ಮಾನವನಾಗಿಯೇ ಜನಿಸುವುದು ದುರ್ಲಭ ಎಂದುಕೊಂಡಿರುವಾಗ ದಿವ್ಯಾಂಗನಾಗಿ ಜನಿಸಿ
ಮಾನವನಾಗಿಯೇ ಜನಿಸುವುದು ದುರ್ಲಭ ಎಂದುಕೊಂಡಿರುವಾಗ ದಿವ್ಯಾಂಗನಾಗಿ ಜನಿಸಿ
ಗದಗ
ಮಾನವನಾಗಿಯೇ ಜನಿಸುವುದು ದುರ್ಲಭ ಎಂದುಕೊಂಡಿರುವಾಗ ದಿವ್ಯಾಂಗನಾಗಿ ಜನಿಸಿ ತಿಳುವಳಿಕೆ ಬಂದಮೇಲೆ ಇತರರಿಗೆ ಹೊರೆಯಾಗದೇ ಸ್ವಾವಲಂಬಿ ಸ್ವಾತಂತ್ರ್ಯದ ಜೀವನವನ್ನು ನಡೆಸುತ್ತಿರುವ ಕೀರ್ತಿ ರಾಜೂರು ಗ್ರಾಮದ ಕಳಕಪ್ಪನವರಿಗೆ ಸಲ್ಲುತ್ತದೆ.
ತಾವೇ ಒಂದು ಅಂಗಡಿಯನ್ನು ಆರಂಭಿಸಿ ತಮ್ಮ ಹಾಗೆ ಇರುವ ದಿವ್ಯಾಂಗರಿಗೂ ಬಡವರಿಗೂ ತಮ್ಮ ಕೈಲಾದ ಸಹಾಯ ಮಾಡುತ್ತಿದ್ದಾರೆ. ಕಷ್ಟ ಸಹಿಸುವವನಿಂದ ಮಾತ್ರ ಏನನ್ನಾದರೂ ಸಾಧಿಸಲು ಸಾಧ್ಯವಿದೆ . ಮೆಟ್ರಿಕ್ ನಂತರ ಸ್ವಂತ ಉದ್ಯೋಗ ಆರಂಭಿಸಿದ ಅವರು ಇಂದಿನ ಯಾಂತ್ರಿಕ ಸಂಬಂಧಗಳ ಮಧ್ಯದಲ್ಲಿ ಹಾಗೂ ವಾಣಿಜ್ಯಕರ ಭಾವನೆಯಲ್ಲಿಯೇ ಬದುಕನ್ನು ನುಕುವವವರ ಮಧ್ಯದಲ್ಲಿಯೇ ನಮ್ಮ ರಾಜೂರಿನ ಕಳಕಪ್ಪ ಅವರು ಮಾನವೀಯ ಸಂಬಂಧಗಳ ಸೇಲೆಯಾಗಿದ್ದಾರೆ. ಹೀಗಾಗಿಯೇ ಸಮಾಜಸಲ್ಲಿನ ಇವರ ಕಾರ್ಯ ಕಂಕಯ್ರಗಳನ್ನು ಕಂಡ ಗುರುಕುಲ ಕಲಾ ಪ್ರತಿಷ್ಟಾನ ಕೇಂದ್ರ ಸಮಿತಿಯು ಪ್ರಶಸ್ತಿಯನ್ನು ನೀಡುತ್ತಿರುವುದು ಸಂತಸದ ಸಂಗತಿಯಾಗಿದೆ.
ಶ್ರೀಯುತರು ಈ ರಾಜ್ಯದಲ್ಲಿ ಮಾತ್ರವಲ್ಲದೇ ಅನ್ಯ ರಾಜ್ಯಗಳಲ್ಲೂ ಸಲ್ಲಿಸಿದ ಸೇವೆಗಾಗಿ ಗೋವಾ ಸರ್ಕಾರವು ಇವರಿಗೆ ಮುಮೇಂಟೋ ಆಪ್ ಅಪ್ರೀಷೇಶನ್ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.
ಮಾನವ ಸೇವೆಯಲ್ಲಿ ನಿರತಗೊಂಡು ಸಕಲಜೀವಗಳಿಗೆ ಒಳಿತುಮಾಡುವ ಮನೋಭಾವವುಳ್ಳಂತ ವ್ಯಕ್ತಿಗೆ ಪರಿಶುದ್ದವೆನಿಸುವ ನಿರ್ಮಲಭಾವಬೇಕು ಆತನು ದಿವ್ಯಾಂಗ ನೆನಸಿದಾಗಲೂ ಸರ್ವಾಂಗ ಸಮರ್ಥನೆ ಆಗುತ್ತಾನೆ ಎನ್ನುವುದಕ್ಕೆ ನಮ್ಮ ಕಳಕಪ್ಪರವರು ಜೀವಂತ ಸಾಕ್ಷೀ ಎನಿಸುತ್ತಾರೆ.
ದೈಹಿಕವಾಗಿ ನಾನು ದುರ್ಬಲನಾಗಿದ್ದೇನೆ ಎಂಬ ಭಾವನೆ ಅವರನ್ನು ಕಾಡಿಲ್ಲ. ಕಡುಬಡತನದಲ್ಲೂ ಸ್ವಾತಂತ್ರ್ಯ, ಸ್ವಾಭಿಮಾನದ ಚಿಲುಮೆಯಾಗಿ ತಮ್ಮನ್ನು ಸದಾ ಕ್ರಿಯಶೀಲರನ್ನಾಗಿಸಿಕೊಂಡು ಕಾರ್ಯಾನ್ಮುಖರಾಗಿದ್ದಾರಲ್ಲದೆ ಎಲ್ಲರನ್ನೂ ಸಕಾರಾತ್ಮಕ ಜೀವನಕ್ಕೆ ನಡೆಸುತ್ತಿದ್ದಾರೆ.
Like
Dislike
Love
Angry
Sad
Funny
Wow
Your experience on this site will be improved by allowing cookies.
ಠೀಕೆಗಳು 0