ರಾಜಕಾರಣಿಗಳು ಅದರಲ್ಲೂ ವಿಶೇಷವಾಗಿ ಹೈಕಮಾಂಡ್ ಸಂಸ್ಕೃತಿ ಇರುವ ಕಾಂಗ್ರೆಸ್ ಹಾಗು ಬಿಜೆಪಿ ನಾಯಕರು ದೆಹಲಿಗೆ ದಂಡಯಾತ್ರೆ ಮಾಡುವುದು ಕಾಮನ್.
ರಾಜಕಾರಣಿಗಳು ಅದರಲ್ಲೂ ವಿಶೇಷವಾಗಿ ಹೈಕಮಾಂಡ್ ಸಂಸ್ಕೃತಿ ಇರುವ ಕಾಂಗ್ರೆಸ್ ಹಾಗು ಬಿಜೆಪಿ ನಾಯಕರು ದೆಹಲಿಗೆ ದಂಡಯಾತ್ರೆ ಮಾಡುವುದು ಕಾಮನ್.
ಬೆಂಗಳೂರು :
ರಾಜಕಾರಣಿಗಳು ಅದರಲ್ಲೂ ವಿಶೇಷವಾಗಿ ಹೈಕಮಾಂಡ್ ಸಂಸ್ಕೃತಿ ಇರುವ ಕಾಂಗ್ರೆಸ್ ಹಾಗು ಬಿಜೆಪಿ ನಾಯಕರು ದೆಹಲಿಗೆ ದಂಡಯಾತ್ರೆ ಮಾಡುವುದು ಕಾಮನ್. ಒಂದು ವೇಳೆ ಹೈಕಮಾಂಡ್ನಿಂದ ಬುಲಾವ್ ಬಂದರೆ ಮಾಧ್ಯಮಗಳಿಗೆ ಬಹಿರಂಗವಾಗಿಯೇ ಹೇಳಿಕೆ ಕೊಟ್ಟು ದೆಹಲಿಗೆ ಹೋಗ್ತಿದ್ದೇನೆ ಎಂದು ಹೇಳಿ ಹೋಗುವುದು ಸಾಮಾನ್ಯ. ಆದರೆ ಕೆಲವೊಮ್ಮೆ ಏಕಾಏಕಿ ಯಾವುದೇ ಮುನ್ಸೂಚನೆಯನ್ನೂ ಕೊಡದೆ ದಿಲ್ಲಿಗೆ ಹೋಗುವುದು ತೀರಾ ಕಡಿಮೆ. ನಿನ್ನೆ ರಾತ್ರಿ ಬೆಂಗಳೂರಿನಲ್ಲಿ ಭಾರೀ ಮಳೆಯಾಗಿದ್ದರಿಂದ ಬಿಬಿಎಂಪಿ ವಾರ್ ರೂಮ್ಗೆ ಮಧ್ಯರಾತ್ರಿ ಭೇಟಿ ಕೊಟ್ಟಿದ್ದ ಡಿಸಿಎಂ ಹಾಗು ಬೆಂಗಳೂರು ಅಭಿವೃದ್ಧಿ ಸಚಿವ ಡಿ.ಕೆ ಶಿವಕುಮಾರ್ ದೆಹಲಿ ಭೇಟಿ ಬಗ್ಗೆ ಯಾವುದೆ ಮಾಹಿತಿ ನೀಡಲಿಲ್ಲ. ಆದರೆ ಬೆಳಗ್ಗೆ ದೆಹಲಿಗೆ ಹೋಗುವ ನಿರ್ಧಾರ ಅನಿರೀಕ್ಷಿತವಾಗಿ ತೆಗೆದುಕೊಂಡ ಡಿ.ಕೆ ಶಿವಕುಮಾರ್, ಸಚಿವ ಸತೀಶ್ ಜಾರಕಿಹೊಳಿ ಭೇಟಿ ಮಾಡಿದ್ದು ಕುತೂಹಲ ಮೂಡಿಸಿದೆ.
ಒಂದು ದಿನದ ಭೇಟಿಗಾಗಿ ದೆಹಲಿಗೆ ಡಿ.ಕೆ ಶಿವಕುಮಾರ್!
ಇಂದು ತುರ್ತಾಗಿ ದೆಹಲಿಗೆ ತೆರಳಿರುವ ಡಿಸಿಎಂ ಡಿ.ಕೆ ಶಿವಕುಮಾರ್, ನಾಳೆ ದೆಹಲಿಯಿಂದ ವಾಪಸ್ ಆಗಲಿದ್ದಾರೆ ಎನ್ನಲಾಗಿದೆ. ದೆಹಲಿಯಲ್ಲಿ ಹೈಕಮಾಂಡ್ ನಾಯಕರನ್ನ ಭೇಟಿಯಾಗುವ ಸಾಧ್ಯತೆಯಿದ್ದು, ರಾಜ್ಯ ರಾಜಕಾರಣದಲ್ಲಿ ಆಗುತ್ತಿರುವ ಕೆಲವು ಬೆಳವಣಿಗೆ ಬಗ್ಗೆ ಚರ್ಚೆ ನಡೆಸಲಿದ್ದಾರೆ ಎನ್ನಲಾಗಿದೆ. ಇನ್ನು ಹೈಕೋರ್ಟ್ನಲ್ಲಿ ಹೊರಬಿದ್ದ ಆದೇಶದ ಬಗ್ಗೆ, ಸಿಬಿಐ ತನಿಖೆ ಸಂಬಂಧ ತಮ್ಮ ಪರ ವಕಾಲತ್ತು ವಹಿಸಿರುವ ವಕೀಲರನ್ನೂ ಭೇಟಿಯಾಗುವ ಸಾಧ್ಯತೆಯಿದೆ ಅನ್ನೋ ಮಾಹಿತಿ ಸಿಕ್ಕಿದೆ. ದೆಹಲಿಗೆ ತೆರಳುವ ಮುನ್ನ ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಭೇಟಿ ಮೂರು ಕಾರಣಗಳಿಗೆ ಕುತೂಹಲ ಸೃಷ್ಟಿಸಿದೆ.
ಸತೀಶ್ ಮತ್ತು ಡಿ.ಕೆ ಶಿವಕುಮಾರ್ ಭೇಟಿ.. 3 ಕಾರಣ..
ಇತ್ತೀಚಿಗೆ ಬೆಳಗಾವಿ ರಾಜಕಾರಣದಲ್ಲಿ ಡಿ.ಕೆ ಶಿವಕುಮಾರ್ ಮೂಗು ತೂರಿಸುತ್ತಿದ್ದಾರೆ ಅನ್ನೋ ಕಾರಣಕ್ಕೆ ಸತೀಶ್ ಜಾರಕಿಹೊಳಿ ಮುನಿಸಿಕೊಂಡಿದ್ದರು. ಈ ಬಗ್ಗೆ ಬಹಿರಂಗವಾಗಿ ಮತ್ತು ಪಕ್ಷದ ವೇದಿಕೆಯಲ್ಲೂ ಹೇಳಿಕೊಂಡಿದ್ದರು. ದಲಿತ ಮುಖ್ಯಮಂತ್ರಿ ಬಗ್ಗೆ ನಿನ್ನೆಯಷ್ಟೇ ಮಾತನಾಡಿದ್ದ ಸಚಿವ ಸತೀಶ್ ಜಾರಕಿಹೊಳಿ, 2013ರಲ್ಲೂ ಈ ಪಿಕ್ಚರ್ ಓಡಿತ್ತು, ಈಗಲೂ ಓಡುತ್ತಿದೆ. ಆದ್ರೂ ಪಿಕ್ಚರ್ ರಿಲೀಸ್ ಆಗಿಲ್ಲ. ಯಾವಾಗ ರಿಲೀಸ್ ಆಗುತ್ತೆ ಕಾದು ನೋಡ್ಬೇಕು. ನಮ್ಮ ಕೈಯ್ಯಲ್ಲಿ ಏನೂ ಇಲ್ಲ, ಪಕ್ಷದ ಹೈಕಮಾಂಡ್ ಈ ಬಗ್ಗೆ ತೀರ್ಮಾನ ಮಾಡಬೇಕು ಎಂದು ಬಹಿರಂಗವಾಗಿಯೇ ಹೇಳಿಕೆ ನೀಡಿದ್ದರು. ಹೀಗಾಗಿ ಸತೀಶ್ ಜಾರಕಿಹೊಳಿ ಕ್ರೆಸೆಂಟ್ ರಸ್ತೆಯ ನಿವಾಸಕ್ಕೆ ಭೇಟಿ ನೀಡಿ ಒನ್ ಟು ಒನ್ ಚರ್ಚೆ ನಡೆಸಿದ್ದಾರೆ ಎನ್ನಲಾಗ್ತಿದೆ. ಕಳೆದ ವಾರ ಪರಮೇಶ್ವರ್ ನಿವಾಸದಲ್ಲಿ ಸಿಎಂ ಟಿಫಿನ್ ಮೀಟ್ ಮಾಡಿ ದಲಿತ ನಾಯಕರ ಜೊತೆಗೆ ಚರ್ಚೆ ನಡೆಸಿದ್ದರು. ಆ ಬಳಿಕ ಅಲರ್ಟ್ ಆಗಿರುವ ಡಿ.ಕೆ ಶಿವಕುಮಾರ್, ಹೆಚ್. ಸಿ ಮಹದೇವಪ್ಪ ಹಾಗೂ ಸತೀಶ್ ಜಾರಕಿಹೊಳಿಯನ್ನು ಭೇಟಿ ಮಾಡಲು ನಿರ್ಧರಿಸಿ, ಪಕ್ಷದಲ್ಲಿ ಆಗುತ್ತಿರುವ ಸಿಎಂ ಕುರ್ಚಿ ಗೊಂದಲದ ಬಗ್ಗೆ ಚರ್ಚೆ ನಡೆಸಿದ್ದಾರೆ.
ಸಿಎಂ ಕುರ್ಚಿ, ಕೆಪಿಸಿಸಿ ಅಧ್ಯಕ್ಷ ಸ್ಥಾನ, ಟನಲ್ ಗೊಂದಲ..
ಡಿ.ಕೆ ಶಿವಕುಮಾರ್ ಜೊತೆ ಮಾತುಕತೆ ನಡೆಸಿದ ಬಳಿಕ ಮಾತನಾಡಿರುವ ಸಚಿವ ಸತೀಶ್ ಜಾರಕಿಹೊಳಿ, ಬಂದ್ರು.. ಹೋದ್ರು ಅಷ್ಟೇ, ಬಂದಂಗೆ ವಾಪಸ್ ಹೋದ್ರು. ರಾಜಕೀಯ ವಿಚಾರ ಚರ್ಚೆ ಆಗಿದೆ, ಲೋಕಸಭಾ ಚುನಾವಣೆಗಾಗಿ ಸಂಘಟನೆ ಬಗ್ಗೆ ಮಾತನಾಡಿದ್ದೇವೆ ಎಂದಿದ್ದಾರೆ. ಕೆಲವು ಜಿಲ್ಲಾಧ್ಯಕ್ಷರನ್ನ ಬದಲಾವಣೆ ಮಾಡುವ ಬಗ್ಗೆ ಚರ್ಚೆ ನಡೀತು. ಇಂದು ದೆಹಲಿಗೆ ಹೋಗ್ತೇನೆ ಅಂತ ಹೇಳಿದ್ರು. ಕೆಲಸ ಮಾಡುವವರಿಗೆ ಕಾರ್ಯಾಧ್ಯಕ್ಷ ಮಾಡುವಂತೆ ಡಿಮ್ಯಾಂಡ್ ಇದೆ. ನಾವೆಲ್ಲಾ ಅಧಿಕಾರದಲ್ಲಿದ್ದೇವೆ, ನಾವು ಕಾರ್ಯಾಧ್ಯಕ್ಷ ಸ್ಥಾನ ಬಿಟ್ಟುಕೊಡ್ತೇವೆ. ಬಿ.ಎನ್ ಚಂದ್ರಪ್ಪ ಮುಂದುವರಿಯಬೇಕು ಎನ್ನುವ ನಿರ್ಧಾರ ಮಾಡಲಾಗಿದೆ ಎಂದಿದ್ದಾರೆ. ಇನ್ನು ಲೋಕಸಭಾ ಚುನಾವಣೆವರೆಗೂ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಇಲ್ಲ ಅಂತ ದೆಹಲಿಯಲ್ಲೇ ತೀರ್ಮಾನ ಆಗಿದೆ. ಚುನಾವಣೆ ಬಳಿಕ ಏನ್ ತೀರ್ಮಾನ ಮಾಡ್ತಾರೋ ನೋಡೋಣ ಎಂದಿರುವ ಸತೀಶ್, ಬೆಂಗಳೂರಿನಲ್ಲಿ ಟನಲ್ ರಸ್ತೆ ನಿರ್ಮಾಣ ವಿಚಾರ ಸಿಎಂ ಗಮನಕ್ಕೆ ತಂದಿಲ್ಲ. ಟನಲ್ ವಿಚಾರದಲ್ಲಿ ಸರ್ಕಾರ ನಿರ್ಧಾರ ಮಾಡುತ್ತದೆ. ಬಿಬಿಎಂಪಿ ಕೂಡ ಟನಲ್ ಮಾಡಲು ಬೇರೆ ಕಂಪನಿಗಳ ಜೊತೆ ಚರ್ಚೆ ಮಾಡುತ್ತಿದೆ ಎಂದಿದ್ದಾರೆ. ಆದರೆ ಡಿ.ಕೆ ಶಿವಕುಮಾರ್ ಭೇಟಿ ಮಾಡಿದ ನಿಖರ ಕಾರಣ ಏನು ಅನ್ನೋ ವಿಚಾರದಲ್ಲಿ ಗೌಪ್ಯತೆ ಕಾಯ್ದುಕೊಳ್ಳಲಾಗಿದೆ.
Like
Dislike
Love
Angry
Sad
Funny
Wow
Your experience on this site will be improved by allowing cookies.
ಠೀಕೆಗಳು 0