ಎನ್ನಬಹುದು. ಲಿಂಗಾಯತ ಸುಮುದಾಯದ ಮತಬ್ಯಾಂಕ್ ಮೇಲೆ ಕಣ್ಣಿಟ್ಟಿರುವ ಭಾರತೀಯ ಜನತಾ ಪಾರ್ಟಿ ಸಮುದಾಯದ ನಾಯಕರ ಜೊತೆಗೆ ಹೊಂದಾಣಿಕೆ ಮಾಡಿಕೊಂಡು ಹೋಗುವಂತೆ ವಿಜಯೇಂದ್ರಗೆ ಸೂಚನೆ ಬಂದಿರುವ ಪರಿಣಾಮ ಎಲ್ಲವೂ ಸುಖಾಂತ್ಯದ ಕಡೆಗೆ ಸಾಗುತ್ತಿದೆ ಎನ್ನಬಹುದು.
ಠೀಕೆಗಳು 0