ವಿಶ್ವ ಪರಿಸರ ದಿನದ ನಿಮಿತ್ಯ ಕುಕನೂರು- ಯಲಬುರ್ಗಾ ತಾಲೂಕಿನಾದ್ಯಂತ 40,000 ಸಸಿ ನೆಡುವ ಗುರಿ ಹೊಂದಲಾಗಿದೆ ಎಂದು ವಲಯ ಅರಣ್ಯಾಧಿಕಾರಿ (ಸಾಮಾಜಿಕ ಅರಣ್ಯ ಇಲಾಖೆ) ಅನಂತಕುಮಾರ್ ಪಾಕಿ ತಿಳಿಸಿದರು.
ವಿಶ್ವ ಪರಿಸರ ದಿನದ ನಿಮಿತ್ಯ ಕುಕನೂರು- ಯಲಬುರ್ಗಾ ತಾಲೂಕಿನಾದ್ಯಂತ 40,000 ಸಸಿ ನೆಡುವ ಗುರಿ ಹೊಂದಲಾಗಿದೆ ಎಂದು ವಲಯ ಅರಣ್ಯಾಧಿಕಾರಿ (ಸಾಮಾಜಿಕ ಅರಣ್ಯ ಇಲಾಖೆ) ಅನಂತಕುಮಾರ್ ಪಾಕಿ ತಿಳಿಸಿದರು.
ಕುಕನೂರು :
ವಿಶ್ವ ಪರಿಸರ ದಿನದ ನಿಮಿತ್ಯ ಕುಕನೂರು- ಯಲಬುರ್ಗಾ ತಾಲೂಕಿನಾದ್ಯಂತ 40,000 ಸಸಿ ನೆಡುವ ಗುರಿ ಹೊಂದಲಾಗಿದೆ ಎಂದು ವಲಯ ಅರಣ್ಯಾಧಿಕಾರಿ (ಸಾಮಾಜಿಕ ಅರಣ್ಯ ಇಲಾಖೆ) ಅನಂತಕುಮಾರ್ ಪಾಕಿ ತಿಳಿಸಿದರು.
ಸರ್ಕಾರದ ಆದೇಶದಂತೆ ಗಿಡ ಬೆಳೆಸಿ ಪರಿಸರ ಉಳಿಸಿ ಎಂಬ ಘೋಷವಾಕ್ಯದೊಂದಿಗೆ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಜೂನ್ ಮಾಸಾಂತ್ಯದ ವರೆಗೆ ಯಲಬುರ್ಗಾ ಕುಕನೂರು ತಾಲೂಕುಗಳು ಸೇರಿದಂತೆ ವನಮಹೋತ್ಸವ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದ್ದು ಮಾಸಾಂತ್ಯದ ಒಳಗೆ ಕನಿಷ್ಠ 40,000 ಸಸಿ ನೆಡುವ ಗುರಿಯನ್ನು ಅರಣ್ಯ ಇಲಾಖೆ ಹೊಂದಿದೆ ಎಂದು ತಿಳಿಸಿದರು.
ಈಗಾಗಲೇ ಎರಡು ತಾಲೂಕುಗಳ ವಿವಿಧ ಇಲಾಖೆಯ ವತಿಯಿಂದ ಸಸಿ ನೆಡುವ ಉದ್ದೇಶದಿಂದ ಸಸಿಗಳ ಬೇಡಿಕೆ ಹೆಚ್ಚಾಗಿ ಬಂದಿದ್ದು ಅವರ ಬೇಡಿಕೆಗೆ ತಕ್ಕಂತೆ ಸಸಿಗಳ ಪೂರೈಕೆ ಮಾಡುವ ನಿಟ್ಟಿನಲ್ಲಿ ಕೊರತೆ ಉಂಟಾದರೂ ಸಹ ಮಾಸಾಂತ್ಯದ ಒಳಗೆ ಬೇಡಿಕೆಗಿಂತ ಹೆಚ್ಚು ಸಸಿಗಳ ಪೂರೈಕೆ ಮಾಡಿ ತಾಲೂಕುಗಳಲ್ಲಿ ಸಸಿ ನೆಡುವ ಕಾರ್ಯಕ್ರಮದೊಂದಿಗೆ ಸಸಿಗಳು ಹಾಳಾಗದಂತೆ ರಕ್ಷಣೆ ಮಾಡಿ ಬೆಳೆಸಲು ಬೇಕಾದ ಅವಶ್ಯಕತೆಗಳು ಮಾಡಿಕೊಳ್ಳಲು ಇಲಾಖೆ ಸಿಬ್ಬಂದಿಗಳಿಗೆ ತಿಳಿಸಿದ್ದು ಸುರಕ್ಷಿತವಾಗಿ ಸಸಿಗಳು ಬೆಳೆದು ಮರವಾಗಲು ಬೇಕಾಗಿರುವ ತಯಾರಿಯನ್ನು ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.
ನಿಂಗರಾಜ ದೊಡ್ಡಮನಿ
Like
Dislike
Love
Angry
Sad
Funny
Wow
Your experience on this site will be improved by allowing cookies.
ಠೀಕೆಗಳು 0