ಪ್ರಜಾಪ್ರಭುತ್ವವನ್ನು ಗೌರವಿಸುವ ವ್ಯಕ್ತಿಯಾಗಿ ಮತದಾರ ನೀಡಿದ ತೀರ್ಪಿಗೆ ತಲೆಬಾಗಿ ನನ್ನ ಸೋಲನ್ನು ಒಪ್ಪಿಕೊಳ್ಳುತ್ತೇನೆ ಆದರೆ ಅತಿ ಬೇಗನೆ ಬಿಜೆಪಿಗರು ಫೀನಿಕ್ಸ್ ಪಕ್ಷಿಯಂತೆ ಎದ್ದು ಬಂದು ಭಾರತೀಯ ಜನತಾ ಪಕ್ಷವನ್ನು ರಾಜ್ಯದಲ್ಲಿ ಗಟ್ಟಿಯಾಗಿ ನೆಲೆಯೂರಿಸುತ್ತೇವೆ ಎಂದು ಮಾಜಿ ಸಚಿವ ಹಾಲಪ್ಪ ಆಚಾರ್ ಹೇಳಿದರು.
ಕುಕನೂರು :
ಪ್ರಜಾಪ್ರಭುತ್ವವನ್ನು ಗೌರವಿಸುವ ವ್ಯಕ್ತಿಯಾಗಿ ಮತದಾರ ನೀಡಿದ ತೀರ್ಪಿಗೆ ತಲೆಬಾಗಿ ನನ್ನ ಸೋಲನ್ನು ಒಪ್ಪಿಕೊಳ್ಳುತ್ತೇನೆ ಆದರೆ ಅತಿ ಬೇಗನೆ ಬಿಜೆಪಿಗರು ಫೀನಿಕ್ಸ್ ಪಕ್ಷಿಯಂತೆ ಎದ್ದು ಬಂದು ಭಾರತೀಯ ಜನತಾ ಪಕ್ಷವನ್ನು ರಾಜ್ಯದಲ್ಲಿ ಗಟ್ಟಿಯಾಗಿ ನೆಲೆಯೂರಿಸುತ್ತೇವೆ ಎಂದು ಮಾಜಿ ಸಚಿವ ಹಾಲಪ್ಪ ಆಚಾರ್ ಹೇಳಿದರು.
ಕುಕನೂರು ಪಟ್ಟಣದ ಕೊಪ್ಪಳ ರಸ್ತೆಯಲ್ಲಿರುವ ಭಾರತೀಯ ಜನತಾ ಪಕ್ಷದ ಕಾರ್ಯಾಲಯದಲ್ಲಿ ಕಾರ್ಯಕರ್ತರ ಅಭಿನಂದನ ಮತ್ತು ಆತ್ಮಾವಲೋಕನ ಸಭೆಯ ನಡೆಸಿದ ನಂತರ ವರದಿಗಾರರೊಂದಿಗೆ ಹಾಲಪ್ಪ ಆಚಾರ್ ಮಾತನಾಡುತ್ತ ರಾಜಕಾರಣದಲ್ಲಿ ಯಾವುದೋ ಒಂದು ನಂಬಿಕೆಯಿಂದ ಸಾಗುವ ವೇಳೆ ಹೆಜ್ಜೆ ತಪ್ಪಿ ಸೋಲನ್ನು ಅನುಭವಿಸಬೇಕಾಯಿತು ಈ ಸೋಲಿಗೆ ಯಾವ ವ್ಯಕ್ತಿ ಅಥವಾ ಯಾವುದೇ ಯೋಜನೆ ಕಾರಣವಾಗಿಲ್ಲ ಈ ಸೋಲನ್ನು ಎಲ್ಲಾ ಬಿಜೆಪಿ ನಾಯಕರು ಸೇರಿಕೊಂಡು ಈ ಸೋಲನ್ನು ಒಪ್ಪಿಕೊಳ್ಳುತ್ತೇವೆ ಎಂದು ಹೇಳಿದರು.
ಭಾರತೀಯ ಜನತಾ ಪಕ್ಷದ ಏಳಿಗೆಗಾಗಿ ಹಗಲು ರಾತ್ರಿ ಶ್ರಮಿಸಿದ ಕಾರ್ಯಕರ್ತರಿಗೆ ಕೃತಜ್ಞತೆ ಹೇಳುವುದರೊಂದಿಗೆ ನಮ್ಮ ಸೋಲಿನ ಆತ್ಮಾವಲೋಕನ ಮಾಡಿಕೊಳ್ಳುವುದು ಅವಶ್ಯಕವಾಗಿದ್ದು ಆದ್ದರಿಂದ ರಾತ್ರಿ ತಡವಾಗಿ ಕಾರ್ಯಕರ್ತರಿಗೆ ಕರೆ ಮಾಡಿದರು ಸಹ ಬೆಳಗಾಗುವಷ್ಟರಲ್ಲಿ ಸುಮಾರು ನಾಲ್ಕರಿಂದ ಐದು ಸಾವಿರ ಕಾರ್ಯಕರ್ತರು ಬಂದು ಅಭಿನಂದನೆ ಸ್ವೀಕರಿಸಿ ಆತ್ಮಾವಲೋಕನ ಸಭೆಯಲ್ಲಿ ಪಾಲ್ಗೊಂಡು ಹೋಗಿರುತ್ತಾರೆ ನಾವೆಲ್ಲ ಸೇರಿಕೊಂಡು ಹೀಗಾಗಿರುವ ಲೋಪದೋಷವನ್ನು ತಿದ್ದಿಕೊಳ್ಳುತ್ತಾ ಮುಂಬರುವ ತಾಲೂಕ ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಗಳಲ್ಲಿ ಭಾರತೀಯ ಜನತಾ ಪಕ್ಷದ ಕಾರ್ಯವೈಕರಿ ಮತ್ತು ಕಾರ್ಯಕರ್ತರ ಬಲವನ್ನು ಸಾಬೀತುಪಡಿಸುತ್ತೇವೆ ಆದ್ದರಿಂದ ಯಾವುದೇ ಕಾರ್ಯಕರ್ತರು ಎದೆಗುಂದದೆ ತಮ್ಮ ಕಾರ್ಯ ನಿರ್ವಹಿಸಿ ನಿಮ್ಮೊಂದಿಗೆ 24*7 ಜೊತೆಯಾಗಿ ನಾನಿರುತ್ತೇನೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಭಾರತೀಯ ಜನತಾ ಪಕ್ಷದ ಪ್ರಮುಖರು ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು.
ನಿಂಗರಾಜ ದೊಡ್ಡಮನಿ
ಠೀಕೆಗಳು 0