ರೋಣ ಮತಕ್ಷೇತ್ರದಿಂದ ಬಾರಿ ಅಂತರದಲ್ಲಿ ಗೆಲುವು ಸಾಧಿಸಿರುವ ಸಾವಿರ ಕರೆಗಳ ಸರದಾರ, ಅಭಿವೃದ್ಧಿಯ ಹರಿಕಾರರಾಗಿರುವ ಶಾಸಕ ಜಿ ಎಸ್ ಪಾಟೀಲ್ ಅವರಿಗೆ ಈ ಬಾರಿಯ ಸಚಿವ ಸಂಪುಟದಲ್ಲಿ ಕ್ಯಬಿನೇಟ್ ದರ್ಜೆಯ ಸಚಿವ ಸ್ಥಾನ ನೀಡಬೇಕೆಂದು ಕರ್ನಾಟಕ ಮಾನವ ಹಕ್ಕುಗಳ ಜನಸೇವಾ ಸಮಿತಿಯ ಗದಗ ಜಿಲ್ಲಾಧ್ಯಕ್ಷ ಮಹಾಂತೇಶಗೌಡ ಪಾಟೀಲ್ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ ಅವರಿಗೆ ಒತ್ತಾಹಿಸಿದ್ದಾರೆ.
ಗದಗ :
ರಾಜ್ಯದಲ್ಲಿಯೇ ರೋಣ ಮತಕ್ಷೇತ್ರವು ತನ್ನದೇಯಾದ ವಿಶೇಷತೆಯನ್ನು ಹೊಂದಿದ್ದು ಈ ಮತಕ್ಷೇತ್ರದಲ್ಲಿ ಯಾವ ಪಕ್ಷ ಅಧಿಕಾರಕ್ಕೆ ಬರುತ್ತೋ ಅದೇ ಪಕ್ಷ ರಾಜ್ಯದ ಅಧಿಕಾರದ ಚುಕ್ಕಾಣೆ ಹಿಡಿಯುವುದು ಎಂದು ರಾಜಕೀಯ ವಿಶ್ಲೇಷಕರ ಮಾತಾಗಿದ್ದು ಸುಳ್ಳಲ್ಲ. ರೋಣ ಮತಕ್ಷೇತ್ರದಿಂದ ಬಾರಿ ಅಂತರದಲ್ಲಿ ಗೆಲುವು ಸಾಧಿಸಿರುವ ಸಾವಿರ ಕರೆಗಳ ಸರದಾರ, ಅಭಿವೃದ್ಧಿಯ ಹರಿಕಾರರಾಗಿರುವ ಶಾಸಕ ಜಿ ಎಸ್ ಪಾಟೀಲ್ ಅವರಿಗೆ ಈ ಬಾರಿಯ ಸಚಿವ ಸಂಪುಟದಲ್ಲಿ ಕ್ಯಬಿನೇಟ್ ದರ್ಜೆಯ ಸಚಿವ ಸ್ಥಾನ ನೀಡಬೇಕೆಂದು ಕರ್ನಾಟಕ ಮಾನವ ಹಕ್ಕುಗಳ ಜನಸೇವಾ ಸಮಿತಿಯ ಗದಗ ಜಿಲ್ಲಾಧ್ಯಕ್ಷ ಮಹಾಂತೇಶಗೌಡ ಪಾಟೀಲ್ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ ಅವರಿಗೆ ಒತ್ತಾಹಿಸಿದ್ದಾರೆ.
ಇಂದು ನಮ್ಮ ಪತ್ರಿಕೆಯೊಂದಿಗೆ ಮಾತನಾಡುತ್ತಾ ಜಿ ಎಸ್ ಪಾಟೀಲ ಅವರು ರೋಣ ಮತಕ್ಷೇತ್ರದಲ್ಲಿ ನಾಲ್ಕು [೪] ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ ಈ ಹಿಂದೆ ಶಾಸಕರಾದಾಗ ಕ್ಷೇತ್ರದಲ್ಲಿ ಅನೇಕ ಯೋಜನೆಗಳನ್ನು ಜಾರಿಗೆ ತಂದು ಕ್ಷೇತ್ರದ ಜನರ ಸೇವೆ ಸಲ್ಲಿಸಿದ ಅನುಭವ ಅವರಲ್ಲಿದೆ ಮತ್ತು ಮತಕ್ಷೇತ್ರದಲ್ಲಿ ನೀರಾವರಿ, ಕುಡಿಯುವ ನೀರಿನ ಯೋಜನೆ ಅಲ್ಲದೇ ರಸ್ತೆ ಅಭಿವೃದ್ದಿಯನ್ನೊಳಗೊಂಡ ಅನೇಕ ಅಭಿವೃದ್ದಿ ಕೆಲಸಗಳನ್ನು ಮಾಡಿದ್ದಾರೆ ಸಹಕಾರಿ ರಂಗದಲ್ಲಿಯೂ ಅವರ ಸೇವೆ ಅನುಪಮವಾದುದ್ದಾಗಿದೆ ಉತ್ತರ ಕರ್ನಾಟಕದಲ್ಲಿ ಪ್ರಭಲ ಲಿಂಗಾಯತ ನಾಯಕರುಕೂಡಾ ಆಗಿದ್ದು ಈ ಭಾರಿಯ ಸಚೀವ ಸಂಪುಟದಲ್ಲಿ ಶಾಸಕ ಜಿ ಎಸ್ ಪಾಟೀಲ ಅವರಿಗೆ ಸಚಿವ ಸ್ಥಾನ ಒದಗಿಸಿ ಉತ್ತರ ಕರ್ನಾಟಕ ಭಾಗದಲ್ಲಿ ಪಕ್ಷ ಸಂಘಟನೆಯ ಜೊತೆಗೆ ಅಭಿವೃದ್ದಿ ಕಾರ್ಯಗಳಿಗೆ ಶಕ್ತಿ ತುಂಬುವಂತಹ ಕೆಲಸ ಮಾಡಬೇಕಿದೆ ಈ ನಿಟ್ಟಿನಲ್ಲಿ ಶೀಘ್ರದಲ್ಲಿಯೇ ನಿಯೋಗದೊಂದಿಗೆ ಕಾಂಗ್ರೇಸ್ ಹೈಕಮಾಂಡನ ಎಲ್ಲ ನಾಯಕರುಗಳಿಗೆ ಬೆಟ್ಟಿಯಾಗಿ ಸಚೀವ ಸ್ಥಾನಕ್ಕಾಗಿ ಒತ್ತಾಯಿಸಲಿದ್ದೇವೆ ಎಂದರು.
ಸಂತೋಷಕುಮಾರ ವಸ್ತ್ರದ
ಠೀಕೆಗಳು 0