ತಾಲೂಕಿನ ಬನ್ನಿಕೊಪ್ಪ ಗ್ರಾಮದಲ್ಲಿ ಕುಡಿಯುವ ನೀರಿನ ಕೊರತೆ ಮಿತಿಮೀರಿದ್ದು ಸ್ಥಳೀಯ ಆಡಳಿತವಾದ ಗ್ರಾಮ ಪಂಚಾಯಿತಿ ಕೊಪ್ಪಳದಿಂದ ಸರಕು ವಾಹನದ ಮೂಲಕ ನೀರು ಸರಬರಾಜ ಮಾಡುತ್ತಿದ್ದಾರೆ.
ತಾಲೂಕಿನ ಬನ್ನಿಕೊಪ್ಪ ಗ್ರಾಮದಲ್ಲಿ ಕುಡಿಯುವ ನೀರಿನ ಕೊರತೆ ಮಿತಿಮೀರಿದ್ದು ಸ್ಥಳೀಯ ಆಡಳಿತವಾದ ಗ್ರಾಮ ಪಂಚಾಯಿತಿ ಕೊಪ್ಪಳದಿಂದ ಸರಕು ವಾಹನದ ಮೂಲಕ ನೀರು ಸರಬರಾಜ ಮಾಡುತ್ತಿದ್ದಾರೆ.
ಕುಕನೂರು :
ತಾಲೂಕಿನ ಬನ್ನಿಕೊಪ್ಪ ಗ್ರಾಮದಲ್ಲಿ ಕುಡಿಯುವ ನೀರಿನ ಕೊರತೆ ಮಿತಿಮೀರಿದ್ದು ಸ್ಥಳೀಯ ಆಡಳಿತವಾದ ಗ್ರಾಮ ಪಂಚಾಯಿತಿ ಕೊಪ್ಪಳದಿಂದ ಸರಕು ವಾಹನದ ಮೂಲಕ ನೀರು ಸರಬರಾಜ ಮಾಡುತ್ತಿದ್ದಾರೆ.
ಬನ್ನಿಕೊಪ್ಪ ಗ್ರಾಮಕ್ಕೆ ಇತ್ತೀಚಿನ ದಿನಗಳ ನೀರಿನ ಸಮಸ್ಯೆ ಎದುರಾಗುತ್ತಿದ್ದು ಕೆಲವೇ ದಿನಗಳ ಕೆಳಗೆ ತುಂಗಭದ್ರಾ ನದಿಯಿಂದ ಪೈಪ್ಲೈನ್ ಮೂಲಕ ಗ್ರಾಮಕ್ಕೆ ಸರಬರಾಜಾಗುತ್ತಿದ್ದ ನೀರಿನ ವ್ಯವಸ್ಥೆಯು ತಾಂತ್ರಿಕ ದೋಷದಿಂದ ನೀರು ಸರಬರಾಜು ಆಗದೇ ಇದ್ದದ್ದು ಸುಮಾರು ಹತ್ತು ದಿನಗಳವರೆಗೆ ಗ್ರಾಮಸ್ಥರು ನೀರಿಗಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು.
ಆದರೆ ಈಗ ತುಂಗಭದ್ರ ನೀರಿನ ಸರಬರಾಜು ಮಾಡುತ್ತಿದ್ದೀಯ ತಾಂತ್ರಿಕ ದೋಷ ದುರಸ್ತಿಗೊಂಡಿದ್ದು ನೀರು ಬರುವ ಮುನ್ನ ಜಿಲ್ಲೆಯಾದ್ಯಂತ ವಾಂತಿಭೇದಿ ಪ್ರಕರಣಗಳು ಹೆಚ್ಚು ಬೆಳಕಿಗೆ ಬರುತ್ತಿರುವುದನ್ನು ಮನಗಂಡ ಗ್ರಾಮ ಪಂಚಾಯಿತಿ ಕಾರ್ಯಾಲಯ ತುಂಗಭದ್ರ ನೀರು ಸಂಗ್ರಹವಾಗುವ 25 ಲಕ್ಷ ಲೀಟರ್ ಸಾಮರ್ಥ್ಯದ ಭೂಗತ ನೀರಿನ ತೊಟ್ಟಿಯನ್ನು ಶುದ್ಧೀಕರಿಸಲು ಮುಂದಾಗಿದ್ದು ಗ್ರಾಮಸ್ಥರು ನೀರಿಗೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿರುತ್ತದೆ ಇಂತಹ ಪರಿಸ್ಥಿತಿಯನ್ನು ನೀಗಿಸಲು ಸುಮಾರು 20km ದೂರದ ಕೊಪ್ಪಳ ನಗರದಿಂದ ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯನ್ನು ಸರಕು ವಾಹನದ ಮೂಲಕ ಗ್ರಾಮಸ್ಥರಿಗೆ ಮಾಡಿದ್ದು ಇನ್ನೂ ಎರಡು ಮೂರು ದಿನಗಳಲ್ಲಿ ನೀರಿನ ಸಮಸ್ಯೆ ಸಂಪೂರ್ಣ ಬಗೆಹರಿಯುವ ಲಕ್ಷಣ ಕಂಡುಬರುತ್ತದೆ ನೀರಿನ ಅಭಾವದ ಜೊತೆಗೆ ಅಭಾವದ ಜೊತೆಗೆ ವಾಂತಿಬೇದಿ ಪ್ರಕರಣಗಳು ಕಾಣಿಸಿಕೊಳ್ಳುತ್ತಿರುವುದು ಗ್ರಾಮ ಪಂಚಾಯಿತಿಗೆ ತಲೆ ನೋವಾಗಿ ಪರಿಣಮಿಸಿದೆ.
ನಿಂಗರಾಜ ದೊಡ್ಡಮನಿ
Like
Dislike
Love
Angry
Sad
Funny
Wow
Your experience on this site will be improved by allowing cookies.
ಠೀಕೆಗಳು 0