ತಾಲೂಕಿನಾದ್ಯಂತ ವರುಣ ರಾಯನ ಮುನಿಸು ಮುಂದುವರೆದಿದ್ದು ಮುಂಗಾರುಮಳೆ ಕೈಕೊಟ್ಟು ಬರಗಾಲದ ಛಾಯೆ ಆವರಿಸಿ ಬಡವರ, ರೈತರ ಜೀವನ ಚಿಂತಾಜನಕವಾಗಿದೆ ಇಂತಹ ಬರಗಾಲದ ದಿನಗಳಲ್ಲಿ ನೆರೇಗಾ ಕಾಮಗಾರಿಯು ಬಡವರ ರೈತರ ಬವಣೆ ನೀಗಿಸಲು ಸಹಕಾರಿಯಾಗಿದೆ ಎಂದು ಕಾಯಕ ಯೋಗಿ ಮಲ್ಲು ದೊಡ್ಡಮನಿ ಹೇಳಿದರು.
ನೆರೇಗಾ ಯೋಜನೆಯು ಬಡವರು ನಗರ ಪ್ರದೇಶಗಳಿಗೆ ಗುಳೆ ಹೋಗುವುದನ್ನು ತಪ್ಪಿಸಿ ಗ್ರಾಮೀಣ ಪ್ರದೇಶಗಳಲ್ಲಿ ನೇಲೆಯುರುವಂತೆ ಮಾಡಿ ಗ್ರಾಮೀಣ ಪ್ರದೇಶದ ಜಲಮೂಲಗಳನ್ನು ಉನ್ನತಿಕರಿಸಿ ಜಲ ಮೂಲಗಳ ಸಂರಕ್ಷಣೆ ಮಾಡುವ ಕಾರ್ಯವನ್ನು ಮಾಡುತ್ತಿದೆ ಎಂದು ತಾಲೂಕ ನರೇಗಾ ಐ.ಇ.ಸಿ ಸಂಯೋಜಕ ಲಕ್ಷ್ಮಣ ಕೆರಳ್ಳಿ ಹೇಳಿದರು.
Your experience on this site will be improved by allowing cookies.