ಇಂದಿನ ತಂತ್ರಜ್ಞಾನ ಆಧುನಿಕ ಯುಗದಲ್ಲಿ ರಂಗಭೂಮಿ ಕಲೆ ಕ್ಷೀಣಿಸಿತ್ತಿರುವುದು ವಿಷಾದದ ಸಂಗತಿಯಾಗಿದೆ. ರಂಗಭೂಮಿಯೇ ಜೀವಾಳವೆಂದೆನಿಸಿದ ರಂಗಭೂಮಿ ಕಲಾವಿದರನ್ನು ಪ್ರೋತ್ಸಾಹಿಸಿ ರಂಗಭೂಮಿ ಕಲೆಯನ್ನು ಉಳಿಸುವ ಅವಶ್ಯಕತೆ ಎದುರಾಗಿದೆ ಆದ್ದರಿಂದ ಮನೋರಂಜನೆಯ ಮೂಲವಾದ ರಂಗಭೂಮಿಯ ಕಲಾವಿದರನ್ನು ಪ್ರೋತ್ಸಾಹಿಸುವ ಕಾರ್ಯ ಜರುಗಬೇಕಾಗಿದೆ ಎಂದು ಸಾಹಿತಿ ಮತ್ತು ಹಿರಿಯ ಕಲಾವಿದ ಬಸವರಾಜ ಬಿನ್ನಾಳ ತಿಳಿಸಿದರು.