ಜೂನ್ 11ರ ರವಿವಾರದಂದು ರಾಜ್ಯಾದ್ಯಂತ ಮಹಿಳಾ ಉಚಿತ ಬಸ್ ಪ್ರಯಾಣದ ಶಕ್ತಿ ಯೋಜನೆಗೆ ಚಾಲನೆ ದೊರೆತಿದೆ, ಅದರಂತೆ ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಕುಕುನೂರು ಮತ್ತು ಯಲಬುರ್ಗಾ ಪಟ್ಟಣಗಳ ಬಸ್ ನಿಲ್ದಾಣಗಳಲ್ಲಿಯೂ ಸಹ ಚಾಲನೆ ನೀಡಲಾಗುವುದು ಎಂದು ಮಾಜಿ ಸಚಿವ ಶಾಸಕ ಬಸವರಾಜ ರಾಯರೆಡ್ಡಿ ಹೇಳಿದರು.
ಜೂನ್ 11ರ ರವಿವಾರದಂದು ರಾಜ್ಯಾದ್ಯಂತ ಮಹಿಳಾ ಉಚಿತ ಬಸ್ ಪ್ರಯಾಣದ ಶಕ್ತಿ ಯೋಜನೆಗೆ ಚಾಲನೆ ದೊರೆತಿದೆ, ಅದರಂತೆ ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಕುಕುನೂರು ಮತ್ತು ಯಲಬುರ್ಗಾ ಪಟ್ಟಣಗಳ ಬಸ್ ನಿಲ್ದಾಣಗಳಲ್ಲಿಯೂ ಸಹ ಚಾಲನೆ ನೀಡಲಾಗುವುದು ಎಂದು ಮಾಜಿ ಸಚಿವ ಶಾಸಕ ಬಸವರಾಜ ರಾಯರೆಡ್ಡಿ ಹೇಳಿದರು.
ಕುಕನೂರು :
ಜೂನ್ 11ರ ರವಿವಾರದಂದು ರಾಜ್ಯಾದ್ಯಂತ ಮಹಿಳಾ ಉಚಿತ ಬಸ್ ಪ್ರಯಾಣದ ಶಕ್ತಿ ಯೋಜನೆಗೆ ಚಾಲನೆ ದೊರೆತಿದೆ, ಅದರಂತೆ ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಕುಕುನೂರು ಮತ್ತು ಯಲಬುರ್ಗಾ ಪಟ್ಟಣಗಳ ಬಸ್ ನಿಲ್ದಾಣಗಳಲ್ಲಿಯೂ ಸಹ ಚಾಲನೆ ನೀಡಲಾಗುವುದು ಎಂದು ಮಾಜಿ ಸಚಿವ ಶಾಸಕ ಬಸವರಾಜ ರಾಯರೆಡ್ಡಿ ಹೇಳಿದರು.
ಕುಕನೂರು ಪಟ್ಟಣದ ಬಸ್ ನಿಲ್ದಾಣದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಶಾಸಕ ಬಸವರಾಜ ರಾಯರೆಡ್ಡಿ ಮಾತನಾಡುತ್ತಾ ಕಾಂಗ್ರೆಸ್ ಸರ್ಕಾರದ ಚುನಾವಣೆ ಪೂರ್ವದಲ್ಲಿ ಐದು ಗ್ಯಾರಂಟಿಗಳನ್ನು ಘೋಷಣೆ ಮಾಡಿತ್ತು ಅದರಲ್ಲಿ ಮೊದಲನೆಯ ಮಹತ್ವಾಕಾಂಕ್ಷಿ ಮೊದಲ ಯೋಜನೆಯಾಗಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಅವಕಾಶ ನೀಡುವ ಶಕ್ತಿ ಯೋಜನೆಯು ಇದೇ ಭಾನುವಾರ ಜೂನ್ 11ರಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಂದ ರಾಜಧಾನಿ ಬೆಂಗಳೂರಿನಲ್ಲಿ ಚಾಲನೆ ನೀಡಲಿದ್ದು ಅದೇ ದಿನ ಕುಕನೂರು ಮತ್ತು ಯಲಬುರ್ಗಾ ಪಟ್ಟಣಗಳಲ್ಲಿಯೂ ಸಹ ವಿಶೇಷವಾಗಿ ಧಾರ್ಮಿಕ ಸ್ಥಳವಾದ ಧರ್ಮಸ್ಥಳಕ್ಕೆ ಹೊರಡುವ ಬಸ್ಸಿನಲ್ಲಿ ಮಹಿಳೆಯರಿಗೆ ಉಚಿತ ಟಿಕೆಟ್ ನೀಡುವುದರೊಂದಿಗೆ ಚಾಲನೆ ನೀಡಲಾಗುವುದು ಎಂದು ತಿಳಿಸಿದರು.
ಯಾವುದೇ ಕಂಡೀಶನ್ ಇಲ್ಲದೆ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ವ್ಯವಸ್ಥೆ ನಮ್ಮ ಸರ್ಕಾರ ಕಲ್ಪಿಸಿದ್ದು ಕೇವಲ ಪುರುಷರಿಗೆ 50% ಆಸನದ ಮೀಸಲಾತಿ ನಿಗದಿಪಡಿಸುವುದರೊಂದಿಗೆ ಸೌಲಭ್ಯ ಕಲ್ಪಿಸಿದ್ದು ಪುರುಷರಿಗೆ ಆಸನದಲ್ಲಾದರೂ ಮೀಸಲಾತಿ ಸಿಗಲಿ ಎಂಬ ಉದ್ದೇಶವಾಗಿದೆ ಎಂದು ನಗೆ ಚಟಾಕಿ ಹಾರಿಸಿದರು.
ಈ ಸಂದರ್ಭದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಕುಕನೂರು ಬಸ್ ನಿಲ್ದಾಣ ಇದುವರೆಗೂ ಉದ್ಘಾಟನೆಗೊಳ್ಳದೆ ಸುಮಾರು ಮೂರು ವರ್ಷಗಳಿಂದ ಸಾರ್ವಜನಿಕ ಸೇವೆಗೆ ಬಳಕೆಯಾಗುತ್ತಿರುವ ಬಸ್ ನಿಲ್ದಾಣವನ್ನು ಶಾಸ್ತ್ರೋತ್ರವಾಗಿ ಉದ್ಘಾಟನೆ ಮಾಡುವಂತೆ ಶಾಸಕರಿಗೆ ನಾಗರಿಕರು ಒತ್ತಾಯಿಸಿದರು. ನಾಗರೀಕರ ಒತ್ತಾಯಕ್ಕೆ ಮಣಿದ ಶಾಸಕರು ಬಸ್ ನಿಲ್ದಾಣ ಕಟ್ಟಡಕ್ಕೆ ಪುನಃ ಸುಣ್ಣಬಣ್ಣ ಮಾಡುವುದರೊಂದಿಗೆ ಸರಳವಾಗಿ ಉದ್ಘಾಟನೆಗೆ ವ್ಯವಸ್ಥೆ ಮಾಡುವಂತೆ ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬಸ್ ನಿಲ್ದಾಣದ ತುಂಬೆಲ್ಲ ಸಂಚರಿಸಿ ವೀಕ್ಷಣೆ ಮಾಡಿದ ಶಾಸಕರು ಕಡ್ಡಾಯವಾಗಿ ಸ್ವಚ್ಛತೆ ಪಾಲಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ಕೊಪ್ಪಳ ವಿಭಾಗದ ವ್ಯವಸ್ಥಾಪಕ ಬಿ ಆರ್ ಜಾಧವ್, ಕುಕನೂರು ಬಸ್ ಘಟಕದ ವ್ಯವಸ್ಥಾಪಕ ಸುನಿಲ ಕುಮಾರ್ ಹೈದ್ರಿ, ಪ್ರಮುಖರಾದ ಬಸವರಾಜ ಉಳ್ಳಾಗಡ್ಡಿ, ಕಾಸಿಂ ಸಾಬ್ ತಳಕಲ್, ಸತ್ಯನಾರಾಯಣಪ್ಪ ಹರಪನಹಳ್ಳಿ,ಮಂಜುನಾಥ ಕಡೆಮನಿ, ವೀರಯ್ಯ ತೋಂಟದಾರ್ಯಮಠ, ಗಗನ ನೋಟಗಾರ, ಸಂಗಮೇಶ ಗುತ್ತಿ, ಪಟ್ಟಣ ಪಂಚಾಯಿತಿ ಸದಸ್ಯರು ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.
ನಿಂಗರಾಜ ದೊಡ್ಡಮನಿ
Like
Dislike
Love
Angry
Sad
Funny
Wow
Your experience on this site will be improved by allowing cookies.
ಠೀಕೆಗಳು 0