ಜನರು ಅವರನ್ನು ಪ್ರೀತಿಯಿಂದ ” ಮೇಷ್ಟ್ರು”,”ಗುರುಗಳು” ಎಂದು ಕರೆಯುತ್ತಿದ್ದು ರೇವಡಿ ಗುರುಗಳು ಇನ್ನೂ ನೆನಪು ಮಾತ್ರ.
ಜನರು ಅವರನ್ನು ಪ್ರೀತಿಯಿಂದ ” ಮೇಷ್ಟ್ರು”,”ಗುರುಗಳು” ಎಂದು ಕರೆಯುತ್ತಿದ್ದು ರೇವಡಿ ಗುರುಗಳು ಇನ್ನೂ ನೆನಪು ಮಾತ್ರ.
ಗಜೇಂದ್ರಗಡ :
ಜನರು ಅವರನ್ನು ಪ್ರೀತಿಯಿಂದ ” ಮೇಷ್ಟ್ರು”,”ಗುರುಗಳು” ಎಂದು ಕರೆಯುತ್ತಿದ್ದು ರೇವಡಿ ಗುರುಗಳು ಇನ್ನೂ ನೆನಪು ಮಾತ್ರ.
ಶಿಕ್ಷಕ ಈಶ್ವರಪ್ಪ ರೇವಡಿ ತಮ್ಮ ಶಾಲೆಯನ್ನು ಸ್ವಚ್ಛವಾದ ಅಂಗಣ, ಸುಂದರವಾದ ಅಲಂಕಾರಿಕ ಗಿಡಗಳಿಂದ ಕಂಗೊಳಿಸುವ ಕಿರು ಉದ್ಯಾನವನ ನಿರ್ಮಿಸಿದ್ದರು ಇಡೀ ಶಾಲೆ ಹಸಿರಿನಿಂದ ಕಂಗೊಳಿಸುವಂತೆ ಮಾಡಿದ್ದರೆಲ್ಲದೇ. ರೇವಡಿ ಗುರುಗಳು ಈ ಗ್ರಾಮದ ಶಾಲೆಗೆ ಎಂದು ಆಗಮಿಸಿದ್ದರೋ ಅಂದಿನಿಂದ ಅಲ್ಲಿನ ಶಾಲೆಯ ಪರಿಸರವು ಪರಿವರ್ತನೆಗೊಂಡು ಅಲ್ಲಿನ ಮಕ್ಕಳ ಮನಸ್ಥಿತಿ ಪ್ರಸನ್ನತೆಯಿಂದ ಒಡಗೂಡುವಂತೆ ಮಾಡಿದ ಕೀರ್ತಿ ಶ್ರೀಯುತರಿಗೆ ಸಲ್ಲುತ್ತದೆ. ಪರಿಸರ ಪ್ರೇಮಿಯಾಗಿರುವ ಇವರು ಹಲವು ಜಾತಿಯ ಗಿಡಮರ ನೆಟ್ಟಿದ್ದು, ಶಾಲೆಗೆ ಕಾಂಪೌಂಡ್, ಶುದ್ಧ ಕುಡಿವ ನೀರಿನ ಘಟಕ ವ್ಯವಸ್ಥೆ ಮಾಡಿದ್ದಾರೆ. ಹಲವು ಬಗೆಯ ಗಿಡಗಳನ್ನು ನೆಡುವ ಜತೆಗೆ ಆಕರ್ಷಕ ಕಿರು ಉದ್ಯಾನವನ ನಿರ್ಮಿಸಿದ್ದಾರೆ. ಮಕ್ಕಳು ಬಿಡುವಿನ ವೇಳೆ ಇಲ್ಲಿ ಆಡುತ್ತಾ ನಲಿಯುತ್ತಾ ತಾವು ಕೂಡಾ ಮಕ್ಕಳಾಗಿ ವಿಧ್ಯಾರ್ಥಿಗಳಿಗೆ ಅಚ್ಚುಮೆಚ್ಚಿನ ಮೇಷ್ಟ್ರು ಆಗಿದ್ದರು.
ಅವರು ಹೋದಕಡೆಯಲೆಲ್ಲಾ ನವಮನ್ವಂತರದ ಸಂಚಲವನ್ನುಂಟು ಮಾಡಿದರು. ಇತರರ ಸುಖದಲ್ಲೇ ತಮ್ಮ ಸುಖವನ್ನು ಕಂಡವರು. ರೋಣ ಶಿಕ್ಷಕರ ಸಹಾಕರ ಸಂಘವು ಹಾರ್ಥಿಕ ಸಂಕಷ್ಟವನ್ನು ಎದುರಿಸುತ್ತಿರುವ ಸಂದರ್ಭದಲ್ಲಿ ಸದಸ್ಯರ ಸಹಕಾರದೊಂದಿಗೆ ಹೊಸ ಚೈತನ್ಯ ಮೂಡಿಸಿ ಸಂಘದ ಏಳಿಗೆಯಲ್ಲಿ ಇವರ ಪಾತ್ರ ಉತ್ಕೃಷ್ಟವಾದುದ್ದನ್ನು ಇಲ್ಲಿ ಸ್ಮರಿಸಬಹುದು. ಕಸಾಪ ರೋಣ ತಾಲೂಕ ಅಧ್ಯಕ್ಷರಿದ್ದ ಅವಧಿಯಲ್ಲಿ ಅಂದಿನ ಜಿಲ್ಲಾ, ತಾಲೂಕಾ ಸಾಹಿತ್ಯ ಸಮ್ಮೇಳನವನ್ನು ಯಶಸ್ವಿಯಾಗಿ ನಡೆಯಿಸಿಕೊಟ್ಟು ಗಜೇಂದ್ರಗಡದಲ್ಲಿ ಹಲವಾರು ವಾರಗಳ ನಿರಂತರವಾಗಿ ವಾರದ ಸಾಹಿತ್ಯ ಸಂಜೆ ಕಾರ್ಯಕ್ರಮ ನಡೆಸುತ್ತಾ ಬಂದರಲ್ಲದೆ ಅಲ್ಲಿನ ವಿಷಯಗಳ ಕುರಿತು ಸಮಗ್ರ ಕೃತಿಗಳನ್ನು ಹೊರತರಯವಲ್ಲಿ ಯಶಸ್ವಿಯಾಗಿದ್ದರು.
ಸ್ಥಳೀಯ ಸಾಹಿತಿಗಳ ಪುಸ್ತಕಗಳನ್ನು ಪ್ರಕಟಿಸುವುದಕ್ಕಾಗಿಯೇ ತಮ್ಮದೇಯಾದ ಬಸವ ಪ್ರಕಾಶನ ಹುಟ್ಟುಹಾಕಿ ಹಲವಾರು ಕೃತಿಗಳನ್ನು ಪ್ರಕಟಿಸಿದ ಕೀರ್ತಿ ಕೂಡಾ ಇವರದು.
ಕರುನಾಡಿನ ನಾಡಿನ ಹೆಮ್ಮೆ ತಾಯಿ ಭುವನೇಶ್ವರಿ ಭಾವಚಿತ್ರ ರಾಜ್ಯದಲ್ಲಿ ಏಕರೂಪವಾಗಲಿ ಎಂಬ ಸದಾಶಯದೊಂದಿಗೆ ಗದುಗಿನ ಕಲಾವಿದ ಸಿ.ಎನ್.ಪಾಟೀಲ್ ರಚಿಸಿದ ಸ್ವಾತಂತ್ರ್ಯ ಹೋರಾಟಗಾರ ಶ್ರೀ ಅಂದಾನಪ್ಪ ದೊಡ್ಡಮೇಟಿ ಯವರ ಪರಿಕಲ್ಪನೆಯಲ್ಲಿ ಅರಳಿದ ಭುವನೇಶ್ವರಿಯ ಭಾವಚಿತ್ರ ಅಲ್ಲದೇ ಅವರ ಮನೆಯಲ್ಲಿ ನಿತ್ಯವೂ ಪೂಜೆಗೊಳ್ಳುತ್ತಿರುವ ಭುವನೇಶ್ವರಿಯ ಭಾವಚಿತ್ರವನ್ನು ಗಜೇಂದ್ರಗಡ, ರೋಣ ತಾಲೂಕಿನ ಎಲ್ಲಾ ಶಾಲಾ ಕಾಲೇಜುಗಳಿಗೆ ಹಾಗೂ ಸರ್ಕಾರಿ ಕಛೇರಿಗಳಿಗೆ, ಸಂಘ ಸಂಸ್ಥೆಗಳಿಗೆ ಸ್ಥಾನಿಕ ಸಂಸ್ಥೆಯ ಸದಸ್ಯರುಗಳಿಗೆ ಗೌರವ ಪೂರಕವಾಗಿ ವಿತರಿಸುವ ಮೂಲಕ ನಾಡ ಹಿರಿಮೆಯನ್ನು ಮೆರೆದಿದ್ದಾರೆ.
ಕೋವಿಡ್ ೧೯ ಸಂದರ್ಭದಲ್ಲಿ ಮುಖ್ಯಮಂತ್ರಿ ಪರಿಹಾರ ನಿಧಿಗೆ ತಮ್ಮ ಒಂದು ತಿಂಗಳ ಸಂಬಳದ ೫೦ಸಾವಿರ ರೂ. ಚೆಕ್ಕನ್ನು ಶಾಸಕರ ಮೂಲಕ ತಲುಪಿಸಿದ್ದಾರೆ. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಜಾನಪದ ಕಲಾವಿದ ಶಂಕ್ರಣ್ಣ ಸಂಕಣ್ಣವರವರ ವೈದ್ಯಕೀಯ ವೆಚ್ಚಕ್ಕಾಗಿ ೨೫ಸಾವಿರ ರೂ. ಗೌರವಪೂರ್ವಕವಾಗಿ ಅಪಿ೯ಸಿದ್ದನ್ನ ಮನಗಾಣಬಹುದಾಗಿದೆ. ಹಲವಾರು ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಪ್ರವೇಶ ಶುಲ್ಕ ಭರಸುವ ಮೂಲಕ ಆರ್ಥಿಕ ಸಂಕಷ್ಟದಲ್ಲಿರುವವರನ್ನು ಮೇಲೆತ್ತುವ ಕಾಯಕದಲ್ಲೂತೊಡಗಿಕೊಂಡಿದ್ದಾರೆ. ವಿಜಯಮಹಾಂತ ಶಾಲೆಯ ಮಕ್ಕಳಗೆ ಲಕ್ಷ ರೂ ವೆಚ್ಚದ ಶೌಚಾಲಯ ನಿರ್ಮಿಸಿದ್ದಾರೆ. ಮಠದ ಪ್ರಸಾದ ನಿಲಯಕ್ಕೆ ಕಂಪೌಂಡ, ಉಚಿತ ಪ್ರಸಾದ ನಿಲಯಕ್ಕೆ ಗ್ರಂಥಾಲಯ , ಹಿರೇಕೊಪ್ಪ, ಶಾಂತಗೇರಿ ಶಾಲೆಯಲ್ಲಿ ಗ್ರಂಥಾಲಯ ನಿರ್ಮಾಣ ಮತ್ತು ೧೫ ಸಾವಿರಕ್ಕೂ ಅಧಿಕ ಪುಸ್ತಕಗಳನ್ನು ಕೊಡುಗೆಯಾಗಿ ನೀಡಿದ್ದಾರೆ. ರಾಯಬಾಗ ತಾಲೂಕಿನ ರೇವಣಸಿದ್ದೇಶ್ವರ ಮಠಕ್ಕೆ ೧ ಲಕ್ಷ ಪ್ರಸಾದ ನಿಲಯಕ್ಕೆ ದೇಣಿಗೆ ಮತ್ತು ಪ್ರತಿವರ್ಷ ನೂರು ವಿದ್ಯಾರ್ಥಿಗಳಿಗೆ ಉಚಿತ ಸಮವಸ್ತ್ರ ಹಾಗೂ ನೋಟಬುಕ್, ಪಾರಿತೋಷಕ ಕಾಣಿಕೆ ನೀಡುತ್ತಾ ಬಂದಿದ್ದಾರೆ. ಅಲ್ಲದೆ, ಸ್ವಂತ ಖರ್ಚಿನಲ್ಲಿ ಬಡಮಕ್ಕಳಿಗೆ ವಸತಿ ಶಾಲೆ ತೆರೆದು ೪೦ ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ನಿತ್ಯ ಅನ್ನಪ್ರಸಾದ ಹಾಗೂ ವಿದ್ಯಾಭ್ಯಾಸದ ವೆಚ್ಚವನ್ನು ತಾವೇ ನೋಡಿಕೊಳ್ಳುತ್ತಿದ್ದರು.
ಇವರ ಸೇವೆಯನ್ನು ಪರಗಣಿಸಿ ಕನ್ನಡದ ನ್ಯೂಸ್ ಚಾನೆಲ್ ಪಬ್ಲಿಕ್ ಟಿ.ವಿ.ಯಲ್ಲಿ ಪ್ರಸಾರಗೊಳ್ಳುವ ಪಬ್ಲಿಕ್ ಹಿರೋ ವಿಶೇಷ ವರದಿಯಲ್ಲಿ ಇವರ ವ್ಯಕ್ತಿತ್ವ ಹಾಗೂ ಸಮಾಜ ಸೇವೆ ಕಾರ್ಯವೈಖರಿಯನ್ನು ಬಿತ್ತರಿಸಲ್ಪಟ್ಟಿತ್ತು.
ಗ್ರಾಮೀಣ ಜನರ ಅಭಿವೃದ್ಧಿಗಾಗಿಯೇ ಶ್ರಮಿಸಬೇಕೆನ್ನುವ ಜಂಬದ ಮಾತಿನ ರಾಜಕೀಯ ಮುಖಂಡರಿಗೆ, ಅಧಿಕಾರಿಗಳಿಗೆ ಶಿಕ್ಷಕ ಈಶ್ವರಪ್ಪ ಅಂದಾನಪ್ಪ ರೇವಡಿ ಇವರ ಪ್ರಾಯೋಗಿಕ ಜೀವನವು ಆದರ್ಶವಾಗಿ ಗೋಚರಿಸಿದ್ದು ಸುಳ್ಳಲ್ಲ.
ವ್ಯಕ್ತಿಗೆ ವ್ಯಕ್ತಿತ್ವವೇ ಸುಗಂಧ ಈಶಪ್ಪ ರೇವಡಿ ಸೇವೆಯ ಸುಗಂಧದೊಂದಿಗೆ ಸರ್ವರನ್ನು ಸೆಳದಿದ್ದಾರೆ ಎಂದರೇ ಅತಿಶಯೋಕ್ತಿಯಲ್ಲ. ಇಂತಹ ಸೇವಾಮೂರ್ತಿಗೆ ಸರ್ಕಾರ ರಾಜ್ಯ ಮಟ್ಟದ ಪ್ರಶಸ್ತಿಯನ್ನು ಕೂಡಾ ಕೊಟ್ಟಿತ್ತು ಆದರೆ ವಿಧಿಯಾಟ ಅವರ ಜೀವವನ್ನು ಬಹುಬೇಗನೇ ತೆಗೆದುಕೊಂಡಿದ್ದು ಕೋಟೆ ನಾಡಿನಲ್ಲಿ ನಿರವಮೌನ ಆವರಿಸಿದೆ.
ಗಣ್ಯರಿಂದ ಸಂತಾಪ
ಗಜೇಂದ್ರಡದ ಸಿದ್ದಣ್ಣ ಬಂಡಿ, ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕಾ ಅಧ್ಯಕ್ಷ ಅಮರೇಶ ಗಾಣಗೇರ, ಮೋಗನ್ ಸಾ ರಾಯಬಾಗಿ, ನಾಗರಾಜ ಖೋಡೆ, ಕರ್ನಾಟಕ ಅಭಿವೃದ್ಧಿ ವೇದಿಕೆಯ ರಾಜ್ಯಾಧ್ಯಕ್ಷ ವಿನಾಯಕ ಜರತಾರಿ, ಕರ್ನಾಟಕ ಮಾನಹ ಹಕ್ಕುಗಳ ಜನ ಸೇವಾ ಸಮೀತಿಯ ಅಧ್ಯಕ್ಷರಾದ ಮಹಾಂತೇಶಗೌಡ ಪಾಟೀಲ್, ಮಹಿಳಾ ಘಟಕದ ಅಧ್ಯಕ್ಷೆ ಜಯಶ್ರೀ ಪಾವಾರ, ಕಾರ್ಯದರ್ಶಿ ರೇಣುಕಾ ಏವೂರ, ನಗರದ ಗ್ರಂಥಪಾಲಕರು ಸೇರಿದಂತೆ ನಾಡಿನ ಬಹುತೇಕ ಮನಸ್ಸುಗಳು ರಾಜ್ಯ ಪ್ರಶಸ್ತಿ ಪುರಸ್ಕೃತ ಈಶ್ವರಪ್ಪ ರೇವಡಿಯವರಿಗೆ ಸಂತಾಪವನ್ನು ಸೂಚಿಸಿದ್ದಾರೆ.
ವಿಶ್ವನಾಥ ಕುಷ್ಟಗಿ
Like
Dislike
Love
Angry
Sad
Funny
Wow
Your experience on this site will be improved by allowing cookies.
ಠೀಕೆಗಳು 0