ವಿದ್ಯುತ್ ಸವರ್ಜಿನ್ ತಂತಿ ತುಂಡಾಗಿ ಧರೆಗೆ ಬಿದ್ದ ಘಟನೆ ಕುಕನೂರು ತಾಲ್ಲೂಕು ಚಿಕ್ಕೇನಕೊಪ್ಪ ಗ್ರಾಮದ ಬಾಬಾ ಸಾಹೇಬ್ ಬಿ ಆರ್ ಅಂಬೇಡ್ಕರ್ ನಗರದಲ್ಲಿ ನಡೆದಿದೆ.
ವಿದ್ಯುತ್ ಸವರ್ಜಿನ್ ತಂತಿ ತುಂಡಾಗಿ ಧರೆಗೆ ಬಿದ್ದ ಘಟನೆ ಕುಕನೂರು ತಾಲ್ಲೂಕು ಚಿಕ್ಕೇನಕೊಪ್ಪ ಗ್ರಾಮದ ಬಾಬಾ ಸಾಹೇಬ್ ಬಿ ಆರ್ ಅಂಬೇಡ್ಕರ್ ನಗರದಲ್ಲಿ ನಡೆದಿದೆ.
ಕುಕನೂರು :
ವಿದ್ಯುತ್ ಸವರ್ಜಿನ್ ತಂತಿ ತುಂಡಾಗಿ ಧರೆಗೆ ಬಿದ್ದ ಘಟನೆ ಕುಕನೂರು ತಾಲ್ಲೂಕು ಚಿಕ್ಕೇನಕೊಪ್ಪ ಗ್ರಾಮದ ಬಾಬಾ ಸಾಹೇಬ್ ಬಿ ಆರ್ ಅಂಬೇಡ್ಕರ್ ನಗರದಲ್ಲಿ ನಡೆದಿದೆ.
ಜನ ವಸತಿ ಪ್ರದೇಶದ ಮಧ್ಯದಲ್ಲಿ ವಿದ್ಯುತ್ ತಂತಿ ತುಂಡರಿಸಿ ಬಿದ್ದಿರುವುದು ಅನೇಕ ಅಪಾಯಗಳನ್ನು ಎದುರಿಸುವಂತಹ ಪರಿಸ್ಥಿತಿ ಎದುರಾಗಿದ್ದು ಅದೃಷ್ಟ ವಷಾತ್ ಯಾವುದೇ ಅವಘಡ ಗಳು ಸಂಭವಿಸಿರುವುದಿಲ್ಲ.
ಇದ್ದಕ್ಕಿದ್ದಂತೆ ವಿದ್ಯುತ್ ತಂತಿ ತುಂಡಾಗಿ ಬಿದ್ದಿದ್ದು ವಿದ್ಯುತ್ ಇಲಾಖೆಯ ಸರಿಯಾದ ನಿರ್ವಹಣೆ ಇಲ್ಲದೆ ಇರುವುದೇ ಪ್ರಮುಖ ಕಾರಣವಾಗಿದ್ದು ಏನಾದರೂ ಅವಘಡ ಸಂಭವಿಸಿದರೆ ಯಾರು ಹೊಣೆ ಎಂದು ಗ್ರಾಮದ ಸಾರ್ವಜನಿಕರು ಮಾತನಾಡಿಕೊಳ್ಳುತ್ತಿದ್ದ ದೃಶ್ಯವೂ ಸಾಮಾನ್ಯವಾಗಿ ಕಂಡು ಬರುತ್ತಿತ್ತು.
ವಿದ್ಯುತ್ ತಂತೆ ತುಂಡಾಗಿ ಧರೆಗೆ ತಾಗುವಂತೆ ಜೋತಾಡ್ತಿದ್ದರೂ ಸಹ ವಿದ್ಯುತ್ ಇಲಾಖೆ ಸಿಬ್ಬಂದಿ ಬೇಗನೆ ಬರದೆ ಬೇಜವಾಬ್ದಾರಿತನ ತೋರಿದ್ದು ವಿದ್ಯುತ್ ಹರಿಯುವ ತಂತಿಗಳು ಮತ್ತು ಕಂಬಗಳ ಸರಿಯಾದ ನಿರ್ವಹಣೆ ಇಲ್ಲದೆ ಇಲ್ಲದೆ ಇರುವುದು ಈ ಪ್ರಕರಣದಿಂದ ಎದ್ದು ಕಾಣುತ್ತಿದ್ದು ಸಂಬಂಧ ಪಟ್ಟ ಉನ್ನತ ಅಧಿಕಾರಿಗಳು ಹೆಚ್ಚೆತ್ತುಕೊಂಡು ಸರಿಯಾದ ನಿರ್ವಹಣೆ ಮಾಡಿ ಮುಂದೆ ಎದುರಿಸಬಹುದಾದ ಅನಾಹುತಗಳನ್ನು ತಪ್ಪಿಸುವರು ಎಂಬುದನ್ನು ಕಾದು ನೋಡಬೇಕಾದ ಅನಿವಾರ್ಯತೆ ಇದೆ ಎಂದು ಜನ ಮಾತನಾಡಿಕೊಳ್ಳುತ್ತಿದ್ದರು.
Like
Dislike
Love
Angry
Sad
Funny
Wow
Your experience on this site will be improved by allowing cookies.
ಠೀಕೆಗಳು 0