ನೂತನ ಶಾಸಕ ಬಸವರಾಜ ರಾಯರೆಡ್ಡಿ ಅವರು ಕುಕನೂರು ಪಟ್ಟಣಕ್ಕೆ ಹೊಸ ಸ್ಪರ್ಶ ನೀಡಲಿದ್ದಾರೆ ಎಂದು ಪಟ್ಟಣ ಪಂಚಾಯಿತಿ ಸದಸ್ಯ ಗಗನ್ ನೋಟಗಾರ ಹೇಅಳಿದರು.
ನೂತನ ಶಾಸಕ ಬಸವರಾಜ ರಾಯರೆಡ್ಡಿ ಅವರು ಕುಕನೂರು ಪಟ್ಟಣಕ್ಕೆ ಹೊಸ ಸ್ಪರ್ಶ ನೀಡಲಿದ್ದಾರೆ ಎಂದು ಪಟ್ಟಣ ಪಂಚಾಯಿತಿ ಸದಸ್ಯ ಗಗನ್ ನೋಟಗಾರ ಹೇಅಳಿದರು.
ಕುಕನೂರು :
ನೂತನ ಶಾಸಕ ಬಸವರಾಜ ರಾಯರೆಡ್ಡಿ ಅವರು ಕುಕನೂರು ಪಟ್ಟಣಕ್ಕೆ ಹೊಸ ಸ್ಪರ್ಶ ನೀಡಲಿದ್ದಾರೆ ಎಂದು ಪಟ್ಟಣ ಪಂಚಾಯಿತಿ ಸದಸ್ಯ ಗಗನ್ ನೋಟಗಾರ ಹೇಳಿದರು.
ಪಟ್ಟಣದಲ್ಲಿ ನಡೆದ ಬ್ಲಾಕ್ ಕಾಂಗ್ರೆಸ್ ಸಮಿತಿಯಿಂದ ಆಯೋಜಿಸಿದ್ದ ಮತದಾರ ಬಾಂಧವರಿಗೆ ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಿಗೆ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು 2023ರ ಚುನಾವಣೆಯಲ್ಲಿ ನಾಡಿನ ಮತದಾರ ಬಾಂಧವರು ಕಾಂಗ್ರೆಸ್ ಪಕ್ಷಕ್ಕೆ 135 ಕ್ಷೇತ್ರಗಳಲ್ಲಿ ಗೆಲುವು ನೀಡುವ ಮೂಲಕ ಬಹುಮತದ ಸರ್ಕಾರ ರಚನೆ ಮಾಡಿದ್ದಾರೆ ಹಾಗೆಯೇ ಕ್ಷೇತ್ರದ ಜನತೆ ಯಾವುದೇ ರೀತಿಯ ಆಸೆ ಆಮಿಷಕ್ಕೆ ಒಳಗಾಗದೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಬಸವರಾಜ ರಾಯರೆಡ್ಡಿ ಅವರಿಗೆ 17ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲ್ಲಿಸುವ ಮೂಲಕ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಸಹಕರಿಸಿದ್ದಾರೆ , ಕುಕನೂರು ಹೊಸ ತಾಲೂಕು ರಚನೆಗೆ ಶಾಸಕ ಬಸವರಾಜ ರಾಯರೆಡ್ಡಿ ಅವರು ಅವಿರತ ಶ್ರಮಿಸಿದ್ದು, ತಾಲೂಕು ಮತ್ತು ಕುಕನೂರು ಪಟ್ಟಣಕ್ಕೆ ಶಾಸಕರಿಂದ ಹೊಸ ಸ್ಪರ್ಶ ಸಿಗಲಿದೆ ಎಂದರು.
ಕ್ಷೇತ್ರದಲ್ಲಿ ವಿರೋಧ ಪಕ್ಷದವರು ಬರಿ ಹಣ, ಜಾತಿ ಧರ್ಮದ ಆಧಾರದ ಮೇಲೆ ಚುನಾವಣೆ ನಡೆಸಿದ್ದರು, ವಿರೋಧ ಪಕ್ಷದ ಅಭ್ಯರ್ಥಿಗೆ ಚುನಾವಣಾ ಟೀಕೆಟ್ ಸಿಕ್ಕಾಗ ಅವರು ವಿಜಯೊತ್ಸವದ ಸಂಕೇತವಾಗಿ ಪಟಾಕಿ ಸಿಡಿಸಿ ಸಂಭ್ರಮಿಸಿದ್ದರು ಅವರಿಗೆ ನಾನು ಇದೆ ನಿಮ್ಮ ಕೊನೆ ಸಂಭ್ರಮ ಕೊನೆ ಪಟಾಕೀ ಎಂದಿದ್ದೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚುನಾವಣಾ ಪೂರ್ವದಲ್ಲಿ ನಾಡಿನ ಜನತೆಗೆ ಕೊಟ್ಟ ಮಾತಿನಂತೆ 5 ಗ್ಯಾರಂಟಿ ಗಳನ್ನು ಜಾರಿಗೆ ತಂದಿದ್ದಾರೆ.
ಶಾಸಕ ಬಸವರಾಜ ರಾಯರೆಡ್ಡಿ ಅವರು ಕುಕನೂರು ಪಟ್ಟಣಕ್ಕೆ ಹೆಚ್ಚಿನ ಮಹತ್ವ ನೀಡುತ್ತಿದ್ದು ಚುನಾವಣಾ ಪೂರ್ವದಲ್ಲಿ ಕೊಟ್ಟ ಮಾತಿನಂತೆ ಪಟ್ಟಣದಲ್ಲಿ 100 ಎಕ್ಕರೆ ಕೆರೆ ನಿರ್ಮಾಣ ಮಾಡುವುದಾಗಿ ಭರವಸೆ ನೀಡುತ್ತಿದ್ದಾರೆ, ಕುಕನೂರು ಪಟ್ಟಣದ ಕುಡಿಯುವ ನೀರಿನ ವ್ಯವಸ್ಥೆಗೆ ಕೃಷ್ಣ ನದಿಯ ನೀರಿನ ಜೊತೆಗೆ ತುಂಗಭದ್ರೆಯ ನೀರನ್ನು ತರುವ ಕಾರ್ಯ ಕೈಗೊಂಡಿದ್ದಾರೆ, ಮಾರುಕಟ್ಟೆ ಸಮಿತಿಯಲ್ಲಿರುವ ವಾರದ ಸಂತೆಯನ್ನು ಪುನಃ ಹಳೆ ಸಂತೆ ಬಜಾರ್ ನಲ್ಲಿ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ, ಕುಕನೂರು ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಹೆಚ್ಚಿನ ಸಂಖ್ಯೆಯ ವೈದ್ಯಕೀಯ ಸಿಬ್ಬಂದಿಯನ್ನು ನಿಯೋಜಿಸಿದ್ದಾರೆ,ಐದು ವರ್ಷಗಳಲ್ಲಿ ಕುಕನೂರು ತಾಲ್ಲೂಕಿಗೆ ಎಲ್ಲಾ ಸರ್ಕಾರಿ ಇಲಾಖೆಗಳನ್ನು ತಂದು ಪರಿಪೂರ್ಣ ತಾಲೂಕನ್ನಾಗಿಸಲಿದ್ದಾರೆ, ಕುಕನೂರು ಮನೆರಹಿತರಿಗೆ,ಬಡವರಿಗೆ 1000 ವಸತಿಗಳ ಮಂಜೂರು ಮಾಡಲಾಗಿದೆ, ಶೌಚಾಲಯ ನಿರ್ಮಾಣ,ಮೂಲ ಸೌಕರ್ಯ ಒದಗಿಸಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಯಲಬುರ್ಗಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಸವರಾಜ್ ಉಳ್ಳಾಗಡ್ಡಿ, ಕುಕನೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹನುಮಂತಗೌಡ ಚಂಡೂರು,ವೀರನಗೌಡ ಬಳೂಟಗಿ, ಸತ್ಯನಾರಾಯಣ ಹರಪನಹಳ್ಳಿ, ನಿಂಗಪ್ಪ ಗೊರ್ಲೇಕೊಪ್ಪ ,ಕಾಸಿಂ ಸಾಬ್ ತಳಕಲ್, ರಾಮಣ್ಣ ಭಜಂತ್ರಿ, ಜಂಬಣ್ಣ ಅಂಗಡಿ, ಹನುಮೇಶ ಕಡೆಮನಿ, ನೂರುದ್ದೀನ್ ಸಾಬ್ ಗುಡಿಹಿಂದಲ್, ಶಿವನಗೌಡ ದಾನರೆಡ್ಡಿ,ಹನುಮಂತಪ್ಪ ದ್ಯಾಂಪೂರ, ವೀರಯ್ಯ ತೊಂಟದಾರ್ಯಮಠ, ಮುಂತಾದ ನಾಯಕರು ಕಾರ್ಯಕರ್ತರು ಭಾಗವಹಿಸಿದ್ದರು.
ನಿಂಗರಾಜ ದೊಡ್ಡಮನಿ
Like
Dislike
Love
Angry
Sad
Funny
Wow
Your experience on this site will be improved by allowing cookies.
ಠೀಕೆಗಳು 0