ಬಿಜೆಪಿ ಪಕ್ಷದಿಂದ ಆರು ಬಾರಿ ಆಯ್ಕೆಗೊಂಡಿರುವ ನನಗೆ ಈ ಬಾರಿಯ ಟಿಕೆಟ್ ನ್ನು ನಿರಾಕರಿಸಿದ ಮುಖ್ಯಕಾರಣ ಜಗದೀಶ್ ಶೆಟ್ಟರ್ ಲಿಂಗಾಯತ ಮತಬ್ಯಾಂಕಿನ ಮಹಾನಾಯಕನಾಗುತ್ತಾನೆ ಎಂಬ ದೂರಾಲೋಚನೆಯಿಂದ
ಬಿಜೆಪಿ ಪಕ್ಷದಿಂದ ಆರು ಬಾರಿ ಆಯ್ಕೆಗೊಂಡಿರುವ ನನಗೆ ಈ ಬಾರಿಯ ಟಿಕೆಟ್ ನ್ನು ನಿರಾಕರಿಸಿದ ಮುಖ್ಯಕಾರಣ ಜಗದೀಶ್ ಶೆಟ್ಟರ್ ಲಿಂಗಾಯತ ಮತಬ್ಯಾಂಕಿನ ಮಹಾನಾಯಕನಾಗುತ್ತಾನೆ ಎಂಬ ದೂರಾಲೋಚನೆಯಿಂದ
ಗಜೇಂದ್ರಗಡ : ಬಿಜೆಪಿ ಪಕ್ಷದಿಂದ ಆರು ಬಾರಿ ಆಯ್ಕೆಗೊಂಡಿರುವ ನನಗೆ ಈ ಬಾರಿಯ ಟಿಕೆಟ್ ನ್ನು ನಿರಾಕರಿಸಿದ ಮುಖ್ಯಕಾರಣ ಜಗದೀಶ್ ಶೆಟ್ಟರ್ ಲಿಂಗಾಯತ ಮತಬ್ಯಾಂಕಿನ ಮಹಾನಾಯಕನಾಗುತ್ತಾನೆ ಎಂಬ ದೂರಾಲೋಚನೆಯಿಂದ ನನ್ನ ಕುಟುಂಬದವರಿಗೆ ಇಲ್ಲವೇ ನಾನು ಸೂಚಿಸುವ ವ್ಯಕ್ತಿಗೆ ಟಿಕೆಟ್ ಕೊಡುವುದಾಗಿ ಹೇಳಿದ ಕೆಲ ಬಿಜೆಪಿ ಮುಖಂಡರು ಮುಗಿಗೆ ತುಒ್ಪ ಒರೆಸುವ ಕಾಯಕ ಮಾಡಿದರು. ಇದನ್ನು ಮನಗಂಡೆ ನಾನು ಕಾಂಗ್ರೆಸ್ ಪಕ್ಷವನ್ನು ಸೇರುವ ಮೂಲಕ ರಾಜ್ಯದಲ್ಲಿ 140 ಕ್ಕೂ ಹೆಚ್ವು ಸೀಟುಗಳನ್ನು ಗೆಲ್ಲಿಸುವ ಭರವಸೆ ಹೊಂದಿದ್ದೇನೆ.
ಅಲ್ಲದೇ ಈವರೆಗೂ ಯಾವ ಸಮೂದಾಯ ಕೇವಲ ಮತಬ್ಯಾಂಕಾಗಿ ಕಾಣಿಸಿಕೊಂಡಿದೆಯೋ ಅಂತಹ ಸಮುದಾಯದ ಸಮಗ್ರ ಅಭಿವೃದ್ಧಿಯೊಂದಿಗೆ ರಾಜ್ಯದ ಅಭಿವೃದ್ಧಿಯನ್ನು ಮಾಡಬೇಕೆಂದು ಕಾಂಗ್ರೆಸ್ ಪಕ್ಷದ ಈ ಬಾಗದ ಅಭ್ಯರ್ಥಿ ಜಿ ಎಸ್ ಪಾಟೀಲ್ ಸೇರಿದಂತೆ ಮುಖಂಡರು ಚರ್ಚಿಸಿದ್ದೇವೆ. ರಾಜ್ಯದ ಮತ್ತು ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಕಂಕಣಬದ್ಧರಾಗುತ್ತೇವೆ ಈ ದಿಸೆಯಲ್ಲಿ ನಿವೇಲ್ಲರೂ ಈ ಬಾರಿ ಕಾಂಗ್ರೆಸ್ ಪಕ್ಷಕ್ಕೆ ಆಶೀರ್ವಾದಿಸುವ ಮೂಲಕ ಪಕ್ಷ ಪ್ರಚಂಡ ಬಹುಮತದಿಂದ ಆಯ್ಕೆಯಾಗಬೇಕೆಂದು ಜಗದೀಶ್ ಶೆಟ್ಟರ್ ಕರೆ ಕೊಟ್ಟರು.
ಅವರು ಗಜೇಂದ್ರಗಡದಲ್ಲಿನ ಎ ಪಿ ಎಂ ಸಿ ಎದುರಿಗಿದ್ದ ಬಯಲು ಜಾಗೆಯಲ್ಲಿನ ಕಾಂಗ್ರೆಸ್ ಪಕ್ಷದ ಪ್ರಚಾರ ಕಾರ್ಯಕ್ರಮದ ಜನಸ್ತೋಮವನ್ನು ಉದ್ದೇಶಿಸಿ ಇಂದು ಮಾತನಾಡಿದರು.
ಇದೇ ಸಂದರ್ಭದಲ್ಲಿ ಸಿದ್ದಣ್ಣ ಬಂಡಿ ಮಾತಾನಾಡುತ್ತಾ ಕಾಂಗ್ರೆಸ್ ಪಕ್ಷ ನೊಂದವರ, ಶೋಷಿತರ ಧ್ವನಿಯಾಗಿ ಸರ್ವರ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುತ್ತದೆ. ಹೀಗಾಗಿಯೇ ಸಮರ್ಥ ನಾಯಕರು ಕಾಂಗ್ರೆಸ್ ಪಕ್ಷದ ಹುರಿಯಾಳಾಗಿ ಕಣಕ್ಕಿಳಿದ್ದಿದ್ದಾರೆ. ಈ ಕ್ಷೇತ್ರದಲ್ಲಿ ಮಾತ್ರವಲ್ಲದೇ ರಾಜ್ಯದ ಎಲ್ಲಾ ಕಾಂಗ್ರೆಸ್ ಪಕ್ಷದ ಪ್ರತಿನಿಧಿಗಳು ಆಯ್ಕೇಗೊಳ್ಳುವ ಮೂಲಕ ಕಾಂಗ್ರೆಸ್ ಅಧಿಕಾರದ ಚುಕ್ಕಾಣೆ ಹಿಡಿಯಲಿದೆ ಎಂದರು.
ಬಹುತೇಕ ರಾಜಕೀಯ ಮುಖಂಡರು ಮಾತನಾಡಿ ಪಕ್ಷವನ್ನು ಮತ್ತು ಈ ಮತಕ್ಷೇತ್ರದ ಅಭ್ಯರ್ಥಿಯನ್ನು ಆಶೀರ್ವದಿಸುವ ಮೂಲಕ ಕಾಂಗ್ರೆಸ್ ಪಕ್ಷ ಅಧಿಕಾರದ ಚುಕ್ಕಾಣೆ ಹಿಡಿಯುವಲ್ಲಿ ನಿಮ್ಮೆಲ್ಲರ ಪಾತ್ರ ಮಹತ್ವದಾಗಿದೆ ಎಂದು ತಿಳಿಸಿದರು.
ಬಹಿರಂಗ ಸಭೆಯಲ್ಲಿ ಮಾಜಿ ಸಂಸದ ಆರ್. ಎಸ್. ಪಾಟೀಲ್, ಐ. ಎಸ್. ಪಾಟೀಲ, ಪ್ರಶಾಂತ ಪಾಟೀಲ,ಮಿಥುನ ಪಾಟೀಲ,ವೀರಣ್ಣ ಶೆಟ್ಟರ, ಮಂಜುಳಾ ಹುಲ್ಲಣ್ಣನವರ, ಮಂಜುಳಾ ರೇವಡಿ, ನೀಲಮ್ಮ ಬಳೂಟಗಿ, ಅನ್ನಪೂರ್ಣ ಪಾಟೀಲ ಅಶೋಕ ಭಾಗಮಾರ, ನ್ಯಾಯವಾದಿ ವಿ.ಆರ್.ಗುಡಿಸಾಗರ ,ವಿ.ಬಿ. ಸೊಮ್ಮನಕಟ್ಟಿಮಠ, ವೀರಣ್ಣ ಶಟ್ಟರ, ಶಿವರಾಜ ಘೋರ್ಪಡೆ, ಶ್ರೀಧರ ಬಿದರಳ್ಳಿ, ರಾಜೂ ಸಾಂಗ್ಲಿಕರ್, ಪರಶುರಾಮ ಅಳಗವಾಡಿ, ಯಲ್ಲಪ್ಪ ಬಂಕದ, ಶ್ರೀಕಾಂತ ಅವಧೂತ, ರಫೀಕ ತೋರಗಲ್,ವಿಶ್ವನಾಥ ಜಿಡ್ಡಿಬಾಗಿಲ, ಎಚ್.ಎಸ್.ಸೊಂಪೂರ, ಎ.ಡಿ.ಕೋಲಕಾರ, ಚನ್ನಬಸಪ್ಪ ಮೇಟಿ, ಶರಣು ಪೂಜಾರ, ಪ್ರಭು ಚವಡಿ, ಮುರ್ತುಜಾ ಡಾಲಾಯತ,ಸುಭಾನಸಾಬ ಆರಗಿದ್ದಿ, ಬಸವರಾಜ ಚನ್ನಿ, ರೀಯಾಜ್ ವಂಟಿ, ಬಾಷಾಸಾಬ ಮುದಗಲ್, ಪ್ರಶಾಂತ ರಾಠೋಡ, ಮುತ್ತಣ್ಣ ಮ್ಯಾಗೇರಿ, ಹಸನಸಾಬ ತಟಗಾರ, ಇಮ್ರಾನ ಅತ್ತಾರ, ಶಶಿಧರ ಹೂಗಾರ, ಶಶಿಧರ ವಕ್ಕಲರ,ಶಿವು ಚವ್ಹಾಣ, ಉಮೇಶ ರಾಠೋಡ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
Like
Dislike
Love
Angry
Sad
Funny
Wow
Your experience on this site will be improved by allowing cookies.
ಠೀಕೆಗಳು 0