ಪ್ರಸ್ತುತ ದಿನಮಾನಗಳಲ್ಲಿ ಮೊಬೈಲ್ ಹಾಗೂ ದೂರದರ್ಶನಗಳ ಅತಿಯಾದ ಬಳಕೆಯಿಂದ ಮಾನಸಿಕ ಮತ್ತು ದೈಹಿಕ ವಿವೇಚನಗಳನ್ನು ಕಳೆದುಕೊಳ್ಳುತ್ತಿದ್ದು ಇವುಗಳಿಂದ ಆಚೆ ಬರಲು ಎತೆಚ್ಚವಾಗಿ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದಾಗ ಮಾತ್ರ ಸಾಧ್ಯ ಮತ್ತು ಮನಸ್ಸಿಗೂ ಶಾಂತಿ ದೊರೆಯುವುದು ಎಂದು ಶ್ರೀ ವೀರೇಶ್ವರ ಪುಣ್ಯಶ್ರಮದ ಪೀಠಾಧ್ಯಕ್ಷರು ಆದ ಪರಮಪೂಜ್ಯ ಶ್ರೀ ಕಲ್ಲಯ್ಯಜ್ಜನವರು
ಕುಕನೂರು :
ಪ್ರಸ್ತುತ ದಿನಮಾನಗಳಲ್ಲಿ ಮೊಬೈಲ್ ಹಾಗೂ ದೂರದರ್ಶನಗಳ ಅತಿಯಾದ ಬಳಕೆಯಿಂದ ಮಾನಸಿಕ ಮತ್ತು ದೈಹಿಕ ವಿವೇಚನಗಳನ್ನು ಕಳೆದುಕೊಳ್ಳುತ್ತಿದ್ದು ಇವುಗಳಿಂದ ಆಚೆ ಬರಲು ಎತೆಚ್ಚವಾಗಿ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದಾಗ ಮಾತ್ರ ಸಾಧ್ಯ ಮತ್ತು ಮನಸ್ಸಿಗೂ ಶಾಂತಿ ದೊರೆಯುವುದು ಎಂದು ಶ್ರೀ ವೀರೇಶ್ವರ ಪುಣ್ಯಶ್ರಮದ ಪೀಠಾಧ್ಯಕ್ಷರು ಆದ ಪರಮಪೂಜ್ಯ ಶ್ರೀ ಕಲ್ಲಯ್ಯಜ್ಜನವರು ಹೇಳಿದರು
ತಾಲೂಕಿನ ಇಟಗಿ ಗ್ರಾಮದಲ್ಲಿ ಶ್ರೀಗಾಳಿ ದುರ್ಗಾದೇವಿ ದೇವಸ್ಥಾನದಲ್ಲಿ ದೇವಿಯ ಬಾಳೆದಿಂಡಿಗೆ ಕಾರ್ಯಕ್ರಮದ ಪ್ರಯುಕ್ತ ಹಮ್ಮಿಕೊಂಡಿದ್ದ ವೀರೇಶ್ವರ ಪುಣ್ಯಶ್ರಮ ಗದುಗಿನ ಪೀಠಾಧ್ಯಕ್ಷರು ಆದ ಶ್ರೀ ಕಲ್ಲಯ್ಯನವರ 2043ನೇ ತುಲಾಭಾರ ಕಾರ್ಯಕ್ರಮದಲ್ಲಿ ಶ್ರೀಗಳ ತುಲಾಭಾರ ನಂತರ ಭಕ್ತರನ್ನುದೇಶಿಸಿ ಶ್ರೀಗಳು ಮಾತನಾಡುತ್ತ ಆಧುನಿಕ ಯುಗದಲ್ಲಿ ಪ್ರತಿಯೊಬ್ಬರು ಧಾರ್ಮಿಕತೆಯನ್ನು ಮರೆಯುತ್ತ ಸಾಗಿರುವುದು ವಿಷಾದನೀಯ ಬೆಳವಣಿಗೆಯಾಗಿದ್ದು ಇವುಗಳಿಂದ ಮನುಷ್ಯರಲ್ಲಿ ಮಾನಸಿಕ ಒತ್ತಡ ಹೆಚ್ಚಾಗುವ ಸಂಭವ ಇರುವುದನ್ನು ಎಲ್ಲರೂ ಗಮನ ಹರಿಸುತ್ತೀರಿ ಇಂತಹ ಒತ್ತಡದಿಂದ ಹೊರಬರಲು ಧಾರ್ಮಿಕ ಚಟುವಟಿಕೆ ಮತ್ತು ಬೋಧನೆಗಳಲ್ಲಿ ಭಾಗವಹಿಸಿದಾಗ ಎಲ್ಲಾ ತರಹದ ಒತ್ತಡಗಳಿಂದ ಹೊರಬಂದು ಮೈಮನಗಳೆಲ್ಲವನ್ನು ಹಗುರ ಮಾಡಿಕೊಳ್ಳಬಹುದಾಗಿದೆ ಎಂದು ನುಡಿದರು.
ಹಿಂದಿನ ಪ್ರಾಚೀನ ಕಾಲದಲ್ಲೂ ಸಹ ಮಹಾಮಾರಿ ಅಂತಹ ಕಾಯಿಲೆಗಳು ಜನರನ್ನು ಪೀಡಿಸಿರುವ ಸಾಕಷ್ಟು ಉದಾಹರಣೆಗಳಿದ್ದು ಆಗಿನ ಕಾಲದಲ್ಲಿ ಧಾರ್ಮಿಕ ಪದ್ಧತಿ ಹಾಗೂ ದೈವಿಕ ಮೊರೆಯನ್ನು ಹೊಂದುವ ಸಂಪ್ರದಾಯ ನಮ್ಮದಾಗಿದ್ದು ಧಾರ್ಮಿಕ ಮೊರೆಯಿಂದ ದೊಡ್ಡ ದೊಡ್ಡ ಕಾಯಿಲೆಗಳಿಂದ ಮುಕ್ತಿ ಹೊಂದಿದ ಸಾಕಷ್ಟು ನಿದರ್ಶನಗಳಿವೆ ಅದೇ ಪರಂಪರೆಯನ್ನು ಮುಂದುವರಿಸಿಕೊಂಡು ಬಂದಿದ್ದು ಇಂತಹ ದೇವಿಯ ಜಾತ್ರೆಗಳು ನಡೆಸುವುದು ನಮ್ಮ ಸಂಪ್ರದಾಯವಾಗಿದ್ದು ಇಂತಹ ಧಾರ್ಮಿಕ ಚಟುವಟಿಕೆಗಳಲ್ಲಿ ಎಲ್ಲರೂ ಭಾಗವಹಿಸಿ ಪುನೀತರಾಗಬೇಕೆಂದು ಹೇಳಿದರು.
ಕಾರ್ಯಕ್ರಮದಲ್ಲಿ ಅಣ್ಣಪ್ಪ ಅಂಗಡಿ, ಶಾಂತಪ್ಪ ಬೆಲ್ಲದ್, ಹನುಮಂತಪ್ಪ ದೇಸಾಯಿ, ಲಕ್ಷ್ಮಣ ಕೋರಿ, ರುದ್ರಮುನಿ ಮಠಪತಿ, ಅಶೋಕ ಸಾದರ, ಸುರೇಶ ಮಂಡಲಗಿರಿ, ನಿಂಗಪ್ಪ ಕೋರಿ, ವಜೀರ್ ಸಾಬ್ ತಳಕಲ್, ರುದ್ರಮುನಿ ಮಠಪತಿ, ಶಿವಪ್ಪ ಗುಳಗಣ್ಣನವರ್ ಇಟಗಿ ಗ್ರಾಮದ ಸುತ್ತ ಮುತ್ತಲಿನ ಗ್ರಾಮಗಳ ಭಕ್ತರು ಉಪಸ್ಥಿತರಿದ್ದರು
ನಿಂಗರಾಜ ದೊಡ್ಡಮನಿ
ಠೀಕೆಗಳು 0