ಈಜಲು ಬಾವಿಗೆ ಹಾರಿದ ಬಾಲಕ ಶವವಾಗಿ ಪತ್ತೆಯಾದ ಪ್ರಕರಣ ಕುಕನೂರು ಪಟ್ಟಣದ ಹೊರವಲಯದಲ್ಲಿ ನಡೆದಿದೆ.
ಈಜಲು ಬಾವಿಗೆ ಹಾರಿದ ಬಾಲಕ ಶವವಾಗಿ ಪತ್ತೆಯಾದ ಪ್ರಕರಣ ಕುಕನೂರು ಪಟ್ಟಣದ ಹೊರವಲಯದಲ್ಲಿ ನಡೆದಿದೆ.
ಕುಕನೂರು :
ಈಜಲು ಬಾವಿಗೆ ಹಾರಿದ ಬಾಲಕ ಶವವಾಗಿ ಪತ್ತೆಯಾದ ಪ್ರಕರಣ ಕುಕನೂರು ಪಟ್ಟಣದ ಹೊರವಲಯದಲ್ಲಿ ನಡೆದಿದೆ.
ಬೇಸಿಗೆ ಸಂದರ್ಭದಲ್ಲಿ ಗ್ರಾಮೀಣ ಪ್ರದೇಶದ ಕೆರೆ ಬಾವಿಗಳಲ್ಲಿ ಬಾಲಕರು ಯುವಕರು ಬಿಸಿಲಿನ ತಾಪಕೆ ಈಜಲು ಹೋಗುವುದು ಸಹಜ ಪ್ರಕ್ರಿಯೆಯಾಗಿದ್ದು ಇದೇ ತರಹ ಈ ಸಲ ಹೋಗಿ 15 ವರ್ಷದ ಬಾಲಕ ನೀರು ಪಾಲಾದ ಘಟನೆ ಕೊಪ್ಪಳ ಜಿಲ್ಲಾ ಕುಕನೂರು ತಾಲೂಕಿನ ಗೊರ್ಲೆಕೊಪ್ಪ ರಸ್ತೆಯ ರೈಲು ನಿಲ್ದಾಣ ಪಕ್ಕದಲ್ಲಿರುವ ಬಾವಿಯೊಂದರಲ್ಲಿ ಸಂಭವಿಸಿದೆ.
ಕುಕನೂರು ಪಟ್ಟಣದ ನಿವಾಸಿ ಗವಿಸಿದ್ದಪ್ಪ ಸಾಲಮನಿ ಅವರ ಪುತ್ರ ಪ್ರಜ್ವಲ್ ಸಾಲಮನಿ(15) ಎಂಬ ಪಾಲಕ ಈಜಾಡಲು ಹೋಗಿ ನೀರಿನಲ್ಲಿ ಹಾರಿ ಮೇಲೆ ಬರದೆ ಇರುವದನ್ನು ಗಮನಿಸಿದ ಜೊತೆಗಾರರು ಕೂಡಲೇ ಮನೆಯವರಿಗೆ ವಿಷಯ ಮುಟ್ಟಿಸಿದ್ದು ನೀರಿನಿಂದ ಬಾಲಕನನ್ನು ಹೊರ ತೆಗೆದು ಕುಕನೂರಿನ ಸಮುದಾಯ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಯೆಂದು ಕೊಪ್ಪಳದ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಯಿತು. ನಂತರ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಬಾಲಕ ಮೃತ ಪಟ್ಟಿರುತ್ತಾನೆ.
ಮೃತನ ಕುಟುಂಬಸ್ಥರ ಕಂದನ ಮುಗಿಲುಮಟ್ಟಿದ್ದು, ಕುಕನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಿಂಗರಾಜ ದೊಡ್ಡಮನಿ
Like
Dislike
Love
Angry
Sad
Funny
Wow
Your experience on this site will be improved by allowing cookies.
ಠೀಕೆಗಳು 0