ನಗರದ ಎಪಿಎಂಸಿ ಯಲ್ಲಿನ ಗಣೇಶನ ದೇವಾಲಯದಿಂದ ಪ್ರಾರಂಭವಾದ ಯುವ ಪಡೆಯ ರೋಡ್ ಶೋ ಕಾಲಕಾಲೇಶ್ವರ ವೃತ್ತ, ಜೋಡು ರಸ್ತೆ, ಶಿವಾಜಿ ವೃತ್ತ, ಅಂಬೇಡ್ಕರ್ ವೃತ್ತ, ದುರ್ಗಾ ಸರ್ಕಲ ಮಾರ್ಗವಾಗಿ ನಗರದ ಪ್ರಮುಖ ಬೀದಿಗಳಲ್ಲಿ ಪಾದಯಾತ್ರೆಯ ಮೂಲಕ ರೋಡ್ ಶೋ ನಡೆಸಿದರು.
ನಗರದ ಎಪಿಎಂಸಿ ಯಲ್ಲಿನ ಗಣೇಶನ ದೇವಾಲಯದಿಂದ ಪ್ರಾರಂಭವಾದ ಯುವ ಪಡೆಯ ರೋಡ್ ಶೋ ಕಾಲಕಾಲೇಶ್ವರ ವೃತ್ತ, ಜೋಡು ರಸ್ತೆ, ಶಿವಾಜಿ ವೃತ್ತ, ಅಂಬೇಡ್ಕರ್ ವೃತ್ತ, ದುರ್ಗಾ ಸರ್ಕಲ ಮಾರ್ಗವಾಗಿ ನಗರದ ಪ್ರಮುಖ ಬೀದಿಗಳಲ್ಲಿ ಪಾದಯಾತ್ರೆಯ ಮೂಲಕ ರೋಡ್ ಶೋ ನಡೆಸಿದರು.
ಗಜೇಂದ್ರಗಡ :
ರೋಣ ವಿಧಾನಸಭಾ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಗಜೇಂದ್ರಗಡ ನಗರದಲ್ಲಿ ಬಿಜೆಪಿ ಅಭ್ಯರ್ಥಿ ಕಳಕಪ್ಪ ಬಂಡಿ ಪರವಾಗಿ ಸುಪುತ್ರರಾದ ಶಿವರಾಜ್ ಬಂಡಿ, ಕರಣ ಬಂಡಿ ನೇತೃತ್ವದಲ್ಲಿ ಭರ್ಜರಿ ರೋಡ್ ಶೋ ನಡೆಯಿತು.
ನಗರದ ಎಪಿಎಂಸಿ ಯಲ್ಲಿನ ಗಣೇಶನ ದೇವಾಲಯದಿಂದ ಪ್ರಾರಂಭವಾದ ಯುವ ಪಡೆಯ ರೋಡ್ ಶೋ ಕಾಲಕಾಲೇಶ್ವರ ವೃತ್ತ, ಜೋಡು ರಸ್ತೆ, ಶಿವಾಜಿ ವೃತ್ತ, ಅಂಬೇಡ್ಕರ್ ವೃತ್ತ, ದುರ್ಗಾ ಸರ್ಕಲ ಮಾರ್ಗವಾಗಿ ನಗರದ ಪ್ರಮುಖ ಬೀದಿಗಳಲ್ಲಿ ಪಾದಯಾತ್ರೆಯ ಮೂಲಕ ರೋಡ್ ಶೋ ನಡೆಸಿದರು.
ರೋಡ ಶೋ ಉದ್ದಕ್ಕೂ ಮೋದಿ, ಅಮಿತ್ ಶಾ, ಯಡಿಯೂರಪ್ಪ, ಕಳಕಪ್ಪ ಬಂಡಿ ಸೇರಿದಂತೆ ಬಿಜೆಪಿಯ ಹಿರಿಯ ದುರೀಣರಿಗೆ ಜಯಕಾರ ಹಾಕುತ್ತಾ ಅಣ್ಣಾ ಕಳಕಪ್ಪಣ್ಣ ಎಂದು ಜಯಗೋಷಗಳನ್ನು ಹಾಕಿದರು.
ಬಳಿಕ ಬಿಜೆಪಿ ಅಭ್ಯರ್ಥಿಯ ಕಳಕಪ್ಪ ಬಂಡಿಯವರ ಪುತ್ರ ಶಿವರಾಜ್ ಬಂಡಿ ಮಾತನಾಡಿ ಈ ಬಾರಿ ರೋಣ ಮತಕ್ಷೇತ್ರದಲ್ಲಿ ಬಿಜೆಪಿ ಅಭೂತಪೂರ್ವವಾದ ಜಯವನ್ನು ಸಾಧಿಸಲಿದೆ ಯುವ ಪಡೆ ಭರ್ಜರಿಯಾದ ಮತ ಶಿಕಾರಿಯನ್ನು ಮಾಡುತ್ತಿದ್ದಾರೆ ಈ ಬಾರಿ ಕಳಕಪ್ಪ ಬಂಡಿಯವರ ಗೆಲುವು ನಿಶ್ಚಿತ. 2018 ರಲ್ಲಿ ಹೇಳಿದಂತೆ ಈ ಬಾರಿ ರೋಣದ ಕಾಂಗ್ರೆಸ್ ಅಭ್ಯರ್ಥಿಯನ್ನ ಮನೆಯಲ್ಲೇ ಕೂರುವಂತೆ ಯುವ ಮತದಾರರೆಲ್ಲರೂ ಪಣ ತೊಡಬೇಕಾಗಿದೆ ಎಂದರು.
ಬಳಿಕ ನಗರ ಘಟಕದ ಅಧ್ಯಕ್ಷ ರಾಜೇಂದ್ರ ಘೋರ್ಪಡೆ ಮಾತನಾಡಿ ಕಳಕಪ್ಪ ಬಂಡಿ ಅವರು ರೋಣ ಮತಕ್ಷೇತ್ರಕ್ಕೆ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ ಅವರ ಅಭಿವೃದ್ಧಿಗಳೇ ಅವರ ಗೆಲುವಿನ ಶ್ರೀರಕ್ಷೆಯಾಗಿದೆ ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ಧಾರ್ಮಿಕವಾಗಿ ಹಾಗೂ ಹಳ್ಳಿಹಳ್ಳಿಗಳಲ್ಲಿ ಸುಗಮ ಸಂಚಾರಕ್ಕಾಗಿ ಅನೇಕ ರಸ್ತೆಗಳನ್ನ ದುರಸ್ತಿ ಕಾರ್ಯಗಳನ್ನ ಮಾಡಿಸಿ ಸುಗಮ ಸಂಚಾರಕ್ಕೆ ಅನುಕೂಲಕರ ಮಾಡಿಕೊಟ್ಟಿದ್ದಾರೆ ಈ ಬಾರಿ ಕಳಕಪ್ಪಣ್ಣ ಬಂಡಿ ಅವರ ಗೆಲುವು ಶತಸಿದ್ಧ ಎಂದರು.
ಬಿಜೆಪಿ ಯುವ ಘಟಕದ ಅಧ್ಯಕ್ಷ ಸುನೀಲ ಸಕ್ರಿ ಮಾತನಾಡಿ ಬಿಜೆಪಿ ಪಕ್ಷದಲ್ಲೇ ಮಾತ್ರ ಹೆಚ್ಚಿನ ಸಂಖ್ಯೆಯಲ್ಲಿ ಯುವಕರಿಗೆ ಪ್ರಾಧಾನ್ಯತೆ ನೀಡಲಾಗುತ್ತದೆ ಅದರಂತೆ ಯುವಕರೆಲ್ಲರೂ ಕೂಡಿ ಈ ಬಾರಿ ರೋಣ ಮತಕ್ಷೇತ್ರದಲ್ಲಿ ಕಮಲವನ್ನ ಮತ್ತೊಮ್ಮೆ ಅರಳಿಸಬೇಕಾಗಿದೆ ಹಿಂದುತ್ವದ ಪರವಾಗಿರುವಂಥ ಬಿಜೆಪಿ ಪಕ್ಷಕ್ಕೆ ತಾವೆಲ್ಲರೂ ತಮ್ಮ ಅತ್ಯಮೂಲ್ಯ ಮತವನ್ನ ಹಾಕಿಸುವ ಮೂಲಕ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಶ್ರಮಿಸಬೇಕಾಗಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಸಂಜು ಜೋಶಿ ಮಂಜುನಾಥ್ ಅಜ್ಮೀರ್ ರಾಜು ಕೊಟಗಿ,ಉಮೇಶ ಪಾಟೀಲ, ಮಹಾಂತೇಶ್ ಗಂದಧ,ಶಂಕರ ಇಂಜನಿ, ಬುಡ್ಡಪ್ಪ ಮೂಲಿಮನಿ,ಸಂತೋಷ ವಸ್ತ್ರದ,ಶಿವಾನಂದ ಅರಳಿ, ಗಣೇಶ ದಿವಾಣದ, ರವಿ ದಿವಾಣದ, ಮಲ್ಲು ಗೌಡರ, ಮುತ್ತು ಗೌಡರ, ರೂಪ್ಲೇಶ ರಾಠೋಡ, ಗಣೇಶ ಚವ್ಹಾಣ, ಶರಣಪ್ಪ ಚವ್ಹಾಣ, ಸೇರಿದಂತೆ ನೂರಾರು ಯುವಕರು ಇದ್ದರು.
Like
Dislike
Love
Angry
Sad
Funny
Wow
Your experience on this site will be improved by allowing cookies.
ಠೀಕೆಗಳು 0