ನೆರೇಗಾ ಯೋಜನೆಯು ಬಡವರು ನಗರ ಪ್ರದೇಶಗಳಿಗೆ ಗುಳೆ ಹೋಗುವುದನ್ನು ತಪ್ಪಿಸಿ ಗ್ರಾಮೀಣ ಪ್ರದೇಶಗಳಲ್ಲಿ ನೇಲೆಯುರುವಂತೆ ಮಾಡಿ ಗ್ರಾಮೀಣ ಪ್ರದೇಶದ ಜಲಮೂಲಗಳನ್ನು ಉನ್ನತಿಕರಿಸಿ ಜಲ ಮೂಲಗಳ ಸಂರಕ್ಷಣೆ ಮಾಡುವ ಕಾರ್ಯವನ್ನು ಮಾಡುತ್ತಿದೆ ಎಂದು ತಾಲೂಕ ನರೇಗಾ ಐ.ಇ.ಸಿ ಸಂಯೋಜಕ ಲಕ್ಷ್ಮಣ ಕೆರಳ್ಳಿ ಹೇಳಿದರು.
ನೆರೇಗಾ ಯೋಜನೆಯು ಬಡವರು ನಗರ ಪ್ರದೇಶಗಳಿಗೆ ಗುಳೆ ಹೋಗುವುದನ್ನು ತಪ್ಪಿಸಿ ಗ್ರಾಮೀಣ ಪ್ರದೇಶಗಳಲ್ಲಿ ನೇಲೆಯುರುವಂತೆ ಮಾಡಿ ಗ್ರಾಮೀಣ ಪ್ರದೇಶದ ಜಲಮೂಲಗಳನ್ನು ಉನ್ನತಿಕರಿಸಿ ಜಲ ಮೂಲಗಳ ಸಂರಕ್ಷಣೆ ಮಾಡುವ ಕಾರ್ಯವನ್ನು ಮಾಡುತ್ತಿದೆ ಎಂದು ತಾಲೂಕ ನರೇಗಾ ಐ.ಇ.ಸಿ ಸಂಯೋಜಕ ಲಕ್ಷ್ಮಣ ಕೆರಳ್ಳಿ ಹೇಳಿದರು.
ಕುಕನೂರು :
ನೆರೇಗಾ ಯೋಜನೆಯು ಬಡವರು ನಗರ ಪ್ರದೇಶಗಳಿಗೆ ಗುಳೆ ಹೋಗುವುದನ್ನು ತಪ್ಪಿಸಿ ಗ್ರಾಮೀಣ ಪ್ರದೇಶಗಳಲ್ಲಿ ನೇಲೆಯುರುವಂತೆ ಮಾಡಿ ಗ್ರಾಮೀಣ ಪ್ರದೇಶದ ಜಲಮೂಲಗಳನ್ನು ಉನ್ನತಿಕರಿಸಿ ಜಲ ಮೂಲಗಳ ಸಂರಕ್ಷಣೆ ಮಾಡುವ ಕಾರ್ಯವನ್ನು ಮಾಡುತ್ತಿದೆ ಎಂದು ತಾಲೂಕ ನರೇಗಾ ಐ.ಇ.ಸಿ ಸಂಯೋಜಕ ಲಕ್ಷ್ಮಣ ಕೆರಳ್ಳಿ ಹೇಳಿದರು.
ತಾಲೂಕಿನ ಮಂಗಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ನರೇಗಾ ನಾಲಾ ಸುಧಾರಣಾ ಕಾಮಗಾರಿ ಸ್ಥಳದಲ್ಲಿ ರೋಜಗಾರ ದಿನ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಇಂದು 1531 ಕೂಲಿಕಾರರು ಕೆಲಸ ಮಾಡುತ್ತಿದ್ದರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು ಮಹಾತ್ಮಗಾಂಧಿ ನರೇಗಾ ಯೋಜನೆ ಗ್ರಾಮೀಣ ಪ್ರದೇಶದಲ್ಲಿ ಬಡ ಕೂಲಿಕಾರರು ದುಡಿಮೆ ಅರಸಿ ನಗರ ಪ್ರದೇಶಗಳಿಗೆ ಗುಳೆ ಹೋಗುವುದನ್ನು ತಪ್ಪಿಸಿ, ಗ್ರಾಮೀಣ ಪ್ರದೇಶದಲ್ಲಿಯೇ ನೇಲೆಯೂರಿ ಉತ್ತಮ ಜೀವನ ನಡೆಸಲು ಸಹಕಾರಿಯಾಗಲಿದೆ, ಅಲ್ಲದೇ ತಮ್ಮ ತಮ್ಮ ಹಳ್ಳ, ಕೊಳ್ಳ, ಕೆರೆಗಳ ಹೂಳೆತ್ತುವರ ಮೂಲಕ ನಾಲಾ ಸುಧಾರಣೆ ಮಾಡುವುದರ ಮೂಲಕ ನೀರಿನ ಮೂಲಗಳನ್ನು ಸಂರಕ್ಷಣೆ ಮಾಡುವಂತಹ ಕೆಲಸ ಮಾಡುತ್ತದೆ. ರೈತರ ಹೊಲಗಳಿಗೆ ಬದು ನಿರ್ಮಾಣದಂತಹ ಕಾರ್ಯಕ್ರಮವನ್ನು ನೆರೇಗಾ ಯೋಜನೆ ಮಾಡಿದ್ದು, ನೂರಾರು ವಿಧ್ಯಾವಂತ ನಿರುದ್ಯೋಗಿಗಳಿಗೆ ಆದಾಯದ ಮೂಲವಾಗಿದೆ, ಇದರಿಂದ ಜನರು ಗ್ರಾಮೀಣ ಪ್ರದೇಶದಲ್ಲಿ ಸಾಮರಷ್ಯದ ಜೀವನವನ್ನು ನಡೆಸಬಹುದಾಗಿದೆ.
ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಜಲಸಂಜೀವಿನಿ ಮಾದರಿಯಲ್ಲಿ ಎತ್ತರದಿಂದ ತಗ್ಗಿನಡೆಗೆ ಹಂತ ಹಂತವಾಗಿ ಕಾಮಗಾರಿಗಳನ್ನು ಅನುಷ್ಠಾನ ಮಾಡಲಾಗುತ್ತಿದ್ದು ಇದರಿಂದಾಗಿ ಗ್ರಾಮ ಪಂಚಾಯತಿ ಹಂತದಲ್ಲಿ ಸಾಕಷ್ಟು ಅಂತರ್ಜಲ ಹೆಚ್ಚಿಸುವ ಕಾರ್ಯ ಮಾಡಲಾಗುತ್ತಿದ್ದು ಇದರಿಂದಾಗಿ ಮುಂದಿನ ಪೀಳಿಗೆಯ ಪ್ರಾಣಿ, ಪಕ್ಷೀ, ಜೀವ ಸಂಕುಲಕ್ಕೆ ನೀರು ಒದಗಿಸುವಂತಾಗಿದೆ.
ನರೇಗಾ ಕೂಲಿಕಾರರು 3 ವರ್ಷದೊಳಗಿನ ಮಕ್ಕಳನ್ನು ಆರೈಕೆ ಮಾಡಲು ಮಂಗಳೂರು ಗ್ರಾಮದಲ್ಲಿ ಶಿಶುಪಾಲನಾ ಕೇಂದ್ರ ಮಾಡಿದ್ದು ಕೂಲಿಕಾರರು ತಮ್ಮ ಮಕ್ಕಳನ್ನು ಅದರಲ್ಲಿ ಬಿಡಬೇಕು ಅದಲ್ಲದೇ ಕೂಲಿಕಾರರ ಆರೋಗ್ಯ ತಪಾಸಣೆಯನ್ನು ಮಾಡಲಾಗುತ್ತಿದ್ದು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದರು.
ಸ್ಥಳದಲ್ಲಿ ಬಿ.ಎಫ್.ಟಿ ಶರಣಪ್ಪ ಮೂಲಿಮನಿ, ಕಾಯಕ ಬಂದುಗಳಾದ ಕಿರಣ್ ಕುಮಾರ, ಶಿವುಕುಮಾರ ಉಮಚಗಿ, ಮಂಗಳೇಶ್ ಕುಂಬಾರ, ಮಂಜುನಾಥ ಬೇವಿನಾಳ, ಜಯಶ್ರೀ ಗೆದಗೇರಿ, ಬಸಮ್ಮ ಚಿಲಕಮುಖಿ, ನಿಂಗಪ್ಪ, ಮುತ್ತಣ್ಣ ತಳವಾರ ಇದ್ದರು.
ನಿಂಗರಾಜ ದೊಡ್ಡಮನಿ
Like
Dislike
Love
Angry
Sad
Funny
Wow
Your experience on this site will be improved by allowing cookies.
ಠೀಕೆಗಳು 0