ಸಂಸ್ಥಾನ ಶ್ರೀ ಗವಿಶಿದ್ಧೇಶ್ವರರ ಮಠ, ಕೊಪ್ಪಳ. ಸಾವಿರಾರು ವರ್ಷಗಳ ಪರಂಪರೆಯನ್ನು, ಐತಿಹಾಸಿಕತೆಯನ್ನು ಹೊಂದಿದ ಪುಣ್ಯಕ್ಷೇತ್ರ, ದಕ್ಷಿಣ ಭಾರತದ ಕುಂಭಮೇಳವೆಂದು ಪ್ರಖ್ಯಾತಿ ಪಡೆದ ಶ್ರೀಮಠದ ಮಹಾಮಹಿಮಾ ಶ್ರೀ ಗವಿಸಿದ್ಧೇಶ್ವರರ ಮಹಾರಥೋತ್ಸವ ಹಾಗೂ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೋಳಲು ಲಕ್ಷಾಂತರ ಭಕ್ತರು ಸಾಗರೋಪಾದಿಯಲ್ಲಿ ಆಗಮಿಸುತ್ತಾರೆ
ಕೊಪ್ಪಳ :
ಸಂಸ್ಥಾನ ಶ್ರೀ ಗವಿಶಿದ್ಧೇಶ್ವರರ ಮಠ, ಕೊಪ್ಪಳ. ಸಾವಿರಾರು ವರ್ಷಗಳ ಪರಂಪರೆಯನ್ನು, ಐತಿಹಾಸಿಕತೆಯನ್ನು ಹೊಂದಿದ ಪುಣ್ಯಕ್ಷೇತ್ರ, ದಕ್ಷಿಣ ಭಾರತದ ಕುಂಭಮೇಳವೆಂದು ಪ್ರಖ್ಯಾತಿ ಪಡೆದ ಶ್ರೀಮಠದ ಮಹಾಮಹಿಮಾ ಶ್ರೀ ಗವಿಸಿದ್ಧೇಶ್ವರರ ಮಹಾರಥೋತ್ಸವ ಹಾಗೂ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೋಳಲು ಲಕ್ಷಾಂತರ ಭಕ್ತರು ಸಾಗರೋಪಾದಿಯಲ್ಲಿ ಆಗಮಿಸುತ್ತಾರೆ, ಹಾಗೇ ಆಗಮಿಸುವ ಭಕ್ತಸಮೂಹವು ಜಾತ್ರೇಯ ವೈಭವವನ್ನು ಕಣ್ಣಾರೆ ಕಂಡು ಭಾವ ಪರವಶರಾದರೆ ಸಾಲದು.., ಜಾತ್ರೆಗೆ ಬಂದು ಹೋಗುವು ಭಕ್ತಸಮೂಹದಲ್ಲಿ ಸಮಾಜಮುಖಿ ಹಿತ ಚಿಂತನೆಗಳ ವಿಚಾರಗಳನ್ನು ಬಿತ್ತಿ, ಜ್ವಲಂತ ಸಮಸ್ಯೆಗಳ ಹೋಗಲಾಡಿಸುವ ನಿಟ್ಟಿನಲ್ಲಿ ಶ್ರೀಮಠವು, ಏಳೆಯುವ ತೇರು ಜಾಗೃತಿ ಜಾಥಾದೊಂದಿಗೆ ಎಂದು ಜಾಗೃತಿ ಜಾಥ ಕಾರ್ಯಕ್ರಮಕ್ಕೆ 2015 ರಲ್ಲಿ ಮುನ್ನುಡಿ ಇಟ್ಟಿತು. ”ಇದು ಭಕ್ತನು ಮಠಕ್ಕೆ ಬಂದರೆ ದೈವವೇ ಮನೆ ಮನಗಳನ್ನು ತಲುಪುವ ಹೃದಯಸ್ಪರ್ಶಿ ಕಾರ್ಯಕ್ರಮ."
" ಕಾಯಕ ದೇವೋಭವ" ಎಂಬ ಘೋಷವಾಕ್ಯದೊಂದಿಗೆ 2024ನೆಯ ವರ್ಷದ ಜಾತ್ರಾ ಮಹೋತ್ಸವದ ಜಾಗೃತಿ ಕಾರ್ಯಕ್ರಮವು ಸಾವಿರಾರು ವಿದ್ಯಾರ್ಥಿಗಳ ಜಾಗೃತಿ ನಡಿಗೆ ಕೊಪ್ಪಳ ತಾಲೂಕು ಕ್ರೀಡಾಂಗಣದಿಂದ ಅಶೋಕ್ ವೃತ್ತದ ಮೂಲಕ ಗಡಿಯಾರ ಕಂಬವನ್ನು ತಲುಪಿ ಸಂಸ್ಥಾನ ಶ್ರೀ ಗವಿಮಠದಲ್ಲಿ ಸಮಾರೋಪವಾಯಿತು.ಬೆಳಗ್ಗೆ 8 ಗಂಟೆಗೆ
ಈ ಜಾಗೃತಿ ನಡಿಗೆ ಪ್ರಾರಂಭ 10.00 ಮುಕ್ತಾಯ. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಾವಿರಾರು ವಿದ್ಯಾರ್ಥಿಗಳಿಗೆ ಸ್ವಉದ್ಯೋಗದ ಮಹತ್ವ ಮತ್ತು ಸ್ವಉದ್ಯೋಗಕ್ಕೆ ಬೇಕಾಗಿರುವ ಕೌಶಲ್ಯಗಳ ಬಗ್ಗೆ ಯಶಸ್ವಿ ಉದ್ಯಮಿಶೀಲ ವ್ಯಕ್ತಿಗಳಿಂದ ಉಪನ್ಯಾಸವನ್ನು ನೀಡಿಸಲಾಯಿತು.
ಶ್ರೀ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವದ ಎರಡನೆಯ ದಿನದ ಕಾರ್ಯಕ್ರಮ ತಪೋತ್ಸವ.ಬುಧವಾರ ಸಂಜೆ 6 ಗಂಟೆಗೆ ಗವಿಮಠದ ಕೆರೆ ಅಂಗಳದಲ್ಲಿ ಗವಿಸಿದ್ದೇಶ್ವರರ ಮೂರ್ತಿ ಹೊತ್ತ ತೆಪೋತ್ಸವವೂ ಸಂಭ್ರಮ ಸಡಗರದಿಂದ ನಡೆಯಿತು.ವಿಶೇಷವಾಗಿ ಜರಗಿದ ಗಂಗಾರತಿ ಬೆಳಕು ಭಕ್ತರ ಮನದಂಗಳ ತುಂಬಿ ಭಕ್ತಿ ಮೆರೆಯುವಂತೆ ಮಾಡಿತು. ಈ ಕಾರ್ಯಕ್ರಮದಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.
ವರದಿ : ವೀರೇಶ ಹಿರೇಮಠ
ಠೀಕೆಗಳು 0