ತಾಲೂಕಿನ ಇಟಗಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ದೇವಸ್ಥಾನದಲ್ಲಿ ದಿನಾಂಕ 22 5 2023ನೇ ಸೋಮವಾರದಂದು ನಾಗದೇವರು ಮತ್ತು ನಾಗ ಚೌಡೇಶ್ವರಿ ಅಮ್ಮನವರ ಮೂರ್ತಿ ಪ್ರತಿಷ್ಠಾಪನೆ ಕಾರ್ಯ ನಡೆಯಲಿದೆ ಎಂದು ಶ್ರೀ ಗೋವಿಂದರಾವ್ ಸರ್ವೆ ಸ್ಮಾರಕ ಸಾಮಾಜಿಕ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನ ಟ್ರಸ್ಟ್ ನ ಮುಖ್ಯಸ್ಥರಾದ ರಮೇಶ್ ಬಾಬು ಸರ್ವೆ ತಿಳಿಸಿದರು.
ಕುಕನೂರ :
ತಾಲೂಕಿನ ಇಟಗಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ದೇವಸ್ಥಾನದಲ್ಲಿ ದಿನಾಂಕ 22 5 2023ನೇ ಸೋಮವಾರದಂದು ನಾಗದೇವರು ಮತ್ತು ನಾಗ ಚೌಡೇಶ್ವರಿ ಅಮ್ಮನವರ ಮೂರ್ತಿ ಪ್ರತಿಷ್ಠಾಪನೆ ಕಾರ್ಯ ನಡೆಯಲಿದೆ ಎಂದು ಶ್ರೀ ಗೋವಿಂದರಾವ್ ಸರ್ವೆ ಸ್ಮಾರಕ ಸಾಮಾಜಿಕ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನ ಟ್ರಸ್ಟ್ ನ ಮುಖ್ಯಸ್ಥರಾದ ರಮೇಶ್ ಬಾಬು ಸರ್ವೆ ತಿಳಿಸಿದರು.
ಇಟಗಿಯ ನೂತನ ದೇವಾಲಯದಲ್ಲಿ ಮಾತನಾಡಿದ ಅವರು ಈ ದೇವಸ್ಥಾನವು ದಿನಾಂಕ 20-5-2023 ರಿಂದ ಹೊಸದಾಗಿ ನಿರ್ಮಿಸಲಾಗಿದ್ದು ದೇವಸ್ಥಾನದ ಉದ್ಘಾಟನಾ ದಿನದಿಂದ ದೇವಸ್ಥಾನದ ಆವರಣದಲ್ಲಿ ವಿವಿಧ ಹೋಮ ಹವನ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಮೂರ್ತಿ ಪ್ರತಿಷ್ಠಾಪನೆ ದಿನವಾದ ಸೋಮವಾರ 22-5-23 ರಂದು ಉಡುಪಿ ಚಕ್ರ ಪೀಠ ಸುರಪೂಜಿತೆ ಶ್ರೀ ಆದಿಶಕ್ತಿ ಕೇಂದ್ರದ ಧರ್ಮದರ್ಶಿಗಳಾದ ಶ್ರೀ ರಮಾನಂದ ಗುರೂಜಿಗಳ ಮಾರ್ಗದರ್ಶನದಂತೆ ಚಂಡಿಕಾಯಾಗ ಹಾಗೂ ಇತರೆ ಧಾರ್ಮಿಕ ಸದ್ಭಕ್ತರು ಸಹಸ್ರ ಸಂಖ್ಯೆಯಲ್ಲಿ ಆಗಮಿಸಿ ಅಮ್ಮನವರ ಕೃಪೆಗೆ ಪಾತ್ರರಾಗಬೇಕೆಂದು ತಿಳಿಸಿದರು.
ಠೀಕೆಗಳು 0