ಕುಕನೂರು ಪಟ್ಟಣದ ಗವಿಶ್ರೀ ನಗರ ಹಾಗೂ ಸುತ್ತಮುತ್ತಲಿನ ವಾರ್ಡ ಗಳಲ್ಲಿ ಮಧ್ಯರಾತ್ರಿ ಕೆಲವು ಕಿಡಗೇಡಿಗಳು ದ್ವಿಚಕ್ರ ವಾಹನದ ಪೆಟ್ರೋಲ್ ಕಲೆಯುತ್ತಿದ್ದು,ರಾತ್ರಿ ಮನೆಯ ಮುಂದೆ ನಿಲ್ಲಿಸಿದ್ದ ಗಾಡಿಗಳಲ್ಲಿ ಬೆಳಗಾಗುವಷ್ಟರಲ್ಲಿ ಪೆಟ್ರೋಲ್ ಮಾಯ
ಕುಕನೂರು ಪಟ್ಟಣದ ಗವಿಶ್ರೀ ನಗರ ಹಾಗೂ ಸುತ್ತಮುತ್ತಲಿನ ವಾರ್ಡ ಗಳಲ್ಲಿ ಮಧ್ಯರಾತ್ರಿ ಕೆಲವು ಕಿಡಗೇಡಿಗಳು ದ್ವಿಚಕ್ರ ವಾಹನದ ಪೆಟ್ರೋಲ್ ಕಲೆಯುತ್ತಿದ್ದು,ರಾತ್ರಿ ಮನೆಯ ಮುಂದೆ ನಿಲ್ಲಿಸಿದ್ದ ಗಾಡಿಗಳಲ್ಲಿ ಬೆಳಗಾಗುವಷ್ಟರಲ್ಲಿ ಪೆಟ್ರೋಲ್ ಮಾಯ
ಕುಕನೂರು :
ಕುಕನೂರು ಪಟ್ಟಣದ ಗವಿಶ್ರೀ ನಗರ ಹಾಗೂ ಸುತ್ತಮುತ್ತಲಿನ ವಾರ್ಡ ಗಳಲ್ಲಿ ಮಧ್ಯರಾತ್ರಿ ಕೆಲವು ಕಿಡಗೇಡಿಗಳು ದ್ವಿಚಕ್ರ ವಾಹನದ ಪೆಟ್ರೋಲ್ ಕಲೆಯುತ್ತಿದ್ದು,ರಾತ್ರಿ ಮನೆಯ ಮುಂದೆ ನಿಲ್ಲಿಸಿದ್ದ ಗಾಡಿಗಳಲ್ಲಿ ಬೆಳಗಾಗುವಷ್ಟರಲ್ಲಿ ಪೆಟ್ರೋಲ್ ಮಾಯವಾಗುತ್ತಿರುವ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತೀವೆ, ಸದ್ಯ ಇದೀಗ ಪೆಟ್ರೋಲ್ ಕದಿಯುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೇರೆಯಾಗಿದ್ದು ಕುಕನೂರು ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಈ ವಿಡಿಯೋ ಸಕತ್ ವೈರಲ್ ಆಗಿದೆ. ಗವಿ ಶ್ರೀ ನಗರ ಸೇರಿ ಸುತ್ತಮುತ್ತಲಿನ ವಾರ್ಡ್ ಗಳಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.
ಮಧ್ಯರಾತ್ರಿ ಸುಮಾರು ಒಂದು ಗಂಟೆಯ ವೇಳೆಗೆ ಯುವಕನೋರ್ವ ಗಿಡದ ಕೆಳಗೆ ನಿಲ್ಲಿಸಿರುವ ಬೈಕ್ ಹತ್ತಿರ ಹೋಗಿ ಬಾಟಲ್ ಗಳಲ್ಲಿ ಪೆಟ್ರೋಲ್ ತುಂಬಿಕೊಂಡು ಮರಳುತ್ತಿರುವ ದೃಶ್ಯ ಸರಿಯಾಗಿದ್ದು ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಕುಕನೂರು ಪೊಲೀಸ್ ಠಾಣಾ ಪೊಲೀಸ್ ಸಿಬ್ಬಂದಿಯವರಿಗೆ ಈ ಮಾಹಿತಿ ದೊರೆತಿದ್ದು ಇದುವರೆಗೂ ಯಾರೂ ಪೊಲೀಸ್ ಠಾಣೆಗೆ ದೂರು ನೀಡಿರುವುದಿಲ್ಲ ಆದರೂ ಸಹ ಸ್ವಯಂ ಪ್ರೇರಿತರಾಗಿ ಸಿಸಿಟಿವಿ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಕುಕನೂರು ಪೊಲೀಸ್ ಠಾಣಾಧಿಕಾರಿ ಯು.ಡಾಕೇಶ್ ದೂರವಾಣಿ ಮುಖಾಂತರ ತಿಳಿಸಿರುತ್ತಾರೆ.
ನಿಂಗರಾಜ ದೊಡ್ಡಮನಿ
Like
Dislike
Love
Angry
Sad
Funny
Wow
Your experience on this site will be improved by allowing cookies.
ಠೀಕೆಗಳು 0