ಸಾಮರಸ್ಯದಿಂದ ಒಬ್ಬರನ್ನೊಬ್ಬರು ಅರಿತುಕೊಂಡು ಸಹೋದರರಂತೆ ಸಾಗುವುದೇ ನಿಜವಾದ ಬದುಕಾಗಿದ್ದು, ಭಾವೈಕ್ಯದಿಂದ ಜೀವನ ನಡೆಸುವುದೇ ಧರ್ಮವಾಗಿದೆ.
ಸಾಮರಸ್ಯದಿಂದ ಒಬ್ಬರನ್ನೊಬ್ಬರು ಅರಿತುಕೊಂಡು ಸಹೋದರರಂತೆ ಸಾಗುವುದೇ ನಿಜವಾದ ಬದುಕಾಗಿದ್ದು, ಭಾವೈಕ್ಯದಿಂದ ಜೀವನ ನಡೆಸುವುದೇ ಧರ್ಮವಾಗಿದೆ.
ಕುಕನೂರು :
ಸಾಮರಸ್ಯದಿಂದ ಒಬ್ಬರನ್ನೊಬ್ಬರು ಅರಿತುಕೊಂಡು ಸಹೋದರರಂತೆ ಸಾಗುವುದೇ ನಿಜವಾದ ಬದುಕಾಗಿದ್ದು, ಭಾವೈಕ್ಯದಿಂದ ಜೀವನ ನಡೆಸುವುದೇ ಧರ್ಮವಾಗಿದೆ ಎಂದು ಕೊಪ್ಪಳ ಸಂಸ್ಥಾನ ಗವಿಮಠದ ಶ್ರೀಗಳಾದ ಶ್ರೀ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿಗಳು ಹೇಳಿದರು.
ಕುಕನೂರು ತಾಲೂಕಿನ ಭಾನಾಪುರ ಗ್ರಾಮದಲ್ಲಿ ಹೊಸದಾಗಿ ನಿರ್ಮಾಣಗೊಂಡ ಮಸೀದಿಯ ಉದ್ಘಾಟನಾ ಕಾರ್ಯಕ್ರಮವನ್ನು ನೆರವೇರಿಸಿ ಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಮಾತನಾಡುತ್ತಾ ಭಾವೈಕ್ಯದಿಂದ ಜೀವನ ಸಾಗಿಸುವುದೇ ಮಹತ್ವದ ಧರ್ಮವಾಗಿದ್ದು ಸಾಮರಸ್ಯದ ಗುರುತಾಗಿದೆ, ಧರ್ಮ ಎನ್ನುವ ಶಬ್ದಕ್ಕಿಂತ ಧರ್ಮವಂತ ಎನ್ನುವ ಶಬ್ದದಲ್ಲಿ ಮಹತ್ವದ ಯಾರಿಗೆ ಕರೆಯಬೇಕು ಎಂದರೆ ಪ್ರತಿ ದಿನ ಶ್ರದ್ಧಾ ಭಕ್ತಿಯಿಂದ ದೇವಸ್ಥಾನಕ್ಕೆ ಹೋಗಿ ಪ್ರಸಾದ ಸ್ವೀಕರಿಸುವವನು ಮುಖ್ಯ ಎನ್ನುವುದಕ್ಕಿಂತ ಪ್ರಸಾದ ತಿಂದು ಎಸೆಯುವ ಹಣ್ಣಿನ ಸಿಪ್ಪೆ, ಎಲೆ ಅಥವಾ ಹಾಳೆಗಳನ್ನು ದೇವಸ್ಥಾನದ ಪ್ರಾಂಗಣದಿಂದ ತೆಗೆದು ಹಾಕಿ ಅಂಗಳವನ್ನು ಶುಚಿಗೊಳಿಸುವವನೇ, ನಿಜವಾದ ಧರ್ಮವಂತ ಎಂದು ಹಿತವಚನ ನುಡಿದರು.
ಮನುಷ್ಯ ಜಾತಿ, ಮತ, ಪಂಥ ಎಂದು ಬದುಕುತ್ತಿರುವುದು ಸರಿಯಾದ ಧರ್ಮವಲ್ಲ, ಎಲ್ಲರನ್ನೂ ಒಗ್ಗೂಡಿಸಿಕೊಂಡು ಪ್ರತಿಯೊಬ್ಬರ ಏಳಿಗೆಯಲ್ಲಿ ಸಂಭ್ರಮ ಪಡುವುದೇ ನಿಜ ಧರ್ಮ ಎಂದು ಹೇಳಿದರು. ಬಾನಾಪುರದತ್ತ ಪುಟ್ಟ ಗ್ರಾಮದಲ್ಲಿ ಇಸ್ಲಾಂ ಧರ್ಮದ ಮನೆಗಳು ಕೇವಲ ಐದೇ ಒಂದಿದ್ದರೂ ಸಹ ಇತರೆ ಎಲ್ಲಾ ಸಮುದಾಯದವರು ಸೇರಿ ಸಾಮರಸ್ಯದಿಂದ ಬದುಕು ಸಾಗಿಸುತ್ತಿರುವುದೇ ಸಾಮರಸ್ಯರ ಧರ್ಮ ಎಂದು ಹೇಳಿದರು.
ಶ್ರೀಗಳು ಗ್ರಾಮಕ್ಕೆ ಆಗಮಿಸುತ್ತಿದ್ದಂತೆಯೇ ಮುಸ್ಲಿಂ ಸಮುದಾಯದವರು ಶ್ರೀಗಳನ್ನು ಶ್ರದ್ಧಾಭಕ್ತಿಯಿಂದ ಬರಮಾಡಿಕೊಂಡು ಮಸದಿಯ ಕಡೆ ಕರೆದುಕೊಂಡು ಹೋದರು.
ಈ ವೇಳೆಯಲ್ಲಿ ಗ್ರಾಮದ ಪ್ರಮುಖರಾದ ಚಂದ್ರಶೇಖರಯ್ಯ ಹಿರೇಮಠ, ನಿಂಗನಗೌಡ ಡಂಬಳ, ರೆಹಿಮಾನ ಸಾಬ್ ನದಾಫ, ಎಲ್ಲಪ್ಪ ಮೇಟಿ, ಮಹಮ್ಮದ್ ರಫಿ ಇಟ್ಟಿಗಿ, ಶಂಕ್ರಪ್ಪ ಚೌಡಕಿ, ಮಲ್ಲಿಕಾರ್ಜುನಯ್ಯ ಮಠದ, ವಿರುಪಾಕ್ಷಪ್ಪ ಅಂಗಡಿ, ಈರಪ್ಪ ತಳವಾರ, ಕಂತಯ್ಯ ಸಸಿ ಮಠ, ಮಹಮ್ಮದ್ ಅಲಿ ಇನ್ನಿತರರು ಪಾಲ್ಗೊಂಡಿದ್ದರು.
ನಿಂಗರಾಜ ದೊಡ್ಡಮನಿ
Like
Dislike
Love
Angry
Sad
Funny
Wow
Your experience on this site will be improved by allowing cookies.
ಠೀಕೆಗಳು 0