ದ್ವೇಷದ ರಾಜಕಾರಣವನ್ನ ನಾವು ಮಾಡಲ್ಲ, ನಮಗೆ ಓಟ್ ಹಾಕಿದ ಮತದಾರರನ್ನ ಗೌರವಿಸಿ, ಓಟ್ ಹಾಕದ ಮತದಾರರನ್ನು ಅವಮಾನಿಸಲ್ಲ ಎಂದು ಕೆ.ಆರ್. ನಗರದಲ್ಲಿ ನಡೆದ ಕೃತಜ್ಞತಾ ಸಮಾರಂಭದಲ್ಲಿ ಕೆ.ಆರ್. ನಗರದ ನೂತನ ಶಾಸಕ ಡಿ. ರವಿಶಂಕರ್ ಅವರ ತಂದೆ ದೊಡ್ಡಸ್ವಾಮಿ ಗೌಡ ಹೇಳಿಕೆ ನೀಡಿದ್ದಾರೆ. ನಾವು ಹಿಂದಿನ ಶಾಸಕರಂತೆ ನಡೆದುಕೊಳ್ಳಲ್ಲ, ನಮ್ನನ್ನ ಬೆಂಬಲಿಸಿರಲಿ, ಬಿಡಲಿ ಅವರೆಲ್ಲಾ ನಮ್ಮ ಕ್ಷೇತ್ರದ ಮತದಾರರು.