ನಮ್ಮೆಲ್ಲರ ಆರೋಗ್ಯ ಹಿತದೃಷ್ಟಿಯಿಂದ ಆರೋಗ್ಯದ ನಿಯಮಗಳನ್ನು ಪಾಲಿಸಬೇಕು ಎಂದು ಯಲಬುರ್ಗಾ ಕ್ಷೇತ್ರ ಶಿಕ್ಷಣಾಧಿಕಾರಿ ಪದ್ಮನಾಭಕರಣಂ ಹೇಳಿದರು.
ನಮ್ಮೆಲ್ಲರ ಆರೋಗ್ಯ ಹಿತದೃಷ್ಟಿಯಿಂದ ಆರೋಗ್ಯದ ನಿಯಮಗಳನ್ನು ಪಾಲಿಸಬೇಕು ಎಂದು ಯಲಬುರ್ಗಾ ಕ್ಷೇತ್ರ ಶಿಕ್ಷಣಾಧಿಕಾರಿ ಪದ್ಮನಾಭಕರಣಂ ಹೇಳಿದರು.
ಕುಕನೂರು :
ನಮ್ಮೆಲ್ಲರ ಆರೋಗ್ಯ ಹಿತದೃಷ್ಟಿಯಿಂದ ಆರೋಗ್ಯದ ನಿಯಮಗಳನ್ನು ಪಾಲಿಸಬೇಕು ಎಂದು ಯಲಬುರ್ಗಾ ಕ್ಷೇತ್ರ ಶಿಕ್ಷಣಾಧಿಕಾರಿ ಪದ್ಮನಾಭಕರಣಂ ಹೇಳಿದರು.
ಕುಕನೂರು ತಾಲೂಕಿನ ಬಿನ್ನಾಳ ಗ್ರಾಮದ ಸರ್ಕಾರಿ ಪ್ರೌಢ ಶಾಲೆಗೆ ಭೇಟಿ ನೀಡಿ ಆರೋಗ್ಯದ ಕಾಳಜಿ ಕುರಿತಂತೆ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದರು ಈ ವೇಳೆಯಲ್ಲಿ ಅವರು ಮಾತನಾಡುತ್ತಾ ಹಲವು ಗ್ರಾಮಗಳಲ್ಲಿ ವಾಂತಿಬೇದಿ ಪ್ರಕರಣಗಳು ಕಂಡುಬಂದ ಕಾರಣದಿಂದ ಕುಕನೂರು ಯಲಬುರ್ಗಾ ಅವಳಿ ತಾಲೂಕುಗಳ ಎಲ್ಲಾ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಶುದ್ಧ ಹಾಗೂ ತಾಜಾ ಆಹಾರದೊಂದಿಗೆ ಕಾಯಿಸಿ ಆರಿಸಿ ಸೋಸಿದ ಶುದ್ಧ ಕುಡಿಯುವ ನೀರನ್ನು ಸುತ್ತೋಲೆ ಹೊರಡಿಸಿದ್ದು ಆರೋಗ್ಯದ ಹಿತದೃಷ್ಟಿಯಿಂದ ಮಕ್ಕಳೆಲ್ಲರೂ ಆರೋಗ್ಯದ ನಿಯಮವನ್ನು ಪಾಲನೆ ಮಾಡಬೇಕು ಶಾಲೆಯಲ್ಲಿ ಅಷ್ಟೇ ಅಲ್ಲದೆ ತಮ್ಮ ಮನೆಗಳಲ್ಲೂ ಸಹ ಇದೇ ತರಹದ ಸುರಕ್ಷಿತ ಕ್ರಮದೊಂದಿಗೆ ಮನೆಯ ಸುತ್ತಮುತ್ತಲಿನ ವಾತಾವರಣವನ್ನು ಶುಚಿಯಾಗಿಟ್ಟುಕೊಂಡು ಸದೃಢ ಆರೋಗ್ಯವನ್ನು ಹೊಂದಬೇಕೆಂದು ತಿಳಿಸಿದರು.
ಎಲ್ ಕುಕನೂರು ಯಲಬುರ್ಗಾ ತಾಲೂಕ ಅಕ್ಷರ ದಾಸೋಹ ಸಮಿತಿಯ ಸಹಾಯಕ ನಿರ್ದೇಶಕ ಎಫ್ ಎಂ ಕಳ್ಳಿ ವಿದ್ಯಾರ್ಥಿಗಳ ನಿರ್ದೇಶಕ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತ ಪ್ರಸಕ್ತ ಬೇಸಿಗೆ ಕಾಲ ಮುಗಿದು ಮಳೆಗಾಲ ಪ್ರಾರಂಭವಾಗುವ ಹಂತದಲ್ಲಿ ನಾವೆಲ್ಲರೂ ಇದ್ದು ಈ ಕಾಲದ ವಾತಾವರಣವು ಮನುಷ್ಯನ ಸದೃಢತೆಯ ಕುಂಟಿಸುತ್ತ ರೋಗ ಹರಡವಿಕೆಗೆ ಸಶಕ್ತ ಕಾಲವಾಗಿರುತ್ತದೆ ಆದ್ದರಿಂದ ಮಕ್ಕಳು ಜಾಗೃತಿ ವಹಿಸುವುದರೊಂದಿಗೆ ತಮ್ಮ ಪಾಲಕರಿಗೂ ಆರೋಗ್ಯದ ಕುರಿತು ಜಾಗೃತಿ ಮೂಡಿಸುವ ಅವಶ್ಯಕತೆ ಇದೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ನಂತರ ಗ್ರಾಮದ ಸರ್ಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆಗೂ ಭೇಟಿ ನೀಡಿ ಆರೋಗ್ಯದ ಕುರಿತು ಜಾಗೃತಿ ಮೂಡಿಸಿ ವಿದ್ಯಾರ್ಥಿಗಳ ಆರೋಗ್ಯದ ಕುರಿತು ಶಿಕ್ಷಕರು ಜಾಗೃತಿ ವಹಿಸಬೇಕೆಂದು ಹೇಳಿದರು.
ಈ ವೇಳೆಯಲ್ಲಿ ಶಾಲೆಯ ಮುಖ್ಯೋಪಾಧ್ಯಾಯರು, ಶಿಕ್ಷಕ ವರ್ಗದವರು, ಅಕ್ಷರ ದಾಸೋಹ ಬಿಸಿಯೂಟದ ಅಡುಗೆ ಸಿಬ್ಬಂದಿಗಳು, ಶಾಲಾ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ನಿಂಗರಾಜ ದೊಡ್ಡಮನಿ
Like
Dislike
Love
Angry
Sad
Funny
Wow
Your experience on this site will be improved by allowing cookies.
ಠೀಕೆಗಳು 0