ಎಲ್ಲಾ ಕಾರ್ಮಿಕರು ತಪಾಸಣೆಯನ್ನು ಮಾಡಿಸಿಕೊಂಡು ಆರೋಗ್ಯ ಕಾಪಾಡಿಕೊಳ್ಳಬೇಕು. ನೀವು ದಿನಪೂರ್ತಿ ಕೆಲಸ ಮಾಡುವುದರಿಂದ ಸಣ್ಣಪುಟ್ಟ ರೋಗಗಳು ಬರುವಂತ ಸಂಭವ ತುಂಬಾ ಕಡಿಮೆ ಆದರೂ ಆರೋಗ್ಯ ತಪಾಸಣೆ ಮುಖ್ಯವಾಗಿದೆ.
ಎಲ್ಲಾ ಕಾರ್ಮಿಕರು ತಪಾಸಣೆಯನ್ನು ಮಾಡಿಸಿಕೊಂಡು ಆರೋಗ್ಯ ಕಾಪಾಡಿಕೊಳ್ಳಬೇಕು. ನೀವು ದಿನಪೂರ್ತಿ ಕೆಲಸ ಮಾಡುವುದರಿಂದ ಸಣ್ಣಪುಟ್ಟ ರೋಗಗಳು ಬರುವಂತ ಸಂಭವ ತುಂಬಾ ಕಡಿಮೆ ಆದರೂ ಆರೋಗ್ಯ ತಪಾಸಣೆ ಮುಖ್ಯವಾಗಿದೆ.
ಕುಕನೂರು :
ಎಲ್ಲಾ ಕಾರ್ಮಿಕರು ತಪಾಸಣೆಯನ್ನು ಮಾಡಿಸಿಕೊಂಡು ಆರೋಗ್ಯ ಕಾಪಾಡಿಕೊಳ್ಳಬೇಕು. ನೀವು ದಿನಪೂರ್ತಿ ಕೆಲಸ ಮಾಡುವುದರಿಂದ ಸಣ್ಣಪುಟ್ಟ ರೋಗಗಳು ಬರುವಂತ ಸಂಭವ ತುಂಬಾ ಕಡಿಮೆ ಆದರೂ ಆರೋಗ್ಯ ತಪಾಸಣೆ ಮುಖ್ಯವಾಗಿದೆ. ತಮಗೆಲ್ಲಾ ತಿಳಿದಿರುವಂತೆ ಸಣ್ಣ ರೋಗವು ಮುಂದೊಂದು ದಿನ ದೊಡ್ಡ ರೋಗವಾಗಿ ಮಾರ್ಪಾಡಾಗುವ ಸಂಭವವಿರುತ್ತದೆ. ಹಾಗಾಗಿ ಕಾರ್ಮಿಕರೆಲ್ಲರೂ ಆರೋಗ್ಯ ತಪಾಸಣೆ ಮಾಡಿಸಿಕೊಂಡು ಆರೋಗ್ಯದ ಬಗ್ಗೆ ಗಮನ ಹರಿಸಬೇಕೆಂದು ಕೆಎಚ್ಪಿಟಿ ಸಂಯೋಜಕ ಮಹಮ್ಮದ್ ರಫಿ ತಿಳಿಸಿದರು.
ತಾಲೂಕಿನ ಮಂಡಲಗಿರಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಬಟಪನ ಹಳ್ಳಿ ಗ್ರಾಮದಲ್ಲಿ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೂಲಿ ಕಾರ್ಮಿಕರು ಕಾರ್ಯನಿರ್ವಹಿಸುತ್ತಿದ್ದ ಸ್ಥಳದಲ್ಲಿಯೇ ಪಂಚಾಯತ್ ರಾಜ್ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಕೆಎಚ್ಪಿಟಿ ಸಂಸ್ಥೆಯ ಸಹಯೋಗದೊಂದಿಗೆ ಕೂಲಿ ಕಾರ್ಮಿಕರಿಗೆ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜನೆ ಮಾಡಲಾಗಿತ್ತು.
ಕಾರ್ಯಕ್ರಮ ಉದ್ದೇಶಿಸಿ ಕೆಎಚ್ಪಿಟಿ ಸಂಯೋಜಕ ಮಹಮ್ಮದ್ ರಫಿ ಎಲ್ಲಾ ಕಾರ್ಮಿಕರು ಕೇವಲ ಕೂಲಿ ಕೆಲಸ ಹಾಗೂ ವೇತನ ಕಡೆ ಗಮನಹರಿಸುತ್ತಿದ್ದಾರೆ, ತಮ್ಮ ಆರೋಗ್ಯದ ಕಡೆ ನಿರ್ಲಕ್ಷ ತೋರುತ್ತಿರುವುದು ನಿಜಕ್ಕೂ ಬೇಸರದ ಸಂಗತಿ ಆದ್ದರಿಂದ ಸರ್ಕಾರ ಕಾರ್ಮಿಕರು ಕೆಲಸ ನಿರ್ವಹಿಸುವ ಸ್ಥಳದಲ್ಲಿಯೇ ಆಯೋಜನೆ ಮಾಡಿರುವ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಪ್ರತಿಯೊಬ್ಬರು ಪಾಲ್ಗೊಂಡು ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದರ ಜೊತೆ ಆರೋಗ್ಯ ಇಲಾಖೆಯ ಸೂಕ್ತ ಮಾರ್ಗದರ್ಶನದಂತೆ ಔಷಧೋಪಚಾರ ಪಡೆದು ಆರೋಗ್ಯವಂತರಾಗಿ ಸತತವಾಗಿ ಕಾರ್ಯನಿರ್ವಹಿಸಲು ಮುಂದಾಗಲು ತಯಾರಾಗಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಕವಿತಾ ಕೌದಿ ಮಾತನಾಡುತ್ತಾ ಒಬ್ಬರಿಂದ ಇನ್ನೊಬ್ಬರಿಗೆ ಹರಡುವ ಸಾಧ್ಯತೆ ಹೆಚ್ಚಾಗಿರುತ್ತದೆ. ಎಲ್ಲಾ ತರಹದ ಆರೋಗ್ಯ ಸಮಸ್ಯೆಗೆ ಸರ್ಕಾರದ ಬಳಿ ಔಷಧಗಳು ಲಭ್ಯ ಇದ್ದು ಪ್ರತಿಯೊಬ್ಬರು ಮುಕ್ತ ಮನಸ್ಸಿನಿಂದ ತಮ್ಮ ಸಮಸ್ಯೆಯನ್ನು ಆರೋಗ್ಯ ಸಿಬ್ಬಂದಿಗಳೊಂದಿಗೆ ಹಂಚಿಕೊಂಡಾಗ ಸೂಕ್ತ ಚಿಕಿತ್ಸೆ ದೊರೆಯುವುದು ನಿಶ್ಚಿತ ಎಂದು ಹೇಳುತ್ತಾ ಕ್ಷಯ ರೋಗದ ಕುರಿತು ವಿವರವಾದ ಮಾಹಿತಿಯನ್ನು ನೀಡಿದರು.
ಬಟಪ್ಪನಹಳ್ಳಿ ಗ್ರಾಮದ ನರೇಗಾ ಕೂಲಿಕಾರ್ಮಿಕ ಯಲ್ಲಪ್ಪ ಪೊತುಂಡಿ ಮಾತನಾಡುತ್ತಾ ಸರ್ಕಾರವು ಉದ್ಯೋಗ ಖಾತ್ರಿ ಯೋಜನೆಯಲ್ಲಿ ಗ್ರಾಮಗಳಲ್ಲಿಯೇ ಕೆಲಸ ನೀಡುತ್ತಿದ್ದು ಗ್ರಾಮದ ಕೂಲಿಕಾರ್ಮಿಕರು ಗುಳೇ ಹೋಗಿ ಹೋಗುವುದನ್ನು ತಪ್ಪಿಸಿದಂತಾಗಿದೆ. ಕೂಲಿ ನೀಡುವುದರೊಂದಿಗೆ ಉಚಿತ ಆರೋಗ್ಯ ತಪಾಸಣೆಯ ವ್ಯವಸ್ಥೆಯನ್ನು ಮಾಡಿರುವುದು ಉದ್ಯೋಗ ಖಾತ್ರಿ ಯೊಂದಿಗೆ ಆರೋಗ್ಯವು ಖಾತ್ರಿ ಎಂದು ಸಂತಸದಿಂದ ಹೇಳಬಹುದಾಗಿದೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸಿಬ್ಬಂದಿಗಳಾದ ರೇವಣಪ್ಪ ದ್ಯಾಂಪುರ, ಸಂತೋಷ ಭಂಡಾರಿ, ಕೆ ಎಚ್ ಪಿ ಟಿ ಸಿಬ್ಬಂದಿ ಉಮಾಶ್ರೀ ಗಾಂಜಿ, ಆರೋಗ್ಯ ಸಹಾಯಕಿ ಸುಗುಣ ರೆಡ್ಡಿ, ಆಶಾ ಕಾರ್ಯಕರ್ತೆಯರು, 300ಕ್ಕೂ ಹೆಚ್ಚು ಕೂಲಿ ಕಾರ್ಮಿಕರು ಪಾಲ್ಗೊಂಡಿದ್ದರು.
Like
Dislike
Love
Angry
Sad
Funny
Wow
Your experience on this site will be improved by allowing cookies.
ಠೀಕೆಗಳು 0