ಪೊಲೀಸ್ ಆಯುಕ್ತರ ಕಚೇರಿಯಲ್ಲಿಂದು ಹಿರಿಯ ಅಧಿಕಾರಿಗಳ ಸಭೆ ನಡೆಸಲಾಗಿದ್ದು ಸಭೆಯಲ್ಲಿ ಎಲ್ಲಾ ಹಿರಿಯ ಅಧಿಕಾರಿಗಳಿಗೆ ಡಿಜಿ – ಐಜಿಪಿ ಖಡಕ್ ವಾರ್ನಿಂಗ್ ನೀಡಿದ್ದಾರೆ. ನಗರದಲ್ಲಿ ಇನ್ಮುಂದೆ ರೌಡಿಸಂ ಇಲ್ಲವಾಗಬೇಕು ಹಾಗೂ ಡ್ರಗ್ಸ್ ದಂಧೆಗೆ ಬ್ರೇಕ್ ಬೀಳದಂತೆ ನೋಡಿಕೊಳ್ಳುವುದು ನಿಮ್ಮ ಮೊದಲ ಆದ್ಯತೆಯಾಗಿರಲಿ ಎಂದು ಸೂಚನೆ ನೀಡಿದ್ದಾರೆ.
ಬೆಂಗಳೂರ :
ಪೊಲೀಸ್ ಆಯುಕ್ತರ ಕಚೇರಿಯಲ್ಲಿಂದು ಹಿರಿಯ ಅಧಿಕಾರಿಗಳ ಸಭೆ ನಡೆಸಲಾಗಿದ್ದು ಸಭೆಯಲ್ಲಿ ಎಲ್ಲಾ ಹಿರಿಯ ಅಧಿಕಾರಿಗಳಿಗೆ ಡಿಜಿ – ಐಜಿಪಿ ಖಡಕ್ ವಾರ್ನಿಂಗ್ ನೀಡಿದ್ದಾರೆ. ನಗರದಲ್ಲಿ ಇನ್ಮುಂದೆ ರೌಡಿಸಂ ಇಲ್ಲವಾಗಬೇಕು ಹಾಗೂ ಡ್ರಗ್ಸ್ ದಂಧೆಗೆ ಬ್ರೇಕ್ ಬೀಳದಂತೆ ನೋಡಿಕೊಳ್ಳುವುದು ನಿಮ್ಮ ಮೊದಲ ಆದ್ಯತೆಯಾಗಿರಲಿ ಎಂದು ಸೂಚನೆ ನೀಡಿದ್ದಾರೆ.
ಪೊಲೀಸ್ ಠಾಣೆಗಳಲ್ಲಿ ಸಿಬ್ಬಂದಿ ಒಳ್ಳೆಯ ನಡತೆ ಹೊಂದಿರಬೇಕು . ಠಾಣೆಗೆ ಬರುವ ಸಾರ್ವಜನಿಕರ ಜೊತೆಯಲ್ಲಿ ಸಭ್ಯ ರೀತಿಯಲ್ಲಿ ವರ್ತಿಸಬೇಕು. ಎಲ್ಲಾ ವಿಭಾಗದ ಡಿಸಿಪಿಗಳು ದಿನಕ್ಕೆ ಒಂದು ಠಾಣೆಗೆ ಭೇಟಿ ನೀಡಬೇಕು. ಅಂತೆಯೇ ಡಿಸಿಪಿ ಮಾದರಿಯಲ್ಲಿ ಎಸಿಪಿಗಳು ಎರಡು ಪೊಲೀಸ್ ಠಾಣೆಗಳಿಗೆ ಭೇಟಿ ನೀಡಬೇಕು , ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಆ ಬಗ್ಗೆ ಮಾಹಿತಿಯನ್ನು ಪೊಲೀಸ್ ಆಯುಕ್ತರಿಗೆ ರವಾನಿಸಬೇಕೆಂದು ಡಿಜಿ ಐಜಿಪಿ ಅಲೋಕ್ ಮೋಹನ್ ಸೂಚನೆ ನೀಡಿದ್ದಾರೆ.
ಪೊಲೀಸ್ ಠಾಣೆಗಳಿಗೆ ಕಮಿಷನರ್ಮ ಡಿಜಿ ಕೂಡ ಸಪ್ರೈಸ್ ವಿಸಿಟ್ ನೀಡುತ್ತಾರೆ. ಠಾಣೆಯಲ್ಲಿ ಸಿಬ್ಬಂದಿ ಯಾವ ರೀತಿ ನಡೆದುಕೊಳ್ತಾರೆ ಅನ್ನೋದನ್ನು ಪರಿಶೀಲನೆ ಮಾಡಲಾಗುತ್ತೆ. ದೂರುದಾರರ ಸೋಗಿನಲ್ಲಿ ಹಿರಿಯ ಅಧಿಕಾರಿಗಳೇ ವಿಸಿಟ್ ಕೊಡಬಹುದು. ಈ ಮೂಲಕ ದೂರುದಾರರ ಜೊತೆಯಲ್ಲಿ ಸಿಬ್ಬಂದಿ ವರ್ತನೆ ಹೇಗಿರುತ್ತೆ ಅನ್ನೋದನ್ನು ಪರಿಶೀಲನೆ ಮಾಡಲಾಗುತ್ತೆ ಎಂದು ಡಿಜಿ ಐಜಿಪಿ ಅಲೋಕ್ ಮೋಹನ್ ಹೇಳಿದ್ರು.
ಸಂ-
ಠೀಕೆಗಳು 0