ಕಾಡಿನಿಂದ ಹಾದಿ ತಪ್ಪಿ ಬೆಂಗಳೂರಿನ ಕೂಡ್ಲು ಬಳಿಗೆ ಬಂದಿದ್ದ ಚಿರತೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ರಕ್ಷಣೆ ಮಾಡಿ ಕಾಡಿಗೆ ಬಿಡುವ ಬದಲು ಗುಂಡೇಟು ಹೊಡೆದು ಸಾಯಿಸಿದ ಪ್ರಕರಣ ಜಾನಾಕ್ರೋಶಕ್ಕೆ ಕಾರಣವಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳ ಕ್ರಮಕ್ಕೆ ಪ್ರಾಣಿ ಪ್ರಿಯ, ಸಾಮಾಜಿಕ ಹೋರಾಟಗಾರ ಮಹಾಂತೇಶಗೌಡ ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಾನಾಗಿಯೇ ಬಲೆ ಬಿದ್ದ ಚಿರತೆಯನ್ನು ಗುಂಡಿಟ್ಟು ಕೊಲೆ ಮಾಡುವಂತಹದು ಏನಾಗಿತ್ತು..? ಚಿರತೆ ಮನುಷ್ಯರ ಮೇಲೆ ಭೀಕರವಾಗಿ ದಾಳಿ ಮಾಡಿತ್ತೇ..? ಅಥವಾ ಈ ಹಿಂದೆ ಮನುಷ್ಯರನ್ನು ಕೊಂದು ತಿಂದಿದ್ದ ಬಗ್ಗೆ ಏನಾದರೂ ಅರಣ್ಯ ಇಲಾಖೆಗೆ ಮಾಹಿತಿ ಇತ್ತೇ ಎನ್ನುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ.
ಬೆಂಗಳೂರು :
ಕಾಡಿನಿಂದ ಹಾದಿ ತಪ್ಪಿ ಬೆಂಗಳೂರಿನ ಕೂಡ್ಲು ಬಳಿಗೆ ಬಂದಿದ್ದ ಚಿರತೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ರಕ್ಷಣೆ ಮಾಡಿ ಕಾಡಿಗೆ ಬಿಡುವ ಬದಲು ಗುಂಡೇಟು ಹೊಡೆದು ಸಾಯಿಸಿದ ಪ್ರಕರಣ ಜಾನಾಕ್ರೋಶಕ್ಕೆ ಕಾರಣವಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳ ಕ್ರಮಕ್ಕೆ ಪ್ರಾಣಿ ಪ್ರಿಯರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಾನಾಗಿಯೇ ಬಲೆ ಬಿದ್ದ ಚಿರತೆಯನ್ನು ಗುಂಡಿಟ್ಟು ಕೊಲೆ ಮಾಡುವಂತಹದು ಏನಾಗಿತ್ತು..? ಚಿರತೆ ಮನುಷ್ಯರ ಮೇಲೆ ಭೀಕರವಾಗಿ ದಾಳಿ ಮಾಡಿತ್ತೇ..? ಅಥವಾ ಈ ಹಿಂದೆ ಮನುಷ್ಯರನ್ನು ಕೊಂದು ತಿಂದಿದ್ದ ಬಗ್ಗೆ ಏನಾದರೂ ಅರಣ್ಯ ಇಲಾಖೆಗೆ ಮಾಹಿತಿ ಇತ್ತೇ ಎನ್ನುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ.
ಮೈಸೂರಿಂದ ಶಾರ್ಪ್ ಶೂಟರ್ ಕರೆಸಿದ್ದು ಯಾಕೆ..?
ಚಿರತೆ ಬೆಂಗಳೂರಿಗೆ ಹಾದಿ ತಪ್ಪಿ ಬಂದಿತ್ತು. ಯಾರಿಗೂ ಸಮಸ್ಯೆ ಮಾಡಿರಲಿಲ್ಲ. ರಾತ್ರಿ ವೇಳೆ ಹೊರಕ್ಕೆ ಬರುತ್ತಿದ್ದ ಚಿರತೆ ಬೇಟೆ ಮಾಡಿಕೊಂಡು ಹಾಳು ಕಟ್ಟಡ ಸೇರಿಕೊಳ್ಳುತ್ತಿತ್ತು. ಜನರ ಕಣ್ಣಿಗೆ ಬಿದ್ದಿರಲಿಲ್ಲ. ಆದರೂ ಸಿಸಿಟಿವಿಯಲ್ಲಿ ಸೆರೆಸಿಕ್ಕ ಚಿರತೆಯ ಕಾರ್ಯಾಚರಣೆ ಶುರು ಮಾಡಿದ ಅರಣ್ಯ ಇಲಾಖೆ, ಬನ್ನೇರುಘಟ್ಟ ಅರಣ್ಯದಿಂದ ವೈದ್ಯರು ಹಾಗು ಮೈಸೂರಿನಿಂದ ಶಾರ್ಪ್ ಶೂಟರ್ ಜೊತೆಗೆ ನುರಿತ ತಂಡವನ್ನು ಕರೆಸಿಕೊಂಡಿತ್ತು. ಮೊದಲ ದಿನ ಸಿಗದ ಚಿರತೆ ಹಾಳು ಬಿದ್ದ ಕಟ್ಟಡದಲ್ಲೇ ಅಡಗಿ ಬೆದರಿ ಕುಳಿತಿತ್ತು. ಆದರೂ ಬುಧವಾರ ಅರಣ್ಯ ಅಧಿಕಾರಿಗಳು ಚಿರತೆಯನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾದರು. ಮೊದಲೇ ಚಿರತೆಯನ್ನು ಕೊಲ್ಲುವುದಕ್ಕೆ ಅರಣ್ಯ ಅಧಿಕಾರಿಗಳು ನಿರ್ಧಾರ ಮಾಡಿ ಆಗಿತ್ತೇಂದು ಸಾಮಾಜಿಕ ಹೋರಾಟಗಾರ ಮಹಾಂತೇಶಗೌಡ ಪಾಟೀಲ್ ಆತಂಕ ವ್ಯಕ್ತಪಡಿಸಿದ್ದಾರೆ.
ತಪ್ಪಿಸಿಕೊಳ್ಳಲು ಪಯತ್ನಿಸಿದಾಗ ದಾಳಿ ಮಾಡಿದ್ದ ಚಿರತೆ..
ಕೂಡ್ಲು ಗೇಟ್ನಲ್ಲಿ ಹಾಳು ಬಿದ್ದ ಕಟ್ಟಡದಿಂದ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಿದ್ದ ಚಿರತೆ ಅಡ್ಡ ಎದುರಾದ ವೈದ್ಯರು ಹಾಗು ಓರ್ವ ಸಿಬ್ಬಂದಿಗೆ ಗಾಯ ಮಾಡಿ ಪರಾರಿ ಆಗಿತ್ತು. ಗಿಡಗಂಟೆಯ ಪೊದೆ ಸೇರಿಕೊಂಡು ಜೀವ ಭಯದಲ್ಲಿ ಕುಳಿತಿದ್ದ ಚಿರತೆಯನ್ನು ಅರಣ್ಯ ಸಿಬ್ಬಂದಿ ಹಿಡಿದು ಬೋನಿಗೆ ಹಾಕುವ ಅವಕಾಶವಿತ್ತು. ಆದರೂ ಜೆಸಿಬಿ ಕರೆಸಿ ಗಿಡಗಂಟೆಯನ್ನು ಮೊದಲು ಸ್ವಚ್ಛ ಮಾಡಲಾಯಿತು. ಆ ಬಳಿಕ ಅಗತ್ಯ ಸಲಕರಣೆಗಳಿಂದ ಬೋನ್ ಹಾಗು ಬಲೆಯನ್ನು ಒಡ್ಡಲಾಯ್ತು. ಚಿರತೆ ಬೋನ್ಗೆ ಬೀಳದೆ ಓಡುವಾಗ ಬಲೆಯಲ್ಲಿ ಸಿಲುಕಿಕೊಂಡಿತ್ತು. ಅರಣ್ಯ ಸಿಬ್ಬಂದಿ ಇನ್ನೇನು ಹಿಡಿದುಕೊಂಡರು ಎನ್ನುವಷ್ಟರಲ್ಲಿ ಗುಂಡಿನ ಶಬ್ಧ ಕೇಳಿಸಿತು. ಚಿರತೆಗೆ ಗುಂಡೇಟು ಬಿದ್ದಿತ್ತು. ಕ್ಷಣಮಾತ್ರದಲ್ಲಿ ಚಿರತೆ ಸತ್ತು ಬಿದ್ದಿತ್ತು. ಚಿರತೆ ಸತ್ತಿದ್ದನ್ನು ಖಚಿತಪಡಿಸಿಕೊಂಡ ಅರಣ್ಯ ಸಿಬ್ಬಂದಿ ಕ್ಷಣಕಾಲವೂ ಅಲ್ಲಿರದೆ, ಸತ್ತ ಚಿರತೆಯನ್ನು ಬೋನ್ಗೆ ಹಾಕಿಕೊಂಡು ಅಲ್ಲಿಂದ ಕಾಲ್ಕಿತ್ತರು.
ಆಧುನಿಕ ತಂತ್ರಜ್ಞಾನದ ಪರಿಣಾಮ ಅಮಾಯಕ ಚಿರತೆ ಕೊಲೆ..
ಸಾಕಷ್ಟು ಮಂದಿ ನುರಿತ ತಂಡ ಇದ್ದರೂ ಜೀವಂತವಾಗಿ ಚಿರತೆಯನ್ನು ಸೆರೆಯಿಡಿಯುವಲ್ಲಿ ವಿಫಲವಾಗಿದ್ದು ಅರಣ್ಯ ಇಲಾಖೆ ಕಾರ್ಯ ಕ್ಷಮತೆಯನ್ನು ಪ್ರಶ್ನೆ ಮಾಡುವಂತಾಗಿದೆ. ಶೂಟ್ ಮಾಡಿದ್ದು ಆಯ್ತು. ಚಿರತೆಯನ್ನು ಕೊಂದಿದ್ದೂ ಆಯ್ತು. ಆದರೆ ಚಿರತೆ ಸಾವಿಗೆ ಹೊಣೆ ಯಾರು…? ಕಾಡು ಪ್ರಾಣಿಗಳನ್ನು ಕಾಪಾಡಬೇಕಿದ್ದ ಅರಣ್ಯ ಇಲಾಖೆ ಅಧಿಕಾರಿಗಳೇ ವನ್ಯಮೃಗಗಳನ್ನು ಕೊಂದು ಬಿಸಾಕುವುದು ಎಷ್ಟು ಸರಿ..? ಎನ್ನುವ ಪ್ರಶ್ನೆಗೆ ಅರಣ್ಯ ಸಚಿವ ಈಶ್ವರ ಖಂಡ್ರೆ ಉತ್ತರ ಕೊಡಬೇಕಿದೆ. ಆದರೂ ಆಧುನಿಕ ತಂತ್ರಜ್ಞಾನದ ಪರಿಣಾಮ ಈ ಚಿರತೆ ಸಾವಿಗೆ ಕಾರಣ ಎನ್ನುವ ಮಾತುಗಳು ಚರ್ಚೆ ಆಗುತ್ತಿವೆ. ಮೊದಲಿಗೆ ಸಿಸಿಟಿವಿ, ಅಪಾರ್ಟ್ಮೆಂಟ್ ಹಾಗು ರಸ್ತೆಯಲ್ಲಿ ಸಿಸಿಟಿವಿ ಇಲ್ಲದೆ ಇದ್ದಿದ್ದರೆ ಚಿರತೆ ಇರುವುದೇ ತಿಳಿಯುತ್ತಿರಲಿಲ್ಲ. ರಾತ್ರಿ ವೇಳೆ ಹೊರಕ್ಕೆ ಬಂದು ಹಗಲಿನಲ್ಲಿ ಅಡಗಿ ಕುಳಿತುಕೊಳ್ತಿತ್ತು. ಇನ್ನು ಡ್ರೋನ್ ಕ್ಯಾಮೆರಾ ಇಲ್ಲದಿದ್ದರೆ ಪಾಳು ಬಿದ್ದ ಕಡ್ಡದಲ್ಲಿ ಇಂಚಿಂಚು ತಪಾಸಣೆ ಆಗುತ್ತಿರಲಿಲ್ಲ. ಒಂದಿಷ್ಟು ಹುಡುಕಾಟ ನಡೆಸಿ ಚಿರತೆ ಸಿಗದೆ ಬರಿಗೈಲಿ ವಾಪಸ್ ಆಗುತ್ತಿತ್ತು ಟೀಂ. ಇನ್ನು ಬಂದೂಕು, ಆತ್ಮರಕ್ಷಣೆ ಅಂದರೆ ಜೀವ ಹೋಗಿ ಬಿಡುತ್ತದೆ, ಅಪಾಯ ಕಟ್ಟಿಟ್ಟ ಬುತ್ತಿ ಎನ್ನುವ ಪರಿಸ್ಥಿತಿ ಗುಂಡು ಹಾರಿಸಲು ಅತ್ಯಾಧುನಿಕ ಬಂದೂಕುಗಳನ್ನು ನೀಡಿದರೆ ಅರಣ್ಯ ಸಿಬ್ಬಂದಿ ಕಾಡು ಪ್ರಾಣಿಗಳನ್ನು ಕೊಂದು ತರಬೇತಿಯ ಪರೀಕ್ಷೆ ಮಾಡಿಕೊಳ್ತಿದ್ದಾರೆ. ಎಂದು ತಮ್ಮ ನೋವನ್ನು ಮಾಧ್ಯಮದೊಂದಿಗೆ ಹಂಚಿಕೊಂಡರು.
ಚಿರತೆ ಕೊಂದವರಿಗೆ ಶಿಕ್ಷೆ ಆಗಬೇಕೆನ್ನುತ್ತಿದೆ ಜನಾಭಿಪ್ರಾಯ..
ಠೀಕೆಗಳು 0