ನಾನು ಯಲಬುರ್ಗಾ -ಕುಕನೂರು ಅವಳಿ ತಾಲೂಕಗಳ ಸರ್ವಾಂಗೀಣ ಅಭಿವೃದ್ಧಿಗಾಗಿ ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದೇನೆ ಎಂದು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಬಸವರಾಜ ರಾಯರೆಡ್ಡಿ ಅವರು ಹೇಳಿದರು.
ನಾನು ಯಲಬುರ್ಗಾ -ಕುಕನೂರು ಅವಳಿ ತಾಲೂಕಗಳ ಸರ್ವಾಂಗೀಣ ಅಭಿವೃದ್ಧಿಗಾಗಿ ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದೇನೆ ಎಂದು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಬಸವರಾಜ ರಾಯರೆಡ್ಡಿ ಅವರು ಹೇಳಿದರು.
ಕುಕನೂರು : ನಾನು ಯಲಬುರ್ಗಾ -ಕುಕನೂರು ಅವಳಿ ತಾಲೂಕಗಳ ಸರ್ವಾಂಗೀಣ ಅಭಿವೃದ್ಧಿಗಾಗಿ ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದೇನೆ ಎಂದು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಬಸವರಾಜ ರಾಯರೆಡ್ಡಿ ಅವರು ಹೇಳಿದರು.
ಕುಕನೂರು ಪಟ್ಟಣದ ತೇರಿನ ಗಡ್ಡಿ (ಚೌಡಿ) ಯಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಬಹಿರಂಗ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಕುಕುನೂರ್ ಯಲಬುರ್ಗಾ ಅವಳೇ ತಾಲೂಕುಗಳ ಸರ್ವಾಂಗಿನ ಅಭಿವೃದ್ಧಿಗಾಗಿ 2023ರ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ನಾನು ಸ್ಪರ್ಧಿಸಿದ್ದೇನೆ, ಕಳೆದ ಐದು ವರ್ಷಗಳಲ್ಲಿ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳು ಕುಂಟುತ್ತಾ ಸಾಗಿದೆ,2004ರ ಮುಂಚೆ ಈ ದೇಶದ ಒಟ್ಟು ಸಾಲ 50 ಸಾವಿರ ಕೋಟಿ ರೂಪಾಯಿಗಳು ಮೋದಿ ಸರಕಾರ ಬಂದ 9 ವರ್ಷಗಳಲ್ಲಿ ದೇಶದ ಸಾಲ 1 ಲಕ್ಷದ 50ಸಾವಿರ ಕೋಟಿ ರೂಪಾಯಿಗಳು ಆಗಿದೆ,ಹಿಂದಿನ ಬಿಜೆಪಿ ಪಕ್ಷದಲ್ಲಿದ್ದ ನೀತಿ, ಆಚಾರ, ತತ್ವ ಸಿದ್ಧಾಂತಗಳು,ಈ ಒಂಬತ್ತು ವರ್ಷಗಳಲ್ಲಿ ಮಾಯವಾಗಿ ಪ್ರಸ್ತುತ ಬಿಜೆಪಿ ಪಕ್ಷದಲ್ಲಿ ವೈಚಾರಿಕತೆ ದಿವಾಳಿಯಾಗಿದೆ, ರಾಷ್ಟ್ರದಲ್ಲಿ ನಿರುದ್ಯೋಗ ತಾಂಡವವಾಡುತ್ತಿದೆ, ರೈತರ ಬೆಳೆದು ಬೆಳೆಗಳಿಗೆ ಉತ್ತಮ ಬೆಂಬಲ ಬೆಲೆ ಇಲ್ಲ,ದೇಶದಲ್ಲಿ ಅಭಿವೃದ್ಧಿ ಮಾನದಂಡವಾಗದೆ ಜಾತಿ ಆಧಾರದ ಮೇಲೆ ಕೋಮು ಸಂಘರ್ಷದ ಮೂಲಕ ಜನರ ಭಾವನೆಗಳ ಜೋತೆ ಆಟವಾಡುತ್ತಿದ್ದಾರೆ
ದೇಶದಲ್ಲಾದ ನೋಟ್ ಬ್ಯಾನ್ ಯಿಂದ ವಿದೇಶದಲ್ಲಿರುವ ಕಪ್ಪು ಹಣ ವಾಪಸ್ ಬರಲಿಲ್ಲ,ಹೊಸ ನೋಟ್ ಪ್ರಿಂಟ್ ಮಾಡಲು ಸುಮಾರು 26ಸಾವಿರ ಕೋಟಿ ರೂಪಾಯಿಗಳು ಖರ್ಚಾಗಿದೆ,ಅಭಿವೃದ್ದಿ ಮಾಡದೆ ಬರಿ ಸುಳ್ಳಿನ ಪರಮಾವಧಿ ಮಾಡುತ್ತಿದ್ದಾರೆ,ನರೇಂದ್ರ ಮೋದಿಯವರು ಈವರೆಗೂ ಕೂಡ ಒಂದೇ ಒಂದು ಬಾರಿ ಪತ್ರಿಕಾಗೋಷ್ಠಿ ನಡೆಸಿಲ್ಲ,ರಾಜ್ಯ ಸರ್ಕಾರವು 40%ಕಮಿಷನ್ ತೆಗೆದುಕೊಳ್ಳುತ್ತಿದೆ,ರಾಜ್ಯದಲ್ಲಿ ಪ್ರವಾಹ,ನೇರೆ, ಕೋರೋಣ ಬಂದು ಜನಸಾಮಾನ್ಯರು ಸತ್ತರು ಬಾರದ ಮೋದಿ ಎಲೆಕ್ಷನ್ ಬರುತ್ತಿದ್ದಂತೆ ರಾಜ್ಯಕ್ಕೆ ಮೇಲಿಂದ ಮೇಲೆ ಬರುತ್ತಿದ್ದಾರೆ,ನಾನು ಕ್ಷೇತ್ರದಲ್ಲಿ 18ವರ್ಷಗಳ ಕಾಲ ಆಡಳಿತ ಮಾಡಿದ್ದೇನೆ ನನ್ನ ಕೆಲಸವನ್ನು ಈ ಕ್ಷೇತ್ರದ ಜನತೆ ನೋಡಿದ್ದಾರೆ ನಮ್ಮ ಸರ್ಕಾರ ಬಂದ ಕೂಡಲೇ ಕುಕನೂರು ಯಲಬುರ್ಗಾ ಅವಳಿ ತಾಲೂಕುಗಳನ್ನು ರಾಜ್ಯದಲ್ಲೇ ಅಭಿವೃದ್ಧಿ ತಾಲೂಕುಗಳನ್ನು ಮಾಡುತ್ತೇನೆ ಈ ಬಾರಿ ನಿಮ್ಮ ಮತ ಅಭಿವೃದ್ಧಿಯ ಪರವಾಗಿರಲಿ ನನ್ನ ಗುರುತಾದ ಹಸ್ತದ ಗುರುತಿಗೆ ನಿಮ್ಮ ಮತ ನೀಡಿ ಆಶಿರ್ವದಿಸಿ ಎಂದು ಹೇಳಿದರು
ಈ ಸಂದರ್ಭದಲ್ಲಿ ಯಲಬುರ್ಗಾ ಮಂಡಲದ ಅಧ್ಯಕ್ಷರಾದ ಬಸವರಾಜ ಉಳ್ಳಾಗಡ್ಡಿ, ಕುಕನೂರು ತಾಲ್ಲೂಕು ಅಧ್ಯಕ್ಷರಾದ ಹನುಮಂತಗೌಡ ಚಂಡೂರು, ವೀರನಗೌಡ ಬಳೂಟಗಿ, ಕಾಸಿಂ ಸಾಬ್ ತಳಕಲ್,ಯಂಕಣ್ಣ ಯರಾಶಿ, ರಾಮಣ್ಣ ಭಜಂತ್ರಿ, ಸಿದ್ದಯ್ಯ ಕಳ್ಳಿಮಠ, ರಷೀದ್ ಸಾಬ್ ಮುಬಾರಕ್, ರವಿಕುಮಾರ್ ಗದಗ,ನೂರಿದ್ದಿನ್ ಸಾಬ್ ಗುಡಿಹಿಂದಲ್, ರೆಹಮಾನ್ ಸಾಬ್ ಮಕ್ಕಪ್
ವರದಿಗಾರ ನಿಂಗರಾಜ ದೊಡ್ಡಮನಿ
Like
Dislike
Love
Angry
Sad
Funny
Wow
Your experience on this site will be improved by allowing cookies.
ಠೀಕೆಗಳು 0