ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ ಶಿವಕುಮಾರ್, ಪಕ್ಷವನ್ನು ಮುನ್ನಡೆಸಿ ಚುನಾವಣೆ ಗೆಲ್ಲಿಸಿದ್ದೇನೆ. ಸಿಎಂ ಸ್ಥಾನ ನನಗೇ ಕೊಡಬೇಕು ಎಂದು ಹೈಕಮಾಂಡ್ ಎದುರು ಪಟ್ಟು ಹಿಡಿದು ಕುಳಿತಿದ್ದರು. ಇಡೀ ರಾಜ್ಯಾದ್ಯಂತ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಬೇಕು ಅನ್ನೋ ಕಾರಣಕ್ಕೆ ಜನರು ಮತ ನೀಡಿದ್ದಾರೆ.