ಗ್ರಾಮೀಣ ಪ್ರದೇಶಗಳ ಮಕ್ಕಳಲ್ಲಿಯೂ ಕೂಡ ತಮ್ಮದೇ ಆದ ಪ್ರತಿಭೆ ಇರುತ್ತದೆ ಅವುಗಳನ್ನು ಬೆಳಗಿಗೆ ತರಲು ಶಿಕ್ಷಣ ಒಂದು ಉತ್ತಮ ವೇದಿಕೆಯಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಧಿಕಾರಿ ರಾಹುಲ್ ರತ್ನಂ ಹೇಳಿದರು.
ಗ್ರಾಮೀಣ ಪ್ರದೇಶಗಳ ಮಕ್ಕಳಲ್ಲಿಯೂ ಕೂಡ ತಮ್ಮದೇ ಆದ ಪ್ರತಿಭೆ ಇರುತ್ತದೆ ಅವುಗಳನ್ನು ಬೆಳಗಿಗೆ ತರಲು ಶಿಕ್ಷಣ ಒಂದು ಉತ್ತಮ ವೇದಿಕೆಯಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಧಿಕಾರಿ ರಾಹುಲ್ ರತ್ನಂ ಹೇಳಿದರು.
ಕುಕನೂರು : ಗ್ರಾಮೀಣ ಪ್ರದೇಶಗಳ ಮಕ್ಕಳಲ್ಲಿಯೂ ಕೂಡ ತಮ್ಮದೇ ಆದ ಪ್ರತಿಭೆ ಇರುತ್ತದೆ ಅವುಗಳನ್ನು ಬೆಳಗಿಗೆ ತರಲು ಶಿಕ್ಷಣ ಒಂದು ಉತ್ತಮ ವೇದಿಕೆಯಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಧಿಕಾರಿ ರಾಹುಲ್ ರತ್ನಂ ಹೇಳಿದರು. ತಾಲೂಕಿನ ಭಾನಾಪುರ ಮತ್ತು ತಳಕಲ್ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಪ್ರಾರಂಭವಾದ ಬೇಸಿಗೆ ಶಿಬಿರಗಳಿಗೆ ಬೇಟಿ ನೀಡಿ ಬೇಸಿಗೆ ಶಿಬಿರದ ಓದುವ ಬೆಳಕು ಕಾರ್ಯಕ್ರಮದಲ್ಲಿ ಮಕ್ಕಳು ಮಾಡಿದ ದೈನಂದಿನ ಚಟುವಟಿಕೆಗಳ ಕ್ರಾಫ್ಟ್ ಗಳನ್ನು ವೀಕ್ಷಣೆ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿ ಮಾತನಾಡಿದ ಅವರು ಗ್ರಾಮೀಣ ಪ್ರದೇಶಗಳಲ್ಲಿ ಬೇಸಿಗೆಯ ಶಿಬಿರಗಳನ್ನು ಆಯೋಜಿಸಿದ್ದು ಗ್ರಾಮೀಣ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗಿದೆ ಗ್ರಾಮೀಣ ಮಕ್ಕಳಲ್ಲಿ ಅವರದೇ ಆದ ಪ್ರತಿಭೆ ಇರುತ್ತದೆ ಅದನ್ನು ಬೆಳಕಿಗೆ ತರುವಲ್ಲಿ ಶಿಕ್ಷಣ ಅತ್ಯಂತ ಮಹತ್ವವಾಗಿದ್ದು ಎಲ್ಲ ಮಕ್ಕಳು ಶಿಕ್ಷಣದಿಂದ ವಂಚಿತರಾಗದೆ ಶಿಕ್ಷಣ ಪಡೆಯಬೇಕು ಮತ್ತು ಮಕ್ಕಳು ಬೇಸಿಗೆ ಶಿಬಿರವನ್ನು ಸಂತೋಷವಾಗಿ ಕಳೆದ ಜೊತೆಗೆ ಲಗೋರಿ, ಖೋ ಖೋ, ಕಬಡ್ಡಿ,ಕ್ಯಾರಂ ಬೋರ್ಡ್, ಕೆರೆದಡ, ಹಾವು ಏಣಿ ಗಳಂತ ದೇಹ ಮತ್ತು ಬುದ್ಧಿ ಶಕ್ತಿ ಹೆಚ್ಚಿಸುವ ಆಟಗಳನ್ನು ಆಡಬೇಕು ಎಂದು ಹೇಳಿದರು. ಮಕ್ಕಳೊಂದಿಗೆ ಲಗೋರಿ ಆಟವಾಡಿ ಸಂಭ್ರಮಿಸಿದರು ಅವರು ನಂತರದಲ್ಲಿ ತಳಕಲ್ ಗ್ರಾಮ ಪಂಚಾಯತಿ ಉದ್ಯಾನವನ ಮಹಿಳಾ ಸ್ವಸಹಾಯ ಸಂಘದ ಮೊಬೈಲ್ ಕ್ಯಾಂಟೀನ್ , ಆರೋಗ್ಯ ಕೇಂದ್ರ, ಪೋಸ್ಟ್ ಆಫೀಸ್ ,ಗ್ರಾಮ ಪಂಚಾಯಿತಿ ,ಕುಡಿಯುವ ನೀರಿನ ನಿರ್ವಹಣೆ ವೀಕ್ಷಣೆ ಮಾಡಿದರು. ಈ ಸಂದರ್ಭದಲ್ಲಿ ತಾಲೂಕು ಪಂಚಾಯತ್ ಸಹಾಯ ನಿರ್ದೇಶಕ ವೆಂಕಟೇಶ್ ವಂದಲ್, ಐಇಸಿ ಸಂಯೋಜಕರು, ತಾಂತ್ರಿಕ ಸಹಾಯಕರು, ಎಸ್ ಬಿ ಎಂ ಸಮಾಲೋಚಕರು, ಲೈಬ್ರರಿಯನ್ ಗಳು ಉಪಸ್ಥಿತರಿದ್ದರು.
ನಿಂಗರಾಜ ದೊಡ್ಡಮನಿ
Like
Dislike
Love
Angry
Sad
Funny
Wow
Your experience on this site will be improved by allowing cookies.
ಠೀಕೆಗಳು 0