ಕನ್ನಡ ಸಾಹಿತ್ಯ ಪರಿಷತ್ ತಾಲೂಕಾ ಘಟಕದವತಿಯಿದ ಹಮ್ಮಿಕೊಂಡಿದ್ದ ಸ್ವಾಭಿಮಾನಿ ಚೆನ್ನಮ್ಮಳ ಸ್ವಾತಂತ್ರ್ಯ ಹೋರಾಟದ ಬದುಕು
ಕನ್ನಡ ಸಾಹಿತ್ಯ ಪರಿಷತ್ ತಾಲೂಕಾ ಘಟಕದವತಿಯಿದ ಹಮ್ಮಿಕೊಂಡಿದ್ದ ಸ್ವಾಭಿಮಾನಿ ಚೆನ್ನಮ್ಮಳ ಸ್ವಾತಂತ್ರ್ಯ ಹೋರಾಟದ ಬದುಕು
ಗದಗ :
ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಮುಂಚೆಯೇ ನಾಡಿನ ಜನತೆಗೆ ಸ್ವಾತಂತ್ರ್ಯದ ಕಿಚ್ಚು ಹೊತ್ತಿಸುವ ಮೂಲಕ ಸ್ವಾತಂತ್ರ್ಯಸಂಗ್ರಾಮದ ಬೆಳ್ಳಿಚುಕ್ಕಿ ಎನಿಸಿದ ಕೀರ್ತಿ ಕಿತ್ತೂರಿನ ರಾಣಿ ಚೆನ್ನಮ್ಮಜಿಯವರಿಗೆ ಸಲ್ಲುತ್ತದೆ ಎಂದು ಕುಮಾರಿ ಭಾವನಾ ಬಿ ಮಾದಿ ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ ತಾಲೂಕಾ ಘಟಕದ ವತಿಯಿಂದ ಹಮ್ಮಿಕೊಂಡಿದ್ದ ಸ್ವಾಭಿಮಾನಿ ಚೆನ್ನಮ್ಮಳ ಸ್ವಾತಂತ್ರ್ಯ ಹೋರಾಟದ ಬದುಕು ಎಂಬ ವಿಷಯದ ಉಪನ್ಯಾಸದಲ್ಲಿ ಹೇಳುತ್ತಾ ಬಾಲ್ಯದಲ್ಲಿ ಕಲಿತ ಕತ್ತಿವರಸೆ, ಕುದುರೆ ಸವಾರಿ, ಯುದ್ದತಂತ್ರಗಳು ಜಗತ್ತನ್ನೆ ಗೆದ್ದಿರುವ ಬ್ರೀಟಿಷರನ್ನು ಸೋಲಿಸಿದ ಕಿಚ್ಚು ರಾಣಿ ಚೆನ್ನಮ್ಮನಲ್ಲಿರುವುದನ್ನು ಕಂಡಾಗ ಅಂದು ಬ್ರೀಟಿಷರಿಗೆ ಸಿಂಹಸ್ವಪ್ನವಾಗಿದ್ದ ರಾಣಿಚೆನ್ನಮ್ಮಳ ಇತಿಹಾಸ ರಾಷ್ಟ್ರದ ಇತಿಹಾಸದಲ್ಲಿ ಸೇರ್ಪಡೆಗೊಂಡು ಮನೆಗೊಬ್ಬ ಮಹಿಳೆ ಚೆನ್ನಮ್ಮಳಿಂದ ಸ್ಪೂರ್ತಿ ಪಡೆದು ಸ್ವಾಭಿಮಾನದ ಪ್ರತೀಕವಾಗಿ ಜೀವಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷರಾದ ಸಿದ್ಧಣ್ಣ ಬಂಡಿ, ಉಪಾಧ್ಯಕ್ಷರಾದ ಪ್ರಭು ಚವಡಿ, ಕಸಾಪ ಗೌರವಾಧ್ಯಕ್ಷರಾದ ಟಿ ಎಸ್ ರಾಜೂರ, ರವೀಂದ್ರ ಕವಡಿಮಟ್ಟಿ, ತಾಲೂಕಾಧ್ಯಕ್ಷರಾದ ಎ ಪಿ ಗಾಣಗೇರ, ಅತಿಥಿಗಳಾಗಿ ಮಾತಾನಾಡಿದರು.
ಸಂಸ್ಕ್ರಿತಿ ಚಿಂತಕರಾದ ಬಿ ಎ ಕೆಂಚರೆಡ್ಡಿಯವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು, ಬಿ ವ್ಹಿ ಮುನವಳ್ಳಿ ಸ್ವಾಗತಿಸಿದರು ಅಲಿಮಠ ವಂದಿಸಿದರು, ಎಸ್ ಟಿ ಪತ್ತಾರ ನಿರೂಪಿಸಿದರು.
Like
Dislike
Love
Angry
Sad
Funny
Wow
Your experience on this site will be improved by allowing cookies.
ಠೀಕೆಗಳು 0