ರಾಜೂರು ಗ್ರಾಮದಲ್ಲಿ ನಡೆದ ಆಪ್ ಚುನಾವಣಾ ಮತಯಾಚನೆಯ ಸಂದರ್ಭದ
ರಾಜೂರು ಗ್ರಾಮದಲ್ಲಿ ನಡೆದ ಆಪ್ ಚುನಾವಣಾ ಮತಯಾಚನೆಯ ಸಂದರ್ಭದ
ಗಜೇಂದ್ರಗಡ : ಬಿಜೆಪಿ ಹಾಗೂ ಕಾಂಗ್ರೆಸ್ ರೋಣ ವಿಧಾನಸಭಾ ಕ್ಷೇತ್ರದಲ್ಲಿ ಹೊಂದಾಣಿಕೆ ರಾಜಕಾರಣ ಮಾಡುತ್ತಾ ಬಂದಿದ್ದಾರೆ.ಒಮ್ಮೆ ನೀನು ಇನ್ನೊಮ್ಮೆ ನಾನು ಎಂಬತೆ ಆಡಳಿತ ನಡೆಸಿದ್ದಾರೆ.ಅವರ ಆಡಳಿತದಲ್ಲಿ ಇವರು ಧ್ವನಿ ಎತ್ತಲ್ಲ ಇವರ ಆಡಳಿತದಲ್ಲಿ ಅವರು ಧ್ವನಿ ಎತ್ತಲ್ಲ ಎಂದು ಆಪ್ ಅಭ್ಯರ್ಥಿ ಆನೇಕಲ್ ದೊಡ್ಡಯ್ಯ ಹೇಳಿದರು.
ನಗರ ಸಮೀಪದ ರಾಜೂರು ಗ್ರಾಮದಲ್ಲಿ ನಡೆದ ಆಪ್ ಚುನಾವಣಾ ಮತಯಾಚನೆಯ ಸಂದರ್ಭದಲ್ಲಿ ಮಾತನಾಡಿದರು.
ದೆಹಲಿ, ಪಂಜಾಬಗಳಲ್ಲಿ ಈಗಾಗಲೇ ಸುಬೀಕ್ಷ ಆಡಳಿತ ನಡೆಸುತ್ತಿರುವ ಆಮ್ ಆದ್ಮಿ ಪಕ್ಷಕ್ಕೆ ಈ ಬಾರಿ ಕರ್ನಾಟಕದಲ್ಲಿ ರೋಣ ವಿಧಾನಸಭಾ ಕ್ಷೇತ್ರದಿಂದನೆ ಗೆಲುವುವಿನ ಮೂಲಕ ಆಪ್ ಆಡಳಿತಕ್ಕೆ ತಮ್ಮಲ್ಲೆರ ಆರ್ಶಿವಾದ ಅತ್ಯಗತ್ಯವಾಗಿದೆ.ಆಪ್ ಪಕ್ಷವೂ ಶೈಕ್ಷಣಿಕವಾಗಿ, ಆರೋಗ್ಯಕ್ಕಾಗಿ, ಸಾಮಾಜಿಕವಾಗಿ, ಧಾರ್ಮಿಕವಾಗಿ ಸಾಕಷ್ಟು ಅಭಿವೃದ್ದಿಗಳನ್ನು ಮಾಡುವ ಗುರಿಯನ್ನು ಇಟ್ಟುಕೊಂಡಿದ್ದೇವೆ.ಅದಕ್ಕಾಗಿ ತಾವೆಲ್ಲರೂ ಈ ಬಾರಿ ಆಮ್ ಆದ್ಮಿ ಪಕ್ಷದ ಚಿನ್ಹೆ ಪೊರಕೆಯ ಗುರುತಿಗೆ ಹೆಚ್ಚಿನ ಮತಗಳನ್ನು ಹಾಕುವ ಮೂಲಕ ಆರ್ಶಿವಾದ ಮಾಡಬೇಕಾಗಿದೆ ಎಂದರು.
ಬಳಿಕ ಆಪ್ ಮುಖಂಡ ಶರಣಪ್ಪ ದೊಣ್ಣೆಗುಡ್ಡ ಮಾತನಾಡಿ ನಾನು ಸುಮಾರು ವರ್ಷಗಳಿಂದ ರಾಜಕೀಯ ಮಾಡುತ್ತಾ ಬಂದಿದ್ದೇನೆ .ಆದರೆ ನಮ್ಮ ಸಮುದಾಯದವರಿಗೆ ಅದರಲ್ಲೂ ಉ.ಕ.ಭಾಗದಲ್ಲಿನ ಹಾಲುಮತ ಸಮುದಾಯದವರಿಗೆ ರಾಜಕೀಯವಾಗಿ ಹತ್ತಿಕ್ಕುವ ಕೆಲಸ ಕಾಂಗ್ರೆಸ್ ಬಿಜೆಪಿ ಮಾಡುತ್ತಾ ಬಂದಿದೆ.ರೋಣ ವಿಧಾನಸಭಾ ಕ್ಷೇತ್ರಕ್ಕೆ ಹಾಲುಮತ ಸಮುದಾಯದ ಮುಖಂಡ ಸಾಮಾಜಿಕ ಕಳಕಳಿ ಹೊಂದಿ ರೋಣಕ್ಕೆ ಆಪ್ ಪಕ್ಷದಿಂದ ಸ್ಪರ್ಧೆ ಮಾಡಿದ್ದಾರೆ.ಈ ಬಾರಿ ಸರ್ವ ಸಮುದಾಯದವರು ಅವರನ್ನು ಬೆಂಬಲಿಸಿ ಈ ಬಾರಿ ಹೊಸ ಮುಖವನ್ನು ಪರಿಚಯಿಸೋಣ ಎಂದರು.
ಇದೇ ಸಂದರ್ಭದಲ್ಲಿ ಕಳಕನಗೌಡ ಗೌಡ್ರ, ಅನೀಲ ಕರ್ಣೆ,ಪ್ರಕಾಶ ಭಜೇಮ್ಮನವರ,ಶರಣಪ್ಪ ತಳವಾರ,ಶರಣಪ್ಪ ಡೊಳ್ಳಿನ, ಸೇರಿದಂತೆ ಹಲವರು ಇದ್ದರು.
Like
Dislike
Love
Angry
Sad
Funny
Wow
Your experience on this site will be improved by allowing cookies.
ಠೀಕೆಗಳು 0