ಎಲ್ಲಾ ಸಮುದಾಯದ ಪ್ರೀತಿ ಪಾತ್ರರಾದ ಹಾಗೂ ಎಲ್ಲರನ್ನೂ ಅಣ್ಣ ತಮ್ಮರಂತೆ ತಬ್ಬಿಕೊಂಡು ಹೋಗುವ ರೋಣ ಮತಕ್ಷೇತ್ರದ ಜನಪ್ರಿಯ ಶಾಸಕರಾದ ಹಾಗೂ ಕಾಂಗ್ರೆಸ್ ಪಕ್ಷದ ರಾಜ್ಯ ಹಿರಿಯ ಮುಖಂಡರಾದ ಸನ್ಮಾನ್ಯಶ್ರೀ ಜಿ. ಎಸ್. ಪಾಟೀಲರಿಗೆ ಈ ಬಾರಿ ಸಚಿವ ಸಂಪುಟದಲ್ಲಿ ಉನ್ನತ ಮಟ್ಟದ ಸಚಿವ ಸ್ಥಾನ ನೀಡಬೇಕು ಎಂದು ಜೈ ಭೀಮ ಸೇನಾ ರಾಜ್ಯ ಸಂಘರ್ಷ ಸಮಿತಿಯ ರಾಜ್ಯ ಘಟಕದ ಉಪಾಧ್ಯಕ್ಷರಾದ ಮೈಲಾರಪ್ಪ ವೀ. ಚಳ್ಳಮರದ ಅವರ ಆಗ್ರಹವಾಗಿದೆ.
ನರೇಗಲ್ :
ಎಲ್ಲಾ ಸಮುದಾಯದ ಪ್ರೀತಿ ಪಾತ್ರರಾದ ಹಾಗೂ ಎಲ್ಲರನ್ನೂ ಅಣ್ಣ ತಮ್ಮರಂತೆ ತಬ್ಬಿಕೊಂಡು ಹೋಗುವ ರೋಣ ಮತಕ್ಷೇತ್ರದ ಜನಪ್ರಿಯ ಶಾಸಕರಾದ ಹಾಗೂ ಕಾಂಗ್ರೆಸ್ ಪಕ್ಷದ ರಾಜ್ಯ ಹಿರಿಯ ಮುಖಂಡರಾದ ಸನ್ಮಾನ್ಯಶ್ರೀ ಜಿ. ಎಸ್. ಪಾಟೀಲರಿಗೆ ಈ ಬಾರಿ ಸಚಿವ ಸಂಪುಟದಲ್ಲಿ ಉನ್ನತ ಮಟ್ಟದ ಸಚಿವ ಸ್ಥಾನ ನೀಡಬೇಕು ಎಂದು ಜೈ ಭೀಮ ಸೇನಾ ರಾಜ್ಯ ಸಂಘರ್ಷ ಸಮಿತಿಯ ರಾಜ್ಯ ಘಟಕದ ಉಪಾಧ್ಯಕ್ಷರಾದ ಮೈಲಾರಪ್ಪ ವೀ. ಚಳ್ಳಮರದ ಅವರು ಆಗ್ರಹಿಸಿದ್ದಾರೆ.
ಈ ಕುರಿತು ನಮ್ಮ ವೆಬ್ ಪೋರ್ಟಲ್ ಗೆ ಮಾಹಿತಿ ನೀಡಿರುವ ಅವರು, ಗದಗ ಜಿಲ್ಲೆಯ ರೋಣ ಮತಕ್ಷೇತ್ರದಲ್ಲಿ ಜಿ. ಎಸ್. ಪಾಟೀಲರು ಅಭಿವೃದ್ದಿಯ ಹರಿಕಾರಾಗಿದ್ದು ದೀನದಲಿತರ ಆಧಾರವಾಗಿದ್ದಾರೆ ಅಷ್ಟೇ ಅಲ್ಲದೆ ಪರಿಸರ ಪ್ರೇಮಿಗಳು, ಶಿಕ್ಷಣ ಪ್ರೇಮಿಗಳು, ಉದ್ಯೋಗ ಸೃಷ್ಟಿಯ ಚಿಂತಕರಾಗಿದ್ದಾರೆ, ಕರೋನಾ ಹಾಗೂ ಇತರೆ ಸಮಯದಲ್ಲಿ ಜನರ ಸಂಕಷ್ಟಕ್ಕೆ ಮಿಡಿಯುವ ಹೃದಯವಂತರಾಗಿದ್ದಾರೆ ರೋಣ ಮತಕ್ಷೇತ್ರದ ಅಭಿವೃದ್ಧಿಗೆ ಪಣ ತೊಟ್ಟಿರುವ ಇವರು ಹಲವು ಬಾರಿ ಶಾಸಕರಾಗಿ ಆಯ್ಕೆಯಾದರು ಇಂದಿಗೂ ಸಚಿವ ಸ್ಥಾನವನ್ನು ಬಯಸಿಲ್ಲ ಹಾಗೂ ಯಾವುದೇ ಲಾಬಿ ಮಾಡಿಲ್ಲ. ಈ ಕಾರಣದಿಂದಾಗಿ ಇವರ ಹಿರಿತನ ಮತ್ತು ಒಳ್ಳೆತನವನ್ನು ಗುರುತಿಸಿ ರೋಣದ ಕಾಂಗ್ರೇಸ್ ನಾಯಕ ಸನ್ಮಾನ್ಯ ಶ್ರೀ ಜಿ. ಎಸ್. ಪಾಟೀಲ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಠೀಕೆಗಳು 0