ರಾಜ್ಯ ಸರ್ಕಾರದಲ್ಲಿ ಯಾವುದೇ ನಿರ್ಧಾರ ತೆಗೆದುಕೊಂಡರೂ ಮೊದಲು ಸರ್ಕಾರದ ಮುಖ್ಯಸ್ಥ ಎನಿಸಿಕೊಳ್ಳುವ ಮುಖ್ಯಮಂತ್ರಿ ಕಚೇರಿ ತಲುಪಬೇಕು ಎನ್ನುವುದು ಸರಿ.
ರಾಜ್ಯ ಸರ್ಕಾರದಲ್ಲಿ ಯಾವುದೇ ನಿರ್ಧಾರ ತೆಗೆದುಕೊಂಡರೂ ಮೊದಲು ಸರ್ಕಾರದ ಮುಖ್ಯಸ್ಥ ಎನಿಸಿಕೊಳ್ಳುವ ಮುಖ್ಯಮಂತ್ರಿ ಕಚೇರಿ ತಲುಪಬೇಕು ಎನ್ನುವುದು ಸರಿ.
ಬೆಂಗಳೂರು :
ರಾಜ್ಯ ಸರ್ಕಾರದಲ್ಲಿ ಯಾವುದೇ ನಿರ್ಧಾರ ತೆಗೆದುಕೊಂಡರೂ ಮೊದಲು ಸರ್ಕಾರದ ಮುಖ್ಯಸ್ಥ ಎನಿಸಿಕೊಳ್ಳುವ ಮುಖ್ಯಮಂತ್ರಿ ಕಚೇರಿ ತಲುಪಬೇಕು ಎನ್ನುವುದು ಸರಿ. ಆದರೆ ಮುಖ್ಯಮಂತ್ರಿಯನ್ನು ತಲುಪುವ ಮುನ್ನವೇ ವಿಧಾನಸೌಧದಿಂದ ದೂರದಲ್ಲಿರುವ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಕೈ ಸೇರಲಿದೆ ಎನ್ನುವುದು ಚರ್ಚಾ ವಿಚಾರವಾಗಿದೆ. ವಿಧಾನಸೌಧದಲ್ಲಿ ಕೆಲಸ ಮಾಡುವ ಬಹುತೇಕ ಅಧಿಕಾರಿಗಳು ಹಾಗು ಸಿಬ್ಬಂದಿ ವರ್ಗದ ಜೊತೆಗೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಉತ್ತಮ ಬಾಂಧವ್ಯ ಹೊಂದಿದ್ದು, ಕಡತಗಳು, ಸರ್ಕಾರದ ಅಜೆಂಡಾಗಳು ಮುಖ್ಯಮಂತ್ರಿಯನ್ನು ತಲುಪುವ ಮುನ್ನವೇ ಕುಮಾರಸ್ವಾಮಿ ಕಚೇರಿಗೆ ತಲುಪುತ್ತವೆ ಎನ್ನಲಾಗ್ತಿದೆ. ಇದೇ ಕಾರಣಕ್ಕೆ ಕುಮಾರಸ್ವಾಮಿ ಆರೋಪ ಮಾಡಿದರೆ ಅಲ್ಲಗಳೆಯುವುದು ಸಾಧ್ಯವಿಲ್ಲ ಅನ್ನೋದು ಕೂಡ ಚರ್ಚಾ ವಿಚಾರ.
ಮುಖ್ಯಮಂತ್ರಿ ಕಚೇರಿಯಲ್ಲೇ ನಡೀತಿದೆ ವರ್ಗಾವಣೆ ದಂಧೆ..!
ರಾಜ್ಯ ಸರ್ಕಾರ ಅಸ್ತಿತ್ವಕ್ಕೆ ಬಂದು 50 ದಿನಗಳು ಕಳೆದಿವೆ. ಅಧಿಕಾರಿಗಳನ್ನು ವರ್ಗಾವಣೆ ಮಾಡಿಕೊಳ್ಳುವುದು ಸರಿಯಷ್ಟೆ. ಆದರೆ ‘ಕಾಸಿಲ್ಲದೆ ವರ್ಗಾವಣೆಯಿಲ್ಲ’ ಎನ್ನುವ ಮೂಲಕ ಮಾಜಿ ಸಿಎಂ ಕುಮಾರಸ್ವಾಮಿ ಸಂಚಲನ ಮೂಡಿಸಿದ್ದಾರೆ. ರಾಜ್ಯ ಸರ್ಕಾರ ಅಧಿಕಾರಿಗಳ ವರ್ಗಾವಣೆಗೆ ಹಣ ಪಡೆಯುತ್ತಿದೆ. ಹಣ ಕೊಡದ ಹೊರತು ಬೇಕಾದ ಆಯಕಟ್ಟಿನ ಜಾಗಕ್ಕೆ ವರ್ಗಾವಣೆ ಸಾಧ್ಯವಿಲ್ಲ ಎನ್ನುವುದು ಮಾಜಿ ಸಿಎಂ ಕುಮಾರಸ್ವಾಮಿ ಆರೋಪ. ಅದೂ ಅಲ್ಲದೆ ವರ್ಗಾವಣೆ ದಂಧೆ ನಡೆಯುತ್ತಿರುವ ಮುಖ್ಯಮಂತ್ರಿಗಳ ಕಚೇರಿಯಲ್ಲಿ ಎಂದಿದ್ದಾರೆ. ವರ್ಗಾವಣೆ ಮಾಡುವುದಕ್ಕೇ ಸಿಂಡಿಕೇಟ್ಗಳ ರಚನೆ ಮಾಡಲಾಗಿದೆ. ಎಲ್ಲವೂ ಮುಖ್ಯಮಂತ್ರಿ ಮೂಗಿನ ನೇರದಲ್ಲಿ ನಡೆಯುತ್ತಿದೆ. ಭ್ರಷ್ಟಾಚಾರಕ್ಕೆ ಕಡಿವಾಣ ಹಾಕ್ತೇವೆ ಎಂದು ಅಧಿಕಾರಕ್ಕೆ ಬಂದವರು ಈಗ ಮಾಡುತ್ತಿರೋದು ಏನು..? ಎನ್ನುವುದು ಕುಮಾರಸ್ವಾಮಿ ಪ್ರಶ್ನೆ.
ಕುಮಾರಸ್ವಾಮಿ ಗಾಳಿಯಲ್ಲಿ ಗುಂಡು.. ಪರ-ವಿರೋಧ..!
ಮಾಜಿ ಸಿಎಂ ಕುಮಾರಸ್ವಾಮಿ ಸುಖಾಸುಮ್ಮನೆ ಆರೋಪ ಮಾಡ್ತಾರೆ. ಯಾವುದೇ ಸಾಕ್ಷಿ ಪುರಾವೆಗಳು ಇಲ್ಲದೆ ಗಾಳಿಯಲ್ಲಿ ಗುಂಡು ಹಾರಿಸಿದಂತೆ ಆರೋಪಗಳನ್ನು ಮಾಡುತ್ತಾರೆ ಎನ್ನುವುದು ಕಾಂಗ್ರೆಸ್ ಪರ ಇರುವ ನಾಯಕರ ಮಾತು. ಆದರೆ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದವರು. ಅವರು ಹೇಳುವ ಮಾತಿನಲ್ಲಿ ಸತ್ಯ ಇರುತ್ತದೆ. ಅಷ್ಟು ಮಾತ್ರವಲ್ಲದೆ, ಕುಮಾರಸ್ವಾಮಿ ವಿಧಾನಸೌಧದ ಅಧಿಕಾರಿಗಳ ಮೇಲೆ ಹಿಡಿತ ಸಾಧಿಸಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರಿಗೆ ಮಾಹಿತಿ ತಲುಪುವ ಮುನ್ನವೇ ಕುಮಾರಸ್ವಾಮಿಯನ್ನು ತಲುಪಿರುತ್ತದೆ ಎನ್ನುವುದು ಬಿಜೆಪಿ ನಾಯಕರ ಮಾತು. ಮಾಜಿ ಸಿಎಂ ಕುಮಾರಸ್ವಾಮಿ ಕೂಡ ನಾನು ಸುಖಾಸುಮ್ಮನೆ ಆರೋಪ ಮಾಡಲ್ಲ, ನನ್ನ ಬಳಿ ಕಾಂಗ್ರೆಸ್ ಕೇಳ್ತಿರೋ ಎಲ್ಲಾ ದಾಖಲೆಗಳು ಇವೆ. ಆದರೆ ಬಿಜೆಪಿ ವಿರುದ್ಧ ಆರೋಪ ಮಾಡಿದ್ದ ಕಾಂಗ್ರೆಸ್ ಯಾವುದಾದರೂ ದಾಖಲೆ ಬಿಡುಗಡೆ ಮಾಡಿತ್ತಾ..? ಇಲ್ಲ ಎಂದಾದ ಮೇಲೆ ಈಗ ದಾಖಲೆ ಕೇಲ್ತಿರೋದು ಯಾಕೆ ಎಂದು ತಿರುಗೇಟು ನೀಡಿದ್ದಾರೆ.
ಕುಮಾರಸ್ವಾಮಿ ಕಟ್ಟಿ ಹಾಕಲು ಸಿದ್ದರಾಮಯ್ಯ ಟೀಂ ಸಿದ್ಧತೆ..!
ಕುಮಾರಸ್ವಾಮಿ ಮಾಡಿರುವ ಆರೋಪದಲ್ಲಿ ಹುರುಳಿದ್ಯಾ..? ಇಲ್ವಾ..? ಅನ್ನೋದು ಹೊರಗಿನ ಪ್ರಪಂಚಕ್ಕೆ ಗೊತ್ತಿಲ್ಲ. ಕಾಂಗ್ರೆಸ್ ನಿರಾಕರಿಸಿದ್ರೆ, ಬಿಜೆಪಿ ಬೆಂಬಲಿಸಿದೆ. ಆದರೆ ಕುಮಾರಸ್ವಾಮಿ ಸರ್ಕಾರದ ವಿರುದ್ಧ ಮಾಡುತ್ತಿರುವ ಆರೋಪಗಳು ಸರ್ಕಾರದ ಇಮೇಜ್ಗೆ ಧಕ್ಕೆ ತರುವ ಸಾಧ್ಯತೆ ಹೆಚ್ಚಾಗಿದೆ. ಅಧಿಕಾರಕ್ಕೆ ಬಂದು ಎರಡೇ ತಿಂಗಳಿಗೆ ಸಾರ್ವಜನಿಕ ವಲಯದಲ್ಲಿ ಕೆಟ್ಟ ಅಭಿಪ್ರಾಯ ಮೂಡಿದರೆ ಮುಂದಿನ ಚುನಾವಣೆಯಲ್ಲಿ ಸಂಕಷ್ಟ ಎದುರಾಗುವ ಸಾಧ್ಯತೆಯಿದೆ. ಇದೇ ಕಾರಣಕ್ಕೆ ಕುಮಾರಸ್ವಾಮಿ ಮಾತಿಗೆ ಕಡಿವಾಣ ಹಾಕಲು ಸಿದ್ದರಾಮಯ್ಯ ಸೂಚನೆ ಕೊಟ್ಟಿದ್ದಾರೆ ಎನ್ನಲಾಗಿದೆ. ತಮ್ಮ ಆಪ್ತ ಬಣದಲ್ಲಿರುವ ಸಚಿವ ಜಮೀರ್ ಅಹ್ಮದ್, ಎನ್.ಚಲುವರಾಯಸ್ವಾಮಿ, ಬೈರತಿ ಸುರೇಶ್ ಸೇರಿದಂತೆ ಪ್ರಮುಖರ ಮೂಲಕವೇ ತಿರುಗೇಟು ಕೊಡಿಸುವುದು. ಕುಮಾರಸ್ವಾಮಿ ಕಾಲದಲ್ಲಿ ನಡೆದಿರುವ ವರ್ಗಾವಣೆಗಳ ಬಗ್ಗೆ ಉಲ್ಲೇಖಿಸಿ, ಕುಮಾರಸ್ವಾಮಿ ಬಾಯಿ ಮುಚ್ಚಿಸುವ ಕೆಲಸವನ್ನು ನೀಡಲಾಗಿದೆ ಎನ್ನಲಾಗ್ತಿದೆ. ಅದೇನೇ ಇರಲಿ. ಸರ್ಕಾರದ ಮುಖ್ಯಸ್ಥನಿಗೆ ತಲುಪುವ ಮಾಹಿತಿ ಕುಮಾರಸ್ವಾಮಿಗೆ ಮೊದಲೇ ತಲುಪುತ್ತದೆ ಎನ್ನುವುದು ಮಾತ್ರ ಸರಿಯಲ್ಲ.
ಸಂ-
Like
Dislike
Love
Angry
Sad
Funny
Wow
Your experience on this site will be improved by allowing cookies.
ಠೀಕೆಗಳು 0