ಇಂದಿನ ತಂತ್ರಜ್ಞಾನ ಆಧುನಿಕ ಯುಗದಲ್ಲಿ ರಂಗಭೂಮಿ ಕಲೆ ಕ್ಷೀಣಿಸಿತ್ತಿರುವುದು ವಿಷಾದದ ಸಂಗತಿಯಾಗಿದೆ. ರಂಗಭೂಮಿಯೇ ಜೀವಾಳವೆಂದೆನಿಸಿದ ರಂಗಭೂಮಿ ಕಲಾವಿದರನ್ನು ಪ್ರೋತ್ಸಾಹಿಸಿ ರಂಗಭೂಮಿ ಕಲೆಯನ್ನು ಉಳಿಸುವ ಅವಶ್ಯಕತೆ ಎದುರಾಗಿದೆ ಆದ್ದರಿಂದ ಮನೋರಂಜನೆಯ ಮೂಲವಾದ ರಂಗಭೂಮಿಯ ಕಲಾವಿದರನ್ನು ಪ್ರೋತ್ಸಾಹಿಸುವ ಕಾರ್ಯ ಜರುಗಬೇಕಾಗಿದೆ ಎಂದು ಸಾಹಿತಿ ಮತ್ತು ಹಿರಿಯ ಕಲಾವಿದ ಬಸವರಾಜ ಬಿನ್ನಾಳ ತಿಳಿಸಿದರು.
ಕುಕನೂರು :
ಇಂದಿನ ತಂತ್ರಜ್ಞಾನ ಆಧುನಿಕ ಯುಗದಲ್ಲಿ ರಂಗಭೂಮಿ ಕಲೆ ಕ್ಷೀಣಿಸಿತ್ತಿರುವದು ವಿಷಾದ ನಂತರ ಸಂಗತಿಯಾಗಿದ್ದು ರಂಗಭೂಮಿ ಜೀವಾಳ ವೆಂದೆನಿಸಿದ ರಂಗಭೂಮಿ ಕಲಾವಿದರನ್ನು ಪ್ರೋತ್ಸಾಹಿಸಿ ರಂಗಭೂಮಿ ಕಲೆಯನ್ನು ಉಳಿಸುವ ಅವಶ್ಯಕತೆ ಎದುರಾಗಿದೆ ಆದ್ದರಿಂದ ಮನೋರಂಜನೆಯ ಮೂಲವಾದ ರಂಗಭೂಮಿಯ ಕಲಾವಿದರನ್ನು ಪ್ರೋತ್ಸಾಹಿಸುವ ಕಾರ್ಯ ಜರುಗಬೇಕಾಗಿದೆ ಎಂದು ಸಾಹಿತಿ ಮತ್ತು ಹಿರಿಯ ಕಲಾವಿದರು ಆದ ಬಸವರಾಜ ಬಿನ್ನಾಳ ತಿಳಿಸಿದರು.
ಕುಕನೂರ ತಾಲೂಕಿನ ಮಂಡಲಗಿರಿ ಗ್ರಾಮದ ಶ್ರೀ ದುರ್ಗಾದೇವಿ ಜಾತ್ರಾ ಮಹೋತ್ಸವದ ಪ್ರಯುಕ್ತ ಕೆಂಚಮ್ಮದೇವಿ ಯುವ ನಾಟ್ಯ ಸಂಘ ಮಂಡಲಗೆರಿ ವತಿಯಿಂದ ಆಯೋಜಿಸಿದ್ದ ತಂದೆಗೆ ತಕ್ಕ ಜೋಡಿ ಹುಲಿಗಳು ಎಂಬ ನಾಟಕದ ಉದ್ಘಾಟನಾ ಸಮಾರಂಭದಲ್ಲಿ ಕಲಾವಿದರಾದ ಬಸವರಾಜ ಬಿನ್ನಾಳ ಮಾತನಾಡುತ್ತಾ ಮಂಡಲಗಿರಿ ಗ್ರಾಮವು ಕಲಾವಿದರ ತವರು ಆಗಿದ್ದು ಪ್ರತಿ ನಾಲ್ಕರಿಂದ ಐದು ನಾಟಕಗಳು ಈ ಗ್ರಾಮದಲ್ಲಿ ಪ್ರದರ್ಶನ ಗೊಳ್ಳುವದು ಹೆಮ್ಮೆ ಸಂಗತಿ ಎಂದು ಹೇಳಿದರು.
ನಾಟಕದ ಉದ್ಘಾಟನೆಯನ್ನು ನೆರವೇರಿಸಿದ ಇಟಗಿ ಮರಳು ಸಿದ್ದೇಶ್ವರ ಆಶ್ರಮದ ಪೂಜ್ಯರಾದ ಪೂಜ್ಯರ ಗೆದಿಗೆಪ್ಪಜ್ಜನವರು ಮಾತನಾಡುತ್ತಾ ಕೇವಲ 9ನೇ ತರಗತಿ ವ್ಯಾಸಂಗ ಮಾಡಿರುವ ಮಂಜು ಆರ್ ಸೂಡಿ ಅವರಿಂದ ಈ ನಾಟಕ ರಚಿಸಲ್ಪಟ್ಟಿರುವುದು ಹೆಮ್ಮೆಯ ವಿಷಯವಾಗಿದ್ದು ಇಂತಹ ಅಮೂಲ್ಯ ಸಾಹಿತಿಗಳು ಗ್ರಾಮೀಣ ಪ್ರದೇಶದಲ್ಲಿ ತೆರೆಮರೆಯಲ್ಲಿ ಉಳಿದುಕೊಂಡಿದ್ದು ಸೂಕ್ತ ಪ್ರೋತ್ಸಾಹ ಅವಶ್ಯಕತೆ ಇದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಂಡಲಗಿರಿ ಗ್ರಾಮದ ಸಮಸ್ತ ಗ್ರಾಮಸ್ಥರು ಪಾಲ್ಗೊಂಡಿದ್ದರು.
ನಿಂಗರಾಜ ದೊಡ್ಡಮನಿ
ಠೀಕೆಗಳು 0