ಕಳಕಪ್ಪ ಬಂಡಿಯವರ ಪಕ್ಷದ ಕಚೇರಿಯಿಂದ ಪ್ರಾರಂಭವಾದ ರೋಡ್ ಶೋ ಕಾಲಕಾಲೇಶ್ವರ ವೃತ್ತ, ಜೋಡು ರಸ್ತೆ, ದುರ್ಗಾ ವೃತ್ತ, ಗರಡಿಮನಿ, ಹಿರೇ ಬಜಾರ, ಕಟ್ಟಿ ಬಸವೇಶ್ವರ, ರಂಗಮಂದಿರ, ಕೊಳ್ಳಿಯವರ ಕತ್ರಿ, ಬಜರಂಗದಳ ಸರ್ಕಲ, ಬಸವೇಶ್ವರ ವೃತ್ತ, ದುರ್ಗಾ ಸರ್ಕಲ್ ವರೆಗೂ ಪಕ್ಷದ ಕಾರ್ಯಕರ್ತರು ಬೃಹತ್ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ಗಜೇಂದ್ರಗಡ :
ಕಳಕಪ್ಪ ಬಂಡಿಯವರ ಪಕ್ಷದ ಕಚೇರಿಯಿಂದ ಪ್ರಾರಂಭವಾದ ರೋಡ್ ಶೋ ಕಾಲಕಾಲೇಶ್ವರ ವೃತ್ತ, ಜೋಡು ರಸ್ತೆ, ದುರ್ಗಾ ವೃತ್ತ, ಗರಡಿಮನಿ, ಹಿರೇ ಬಜಾರ, ಕಟ್ಟಿ ಬಸವೇಶ್ವರ, ರಂಗಮಂದಿರ, ಕೊಳ್ಳಿಯವರ ಕತ್ರಿ, ಬಜರಂಗದಳ ಸರ್ಕಲ, ಬಸವೇಶ್ವರ ವೃತ್ತ, ದುರ್ಗಾ ಸರ್ಕಲ್ ವರೆಗೂ ಪಕ್ಷದ ಕಾರ್ಯಕರ್ತರು ಬೃಹತ್ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ಬಳಿಕ ಬಹಿರಂಗ ಸಭೆ ನಡೆಸಿದರು. ರೋಣ ವಿಧಾನಸಭಾ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾದ ಕಳಕಪ್ಪ ಬಂಡಿ ಅವರಿಂದ ಬೃಹತ ರೋಡ್ ಶೋ ಕಾರ್ಯಕ್ರಮ ನಡೆಯಿತು.
ಇದೇ ಸಂದರ್ಭದಲ್ಲಿ ರೋಡ ಶೋ ದಲ್ಲಿ ಕೊಲ್ಲಾಪೂರದಿಂದ ಬಂದಾ ವಿವಿಧ ಕಲಾತಂಡಗಳು ರ್ಯಾಲಿಯಲ್ಲಿ ಪಾಲ್ಗೊಳ್ಳುವ ಮೂಲಕ ಮತಾಕರ್ಷಣೆಗೆ ನೆರವಾದರು.
ತೆರೆದ ವಾಹನದಲ್ಲಿ ಕಳಕಪ್ಪ ಬಂಡಿ ಭರ್ಜರಿ ರೋಡ್ ಶೋ ನಡೆಸಿದರು. ನಗರ ಮತ್ತು ಗ್ರಾಮೀಣದಿಂದ ಬಂದ ಜನಸ್ತೋಮದತ್ತ ಕೈಬೀಸಿ ನೆರೆದಿದ್ದವರನ್ನು ಹುರಿದುಂಬಿಸಿದರು. ಕಳಕಪ್ಪ ಬಂಡಿ ಸ್ವಾಗತಿಸಲು ಜಿಟಿ ಜಿಟಿ ಮಳೆಯಲ್ಲೂ ಹೆಚ್ಚಿನ ಜನರು ಸಂಭ್ರಮದಿಂದ ಸೇರಿದ್ದರು. ರಸ್ತೆಯುದ್ದಕ್ಕೂ ಕೇಸರಿಮಯ ಬಾವುಟದೊಂದಿಗೆ ಹಲವಾರು ಸ್ವಾತಂತ್ರ್ಯ ಯೋಧರ ಭಾವಚಿತ್ರಗಳು ಭಾವುಟದುದ್ದಕ್ಕೂ ಕಂಗೋಳಿಸದವು. ಈ ಸಂದರ್ಭದಲ್ಲಿ ಮುತ್ಸದಿ ಪ್ರಧಾನಿ ಮೋದಿಯವರ ಹೆಸರು ಹೇಳುತ್ತಾ ಜೈಕಾರ ಹಾಕಿ ಸಂತಸಪಟ್ಟರು.
ಬಳಿಕ ಭಾಜಪ ಪಕ್ಷದ ಅಭ್ಯರ್ಥಿ ಕಳಕಪ್ಪ ಬಂಡಿ ಮಾತನಾಡಿ ರೋಣ ಮತಕ್ಷೇತ್ರದಲ್ಲಿ ಈ ಬಾರಿ ಕಮಲ ಅರಳಿದೆ. ಕ್ಷೇತ್ರದಲ್ಲಿ ಸಮೃದ್ದಿಯ ಸುರಕ್ಷಿತ ಸರ್ಕಾರ ಬರಲಿದೆ. ನಿಮ್ಮೆಲ್ಲೆರ ಆಶೀರ್ವಾದ ಇರಲಿ. ಎಸ್ಸಿ, ಎಸ್ಟಿ ಮೀಸಲಾತಿಯನ್ನು ಹೆಚ್ಚಿಸಿ ಎಲ್ಲರಿಗೂ ನ್ಯಾಯ ಕೊಡುವಂತಹ ಕೆಲಸವನ್ನು ರಾಜ್ಯ ಸರ್ಕಾರ ಮಾಡಿದೆ. ಬಹಳ ವರ್ಷಗಳಿಂದ ಬಹುತೇಕ ಬೇಡಿಕೆಗಳನ್ನು ಈಡೇರಿಸುವ ಕೆಲಸವನ್ನು ಮಾಡಿದೆ. ನಮ್ಮ ಸರ್ಕಾರದಲ್ಲಿ ಕಾಯಕಯೋಗಿ ಯೋಜನೆ ಜಾರಿಗೆ ತಂದಿದ್ದೇವೆ. ಡಬಲ್ ಇಂಜಿನ್ ಸರ್ಕಾರದ ಯೋಜನೆಗಳನ್ನು ಮನೆ ಮನೆಗೆ ತಲುಪಿಸಬೇಕು ಗೂಂಡಾಗಿರಿ ದಬ್ಬಾಳಿಕೆ ಮಾಡುವ ಕಾಂಗ್ರೆಸ್ ಗೆ ಉತ್ತರ ನೀಡಬೇಕಾದ ದಿನ ಮೇ ೧೦ ಎಂದರು
ಇದೇ ಸಂದರ್ಭದಲ್ಲಿ ಭಾಜಪದ ನಗರ ಘಟಕದ ಅಧ್ಯಕ್ಷ ರಾಜೇಂದ್ರ ಘೋರ್ಪಡೆ, ರೋಣ ಮಂಡಳದ ಅಧ್ಯಕ್ಷ ಮುತ್ತಣ್ಣ ಕಡಗದ, ಬಾಸ್ಕರ ರಾಯಬಾಗಿ, ಅಶೋಕ ವನ್ನಾಲ, ಶಿವಾನಂದ ಮಠದ, ಗಿರೀಶ ಕುಲಕರ್ಣಿ, ಅಮರೇಶ ಬಳಿಗೇರ, ನಾಗಣ್ಣ ಲಕ್ಕಲಕಟ್ಟಿ, ಮುತ್ತು ಗೌಡರ, ರವಿ ದಿವಾಣದ, ಮಲ್ಲು ಗೌಡರ, ಸೇರಿದಂತೆ ಅನೇಕ ಮುಖಂಡರು, ಕಾರ್ಯಕರ್ತರು ಪದಾಧಿಕಾರಿಗಳು ಪಾಲ್ಗೊಂಡಿದ್ದರು.
ಠೀಕೆಗಳು 0