ಹಸಿವಿನಿಂದ ಬಳಲುತ್ತಿರುವವರ ಹಸಿವನ್ನು ನೀಗಿಸಿ ಹಸಿವು ಮುಕ್ತ ಕರ್ನಾಟಕ ನಿರ್ಮಾಣ
ಹಸಿವಿನಿಂದ ಬಳಲುತ್ತಿರುವವರ ಹಸಿವನ್ನು ನೀಗಿಸಿ ಹಸಿವು ಮುಕ್ತ ಕರ್ನಾಟಕ ನಿರ್ಮಾಣ
ಕುಕನೂರು :
ಹಸಿವಿನಿಂದ ಬಳಲುತ್ತಿರುವವರ ಹಸಿವನ್ನು ನೀಗಿಸಿ ಹಸಿವು ಮುಕ್ತ ಕರ್ನಾಟಕ ನಿರ್ಮಾಣದೊಂದಿಗೆ ರಾಜ್ಯದ ಜನತೆಯ ಸ್ವಶಕ್ತಿಕರಣ ಮಾಡುವಂತಹ ಯೋಜನೆಗಳನ್ನು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹೊಂದಿದ್ದು ಇಂತಹ ಕಾಂಗ್ರೆಸ್ ಯೋಜನೆಗಳಿಂದ ಬಡವರನ್ನು ಸಶಕ್ತಗೊಳ್ಳಲು ಅನುಕೂಲ ಮಾಡಿಸಿದ ಯೋಜನೆಗಳಾಗಿವೆ ಎಂದು ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಶಾಸಕ ಬಸವರಾಜ ರಾಯರೆಡ್ಡಿ ತಿಳಿಸಿದರು.
ಕುಕನೂರು ತಾಲೂಕಿನ ಗಾವರಾಳ ಗ್ರಾಮದಲ್ಲಿ ಜನಸಂಪರ್ಕ ಸಭೆಯಲ್ಲಿ ಜನತೆಯನ್ನು ಉದ್ದೇಶಿಸಿ ಶಾಸಕ ಬಸವರಾಜ ರಾಯರೆಡ್ಡಿ ಮಾತನಾಡುತ್ತಾ. ರಾಜ್ಯ ಸರ್ಕಾರ ಚುನಾವಣಾ ಪೂರ್ವ ಘೋಷಣೆ ಮಾಡಿದಂತೆ ಮಹತ್ವಕಾಂಕ್ಷಿ ಯೋಜನೆಗಳಾದ ಶಕ್ತಿ ಯೋಜನೆ ಈಗಾಗಲೇ ಜಾರಿ ಮಾಡಿದ್ದು ಬರುವ ಜುಲೈ 1ನೇ ತಾರೀಖಿನಿಂದ ಉಳಿದ ನಾಲ್ಕು ಗ್ಯಾರಂಟಿಗಳು ಜಾರಿಯಾಗುವ ಸಂಪೂರ್ಣ ವಿಶ್ವಾಸವಿದ್ದು ರಾಜ್ಯದ ಜನತೆ ಈ 5 ಯೋಜನೆಗಳ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಬಡವರ ಹಸಿವು ನೀಗಿಸುವ ನಿಟ್ಟಿನಲ್ಲಿ ಅನ್ನಭಾಗ್ಯ ಯೋಜನೆ ಕಾರ್ಯನಿರ್ವಹಿಸಿದರೆ, ಪದವಿ ಪಡೆದುಕೊಂಡು ಕೆಲಸ ಹುಡುಕುತ್ತಾ ನಿರುದ್ಯೋಗಿಯಾಗಿರುವ ಯುವಕರ ಸಬಲೀಕರಣಕ್ಕಾಗಿ ಯುವನಿಧಿ ಯೋಜನೆ ಜಾರಿಗೆ ತರುತ್ತಿದ್ದು , ಪ್ರತಿ ಮನೆಮನೆಗಳಲ್ಲೂ ದೀಪದ ಬೆಳಕಿನ ಬದಲು ವಿದ್ಯುತ್ ಶಕ್ತಿಯ ದೀಪದ ಬೆಳಕು ಹೊಸರಿಸಲಿ ಎಂಬ ಉದ್ದೇಶದಿಂದ ಗೃಹ ಜ್ಯೋತಿ ಯೋಜನೆ. ಬೆಲೆ ಏರಿಕೆ ಬಿಸಿಯಿಂದ ತತ್ತರಿಸಿದ ಕುಟುಂಬದ ಮುಖ್ಯಸ್ಥೆಗೆ ಕುಟುಂಬದ ಅವಶ್ಯಕತೆಗಳನ್ನು ಖರೀದಿಸಲು ಸಹಾಯಕಾರಿಯಾಗಿ ಗೃಹಲಕ್ಷ್ಮಿ ಯೋಜನೆ, ಆಪತ್ಕಾಲದಲ್ಲಿ ಬಡವರ ಪ್ರಯಾಣ ಅಸ್ತವ್ಯಸ್ತವಾಗುವುದನ್ನು ಕಂಡ ರಾಜ್ಯ ಸರ್ಕಾರ ಮಹಿಳೆಯರಿಗೆ ಉಚಿತ ಪ್ರಯಾಣದ ಶಕ್ತಿ ಯೋಜನೆ ಗಳೆಲ್ಲವನ್ನು ತುಲನೆ ಮಾಡಿ ನೋಡಿದಾಗ ಈ ಎಲ್ಲಾ ಯೋಜನೆಗಳಿಂದ ರಾಜ್ಯದ ಬಡವರು ಸಶಕ್ತಗೊಳ್ಳುವುದರಲ್ಲಿ ಸಂಪೂರ್ಣ ಸಹಾಯಕಾರಿ ಯಾಗಲಿವೆ ಎಂದು ಹೇಳಿದರು.
ಕ್ಷೇತ್ರದ ವಸತಿ ರಹಿತ ಅರ್ಹ ಫಲಾನುಭವಿಗಳಿಗೆ ಈ ವರ್ಷ 10,000 ಮನೆ ಮಂಜೂರಿ ಗೊಳಿಸುವ ಯೋಜನೆಯನ್ನು ಹಮ್ಮಿಕೊಂಡಿದ್ದು ಅದಕ್ಕಾಗಿ ಫಲಾನುಭವಿಗಳ ಸರ್ವೆ ಕಾರ್ಯ ಜುಲೈ 15 ರಿಂದ ಪ್ರಾರಂಭಗೊಳ್ಳುತ್ತದೆ ತಾಲೂಕಿನ ಜನರಿಗೆ ಶುದ್ಧ ಕುಡಿಯುವ ನೀರು ಒದಗಿಸುವ ನಿಟ್ಟಿನಲ್ಲಿ 700 ಕೋಟಿ ವೆಚ್ಚದಲ್ಲಿ ಕೃಷ್ಣಾ ನದಿಯಿಂದ ಎಲ್ಲಾ ಗ್ರಾಮಗಳಿಗೆ ಪ್ರತಿಯೊಬ್ಬರಿಗೂ 75 ಲೀಟರ್ ನೀರು ಕೊಡುವ ಯೋಜನೆಯಿಂದ ಗ್ರಾಮಗಳಲ್ಲಿ ಹಾಕಿರುವ ಪೈಪ್ಲೈನ್ ಸರಿಯಾಗಿ ಇರದೇ ಇದ್ದದರಿಂದ ನೀರು ಪುರಕ್ಕೆ ಆಗುತ್ತಿಲ್ಲ ಎಂಬುದನ್ನು ಗಮನಿಸಿ ಉತ್ತಮ ಗುಣಮಟ್ಟದ ಕಾಮಗಾರಿ ಆಗುವ ಹಾಗೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಗಮನಕ್ಕೆ ತಂದಿದ್ದು ಅವರು ಸಮಸ್ಯೆ ಬಗೆಹರಿಸುತ್ತಾರೆ ಎಂದು ಹೇಳಿದರು.
ಗ್ರಾ.ಪಂ.ಸದಸ್ಯ ಮಹೇಶ ಗಾವರಾಳ ಮಾತನಾಡಿ ಗಾವರಾಳ ಗ್ರಾಮಕ್ಕೆ ಶಾಸಕರ ಕೊಡುಗೆ ಅಪಾರವಾಗಿದ್ದು ಗ್ರಾಮದ ಸಮಸ್ಯೆಗಳನ್ನು ಶಾಸಕರು ಕಾಲಕಾಲಕ್ಕೆ ಪರಿಹರಿಸುತ್ತಾ ಬಂದಿರುತ್ತಾರೆ ಅದೇ ರೀತಿ ಈ ಬಾರಿ ಗ್ರಾಮಕ್ಕೆ ಹೆಚ್ಚಿನ ಅನುದಾನಗಳನ್ನು ಕೊಟ್ಟು ಅಭಿವೃದ್ಧಿ ಗ್ರಾಮ ವಾಗಿಸುವಲ್ಲಿ ಶಾಸಕರು ಮಹತ್ವದ ಪಾತ್ರ ನಿಭಾಯಿಸುತ್ತಾರೆ ಎಂದು ಹೇಳಿದರು
ಸ್ಥಳದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಉಪಾಧ್ಯಕ್ಷ, ಸದಸ್ಯರು ತಹಶೀಲ್ದಾರರಾದ ನೀಲಪ್ರಭಾ ಬಬಲದ್, ಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಮಣ್ಣ ದೊಡ್ಮನಿ, ತಾಲೂಕ ಮಟ್ಟದ ಅಧಿಕಾರಿಗಳು, ಮುಖಂಡರಾದ ಹನಮಂತಗೌಡ ಪಾಟೀಲ್, ಬಸವರಾಜ ಉಳ್ಳಾಗಡ್ಡಿ, ಮಂಜುನಾಥ ಉಳ್ಳಾಗಡ್ಡಿ,ಗ್ರಾಮದ ಹಿರಿಯರಾದ ವಿರುಪಣ್ಣ ಮಾಳೆಕೊಪ್ಪ,ಸೋಮಣ್ಣ ಹರ್ಲಾಪೂರ ಗ್ರಾಮ ಪಂಚಾಯತಿ ಸದಸ್ಯರು, ಗ್ರಾಮ ಪಂಚಾಯತಿ ಸಿಬ್ಬಂದಿಗಳು, ಗ್ರಾಮದ ಸಾರ್ವಜನಿಕರು ಹಾಜರಿದ್ದರು.
ನಿಂಗರಾಜ ದೊಡ್ಡಮನಿ
Like
Dislike
Love
Angry
Sad
Funny
Wow
Your experience on this site will be improved by allowing cookies.
ಠೀಕೆಗಳು 0