ಸುಮಾರು ಮೂವತ್ತಕ್ಕೂ ಹೆಚ್ಚು ವರ್ಷಗಳಿಂದ ಕುಕನೂರು ಪಟ್ಟಣದಲ್ಲಿ ಪ್ರತಿ ಶುಕ್ರವಾರ ವಾರದ ಸಂತೆಯು ಪಟ್ಟಣದ ಹೃದಯ ಭಾಗವಾದ ಶ್ರೀ ಮಹಾಮಾಯ ದೇವಿಯ ತೇರಿನ ಗಡ್ಡಿ(ಹಳೆಸುಮಾರು ಮೂವತ್ತಕ್ಕೂ ಹೆಚ್ಚು ವರ್ಷಗಳಿಂದ ಕುಕನೂರು ಪಟ್ಟಣದಲ್ಲಿ ಪ್ರತಿ ಶುಕ್ರವಾರ ವಾರದ ಸಂತೆಯು ಪಟ್ಟಣದ ಹೃದಯ ಭಾಗವಾದ ಶ್ರೀ ಮಹಾಮಾಯ ದೇವಿಯ ತೇರಿನ ಗಡ್ಡಿ ಹತ್ತಿರ.
ಕುಕುನೂರು :
ಸುಮಾರು ಮೂವತ್ತಕ್ಕೂ ಹೆಚ್ಚು ವರ್ಷಗಳಿಂದ ಕುಕನೂರು ಪಟ್ಟಣದಲ್ಲಿ ಪ್ರತಿ ಶುಕ್ರವಾರ ವಾರದ ಸಂತೆಯು ಪಟ್ಟಣದ ಹೃದಯ ಭಾಗವಾದ ಶ್ರೀ ಮಹಾಮಾಯ ದೇವಿಯ ತೇರಿನ ಗಡ್ಡಿ(ಹಳೆ ಬಜಾರ) ಹತ್ತಿರ ಜರುಗುತ್ತಾ ಬಂದಿದ್ದು ಮಹಾಮಾರಿ ಕೋವಿಡ್ ಸಂದರ್ಭದಲ್ಲಿ ವಾರದ ಸಂತೆಯನ್ನು ತೇರಿನ ಗಡ್ಡಿ ಪ್ರದೇಶದಿಂದ ಕೃಷಿ ಉತ್ಪನ್ನ ಮಾರುಕಟ್ಟೆ ಆವರಣಕ್ಕೆ ಸ್ಥಳಾಂತರ ಮಾಡಲಾಗಿತ್ತು.
ಕೋವಿಡ್ ನಿಂದ ಸಂಪೂರ್ಣ ಮುಕ್ತವಾದ ನಂತರ ಪ್ರತಿ ಶುಕ್ರವಾರ ನಡೆಯುತ್ತಿದ್ದ ವಾರದ ಸಂತೆಯನ್ನು ಪಟ್ಟಣದ ಹಳೆ ಬಜಾರ ತೇರಿನ ಗಡ್ಡಿಯ ಪ್ರದೇಶದಲ್ಲಿ ಪುನಹ ಪ್ರಾರಂಭಿಸಬೇಕು ಎಂದು ಪಟ್ಟಣದ ನಾಗರಿಕರು, ವ್ಯಾಪಾರಸ್ಥರು ಮೇಲಿಂದ ಮೇಲೆ ಪಟ್ಟಣ ಪಂಚಾಯಿತಿ ಹಾಗೂ ತಹಸೀಲ್ದಾರರಿಗೆ ಮನವಿ ಸಲ್ಲಿಸುತ್ತಾ ಬಂದಿದ್ದರು ಸಹ ಇದುವರೆಗೂ ಯಾವುದೇ ಬದಲಾವಣೆಗೊಳ್ಳದೆ ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿ ಜರುಗುತ್ತಾ ಬಂದಿದ್ದು ಇದೀಗ ಹಳೆಯ ಸ್ಥಳದಲ್ಲಿ ಜರುಗುವಂತೆ ಪಟ್ಟಣ ಪಂಚಾಯಿತಿ ಕಾರ್ಯಾಲಯದಿಂದ ಆದೇಶ ಹೊರಡಿಸಿದ್ದು ಈ ಆದೇಶ ಸರಿ ಇಲ್ಲ ಎಂದು ವಾರದ ಸಂತೆಯ ತರಕಾರಿ ವ್ಯಾಪಾರಸ್ಥರು ತಕರಾರು ತೆಗೆದು ಕೆಲ ಹೊತ್ತು ಪಟ್ಟಣ ಪಂಚಾಯತಿ ಕಾರ್ಯಾಲಯದ ಎದುರು ಲಘು ಪ್ರತಿಭಟನೆ ನಡೆಸಿದ ಘಟನೆ ಕುಕನೂರು ಪಟ್ಟಣ ಪಂಚಾಯಿತಿ ಎದುರಿಗೆ ಜರುಗಿತು.
ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಪಟ್ಟಣ ಪಂಚಾಯಿತಿ ಅಧಿಕಾರಿಗಳು, ಹಿರಿಯ ಅಧಿಕಾರಿಗಳ ಆದೇಶದಂತೆ ಪಟ್ಟಣದ ತೇರಿನ ಗಡ್ಡಿ ಹಳೆಯ ಬಜಾರ ನಲ್ಲಿ ಸಂತೆ ನಡೆಸಲು ಆಯೋಜನೆ ಮಾಡಿದ್ದು ಬೇರೆ ಜಾಗದಲ್ಲಿ ಸಂತೆ ನಡೆಸಲು ಪರವಾನಿಗೆ ನೀಡುವುದಿಲ್ಲ ಹಿಂದಿನ ಕಾಲದಿಂದ ವಾರತ ಸಂತೆ ನಡೆದು ಬಂದ ಜಾಗದಲ್ಲಿಯೇ ಸಂತೆ ಮುಂದುವರಿಯಲು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ನಿರ್ಧರಿಸಿದ್ದು ವ್ಯಾಪಾರಸ್ಥರು ಸಹಕರಿಸಬೇಕು ಎಂದು ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿ ಪ್ರಕಾಶ್ ಬಾಗಲಿ ಪ್ರತಿಭಟನೆ ನಡೆಸುತ್ತಿದ್ದವರ ಮನವೊಲಿಸುವಲ್ಲಿ ಯಶಸ್ವಿಯಾಗಿ ಪರಿಸ್ಥಿತಿ ತಿಳಿಗೊಳಿಸಿದರು.
ನಿಂಗರಾಜ ದೊಡ್ಡಮನಿ
ಠೀಕೆಗಳು 0