ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆಯ ಬಹಿರಂಗ ಪ್ರಚಾರದ ಅವಧಿಯು ಮುಕ್ತಾಯಗೊಂಡಿದ್ದು ಈಗ ಕೊನೆಯ ಹಂತದ ಮತದಾರರ ಮನ ಓಲೈಕೆ ಕಸರತ್ತು ಪ್ರಾರಂಭವಾಗಿದೆ.
ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆಯ ಬಹಿರಂಗ ಪ್ರಚಾರದ ಅವಧಿಯು ಮುಕ್ತಾಯಗೊಂಡಿದ್ದು ಈಗ ಕೊನೆಯ ಹಂತದ ಮತದಾರರ ಮನ ಓಲೈಕೆ ಕಸರತ್ತು ಪ್ರಾರಂಭವಾಗಿದೆ.
ಕುಕನೂರು :
ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆಯ ಬಹಿರಂಗ ಪ್ರಚಾರದ ಅವಧಿಯು ಮುಕ್ತಾಯಗೊಂಡಿದ್ದು ಈಗ ಕೊನೆಯ ಹಂತದ ಮತದಾರರ ಮನ ಓಲೈಕೆ ಕಸರತ್ತು ಪ್ರಾರಂಭವಾಗಿದೆ.
ಸಾಕಷ್ಟು ಕುತೂಹಲ ಘಟ್ಟಗಳನ್ನು ಕಂಡಂತ ಈ ಬಾರಿಯ ಚುನಾವಣೆಯು ರಾಜ್ಯದ ಘಟಾನುಘಟಿ ನಾಯಕರ ಪಕ್ಷಾಂತರ,ಎಲ್ಲಾ ಪಕ್ಷದ ಜಾತಿ, ಧರ್ಮ, ಭಾಷೆ,ಮೀಸಲಾತಿ ವಿಷಯಗಳ ಆಧಾರದ ಮೇಲೆ ಘಟಾನುಘಟಿಗಳಿಂದ ಜಿದ್ದಾಜಿದ್ದಿನ ರಣಕಣವಾಗಿ ನಿರ್ಮಾಣಗೊಂಡಿದ್ದು ಮತದಾರನ ಒಲೈಕೆಯ ಬಹಿರಂಗ ಕಸರತ್ತಿಗೆ ಸೋಮವಾರ ಸಂಜೆ ಆರು ಗಂಟೆಗೆ ತೆರೆ ಬೀಳಲಾಯಿತು.
2023ರ ಚುನಾವಣೆಯು ಕಾವು ಯಲಬುರ್ಗಾ ವಿಧಾನಸಭಾ ಕ್ಷೇತ್ರದಲ್ಲಿಯು ಒರತಾಗದೆ ಒಂದು ಕಾಲದ ಸಂಗಡಿಗರ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ, ಕ್ಷೇತ್ರದಲ್ಲಿ ಹಾಲಿ ಮತ್ತು ಮಾಜಿ ಸಚಿವರ ನಡುವೆ ಮೆಗಾ ಫೈಟ್ ಸೃಷ್ಟಿಯಾಗಿದ್ದು ಹಾಲಿ ಮಾಜಿ ಸಚಿವರುಗಳು ಹಾಗೂ ಅವರ ಬೆಂಬಲಿಗರು ಕೊನೆಯ 48 ಗಂಟೆಗಳ ಸೀಮಿತ ಸಮಯದಲ್ಲಿ ಸಾಧ್ಯವಾದಷ್ಟು ಮತದಾರರ ಮತದಾರರ ಮನ ಓಲೈಸುವ ಸಾಧ್ಯವಾದ ಎಲ್ಲಾ ಕಸರತ್ತನ್ನು ಮಾಡುತ್ತಿದ್ದು ಎರಡು ಅಭ್ಯರ್ಥಿಗಳಲ್ಲಿ ಯಾರು ಮೇಲು ಎಂಬುದನ್ನು ಇಲ್ಲಿಯವರೆಗೂ ಮತದಾರ ಪ್ರಭು ಮಾತ್ರ ತಟಸ್ಥನಾಗಿ ತನ್ನ ನಿಲುವನ್ನು ತೋರದೆ ಮೌನಿಯಾಗಿದ್ದಾನೆ.
ಯಾವುದೇ ಚುನಾವಣೆ ಆಗಲಿ ನಾಯಕರು ಕಾರ್ಯಕರ್ತರು ಪಕ್ಷಾಂತರಗೊಳ್ಳುವುದು ಸಹಜವಾದ ಪ್ರಕ್ರಿಯೆಯಾಗಿದ್ದು ಈ ಬಾರಿಯ ಚುನಾವಣೆಯಲ್ಲಿ ಪಕ್ಷಾಂತರಗಳ ಪರ್ವವೇ ನಡೆದಿದೆ ಕಾರ್ಯಕರ್ತರ ಪಕ್ಷ ಬದಲಾವಣೆ ಕ್ಷೇತ್ರದಲ್ಲಿ ಸಾಮಾನ್ಯವಾದ ದೃಶ್ಯಗಳಾಗಿದ್ದವು. ಎರಡು ಪಕ್ಷದಲ್ಲೂ ನಾಯಕರು ನಿಷ್ಠೆಯ ಕಾರ್ಯಕರ್ತರು ಇದ್ದು ಯಾವ ಪಕ್ಷದ ಅಭ್ಯರ್ಥಿಗೆ ವಿಜಯದ ಮಾಲೆ ಬೀಳಲಿದೆ ಎಂಬುದು ಮಾತ್ರ ಪ್ರಶ್ನೆ ಹಾಗೆ ಉಳಿದಿದೆ.
ಸದ್ಯ ಬಹಿರಂಗ ಪ್ರಚಾರ ಅವಧಿಯು ಪೂರ್ಣಗೊಂಡಿದ್ದು ಬಹಿರಂಗ ಪ್ರಚಾರಕ್ಕೆ ತೆರೆ ಎಳೆಯಲಾಗಿದೆ ಚುನಾವಣಾ ಮತದಾನ ಕಾರ್ಯಕ್ರಮಕ್ಕೆ ಕೆಲವೇ ಗಂಟೆಗಳ ಬಾಕಿ ಇರುತ್ತದೆ ಈ ಸಂದರ್ಭದಲ್ಲಿ ಶತಾಯಗತಾಯ ಮತದಾರನನ್ನು ಓಲೈಸಿಕೊಳ್ಳುವ ಪ್ರಯತ್ನವನ್ನು ಎಲ್ಲಾ ಪಕ್ಷದ ಅಭ್ಯರ್ಥಿಗಳು ಸೇರಿದಂತೆ ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಹಾಲಿ ಮತ್ತು ಮಾಜಿ ಸಚಿವರು ಸಹ ಪ್ರಯತ್ನವನ್ನು ಮುಂದುವರ್ಸಿರುತ್ತಾರೆ.
ಮತದಾರನ ಒಲವಿಕೆಗೆ ವಿವಿಧ ರೂಪದ ಆಸೆ ಆಮಿಷಗಳನ್ನು ಹಾಗೂ ಭರವಸೆಗಳನ್ನು ನೀಡುತ್ತಾ ಸತತ ಪ್ರಯತ್ನದಲ್ಲಿ ಅಭ್ಯರ್ಥಿಗಳು ಸೇರಿದಂತೆ ಅವರ ಹಿಂಬಾಲಕರು ಸಹ ಪ್ರಯತ್ನ ಪಡುತ್ತಿರುವುದು ಯಾವುದೇ ಪಕ್ಷ ಹಾಗೂ ಪಕ್ಷೇತರ ಅಭ್ಯರ್ಥಿಗೂ ಹೊರತಾಗಿಲ್ಲ, ಕ್ಷೇತ್ರದಲ್ಲಿ ಕುರುಡು ಕಾಂಚಾಣ ಕುಣಿಯುವ ಎಲ್ಲಾ ಲಕ್ಷಣಗಳು ಎದ್ದು ಕಾಣುತ್ತಿದ್ದು ಮತದಾನದ ಮುನ್ನ ದಿನವಾದ ಇಂದು ಸಾಯಂಕಾಲದ ವೇಳೆಗೆ ಎಲ್ಲಾ ರೀತಿಯ ಪ್ರಯತ್ನಗಳು ಸೇರಿದಂತೆ ಹಣದ ಹೊಳೆ ಹರಿಯುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಕ್ಷೇತ್ರದ ಮತದಾರರು ಗ್ರಾಮೀಣ ಪ್ರದೇಶಗಳಲ್ಲಿ ಹಲವೆಡೆ ಮಾತನಾಡಿಕೊಳ್ಳುತ್ತಿರುವುದು ಸಹಜವಾದ ಗಳಾಗಿವೆ.
ಏನೆಲ್ಲಾ ಓಲೈಕೆಗಳ ನಡುವೆ ಮತದಾರ ಮಾತ್ರ ಯಾರ ಅದೃಷ್ಟದ ಹಣೆಬರಹದ ಬಟನ್ ಒತ್ತುವನು ಎಂಬುದನ್ನು ತಿಳಿದುಕೊಳ್ಳಲು ಮೇ 13ರ ವರೆಗೆ ಕಾಯಬೇಕಾಗಿದೆ.
ವರದಿಗಾರ - ನಿಂಗರಾಜ ದೊಡ್ಡಮನಿ
Like
Dislike
Love
Angry
Sad
Funny
Wow
Your experience on this site will be improved by allowing cookies.
ಠೀಕೆಗಳು 0