ಹಳ್ಳಿಯಿಂದ ಹುಬ್ಬಳ್ಳಿವರೆಗೆ.ತ್ರಿವೇಣಿ ಪೇಸ್ಟ್ರೀಸ್ ಆ್ಯಂಡ್ ಬೇಕರಿ ಪದಾರ್ಥಗಳಿಗೆ ಹುಬ್ಬಳ್ಳಿ ಧಾರವಾಡ ಅವಳಿ ನಗರದ ಜನರು ಫೀದಾ !
ಹಳ್ಳಿಯಿಂದ ಹುಬ್ಬಳ್ಳಿವರೆಗೆ.ತ್ರಿವೇಣಿ ಪೇಸ್ಟ್ರೀಸ್ ಆ್ಯಂಡ್ ಬೇಕರಿ ಪದಾರ್ಥಗಳಿಗೆ ಹುಬ್ಬಳ್ಳಿ ಧಾರವಾಡ ಅವಳಿ ನಗರದ ಜನರು ಫೀದಾ !
ಕೊಪ್ಪಳ :
ಜಿಲ್ಲೆಯ ಕೊಪ್ಪಳ ತಾಲೂಕಿನ ನೀರಲಗಿ ಗ್ರಾಮದ ಯುವಕ ದೇವೇಂದ್ರಪ್ಪ ಸಿಂದೋಗಿ. ತ್ರಿವೇಣಿ ಬೇಕರಿ ಉದ್ಯಮದ ಯಶಸ್ಸಿನ ನೋಟ ಹಸಿವು ಬಡತನ ಎನ್ನುವುದು ಬದುಕು ರೂಪಿಸುವ ಗುರುಗಳಿದ್ದಂತೆ ಎಂಬ ಮಾತು ಕೇಳಿದ್ದಿವಿ. ಹಾಗೆಯೇ ಯಶಸ್ಸು ಎನ್ನುವುದು ಸುಲಭದ ಮಾತಲ್ಲ ಸತತ ಪರಿಶ್ರಮ ನಿಶ್ಚಿತ ಗುರಿಯೊಂದಿಗೆ ಸಾಗಿದಾಗ ಬೆವರಿನ ಪ್ರತಿಫಲವಾಗಿ ಯಶಸ್ಸು ಎನ್ನುವ ಮಾತಿಗೆ ಸಾಕ್ಷಿ ದೇವೇಂದ್ರಪ್ಪ ಸಿಂದೋಗಿ.
ಓದು ಒಕ್ಕಾಲು ಬುದ್ದಿ ಮುಕ್ಕಾಲು ಓದಿನಿಂದಲೇ ಎಲ್ಲವೂ ಸಾಧ್ಯವಿಲ್ಲ ಮನಸ್ಸು ಮಾಡಿದರೆ ಏನನ್ನಾದರೂ ಸಾಧಿಸಬಹುದೆಂಬುದಕ್ಕೆ ಇವರೆ ಉದಾಹರಣೆ. ಬಡತನದ ಜಂಜಾಟದಲ್ಲಿ ಬದುಕಿನ ಸವಾರಿ ಮಾಡಿದ ದೇವೆಂದ್ರಪ್ಪ.ಕೊಪ್ಪಳ ಜಿಲ್ಲೆಯ ನೀರಲಗಿ ಎಂಬ ತುಂಗಭದ್ರಾ ನದಿ ದಡದ ಊರು. ಸಂಪೂರ್ಣವಾಗಿ ಕೃಷಿ ಕಾರ್ಯಗಳ ಮೂಲಕವೇ ಬದುಕು ಸಾಗಿಸುವ ಕುಟುಂಬಗಳೆ ಹೆಚ್ಚು ನೀರಲಗಿ ಗ್ರಾಮದಲ್ಲಿ. ಹೀಗೆ ಕೃಷಿ ಕುಟುಂಬದ ಅಂದಪ್ಪ ಕನಕಪ್ಪ ಸಿಂದೋಗಿ ಮತ್ತು ಕೊಟ್ರಮ್ಮ ಸಿಂದೋಗಿ ಅವರ ಹಿರಿಯ ಪುತ್ರರಾಗಿ ಜನಿಸಿದ ದೇವೇಂದ್ರಪ್ಪನವರು ಓದಿದ್ದು ಕೇವಲ ಐದನೇ ತರಗತಿ. ಕಿತ್ತು ತಿನ್ನುವ ಬಡತನದಲ್ಲಿ ಓದಿಗೆ ಹೆಚ್ಚು ಗಮನ ಕೊಡದೆ ಮನೆತನದ ನಿರ್ವಹಣೆಗಾಗಿ ಕೂಲಿ ಕೆಲಸ ಮಾಡುವ ಮೂಲಕ ಹಸಿದೊಟ್ಟೆ ತಣಿಸುವ ಕಾಲದಲ್ಲಿ ಏನಾದರೂ ಸಾಧಿಸಬೇಕು ಛಲ ದೇವೆಂದ್ರಪ್ಪ ಅವರಿಗೆ ಆಗಾಗ ಕಾಡುತ್ತಿತ್ತು.
ಬಡತನದಿಂದಾಗಿ ಶಾಲೆಯಿಂದ ದೂರ ಉಳಿದು ದುಡಿಮೆಯತ್ತ ಮುಖ ಮಾಡಿ ಇನ್ನೇನು ಬದುಕು ಬದಲಾಗಬಹುದು ಎನ್ನುವಷ್ಟರಲ್ಲಿ ತಂದೆಯವರ ಅಕಾಲಿಕ ಮರಣ ಮತ್ತಷ್ಟು ಗಾಸಿ ಮಾಡಿತು.ಹೊತ್ತಿನ ಊಟಕ್ಕೂ ಕಷ್ಟಪಡುವ ದಿನಗಳಲ್ಲಿ ತಾಯಿಯ ಧೈರ್ಯದ ಮಾತುಗಳು ಭರವಸೆಯ ಬದುಕಿಗೆ ಪುಷ್ಠಿ ನೀಡುತ್ತಿದ್ದವು.ಬಾಲ್ಯದಲ್ಲೇ ಕುಟುಂಬದ ಸಂಪೂರ್ಣ ಜವಾಬ್ದಾರಿ ಹೊತ್ತ ದೇವೆಂದ್ರಪ್ಪ ಅವರು ಕೂಲಿ ಕೆಲಸ ಮಾಡಿ ಬದುಕು ನೂಕಿದದಿನಗಳನ್ನು ಇಂದಿಗೂ ನೆನೆಯುತ್ತಾರೆ.
ಬಡತನದ ಬೇಗೆಯಿಂದ ಬೇಸತ್ತ ಸಮಯದಲ್ಲಿ ಬದುಕಿನ ನಿರ್ವಹಣೆಗಾಗಿ ಅನೇಕ ಕಡೆ ಕೆಲಸ ಅರಸಿ ವಲಸೆ ಜೀವನ ಮಾಡಬೇಕಾಯಿತು. ಮೊದಲಿಗೆ ಬಾಗಲಕೋಟೆಯ ಹೊಟೇಲ್ ಯೊಂದರಲ್ಲಿ ಕೆಲಸಕ್ಕೆ ಸೇರಿಕೊಂಡು ನಂತರದ ದಿನಗಳಲ್ಲಿ ಬೇಕರಿ ಕೆಲಸದ ಮೇಲೆ ಆಸಕ್ತಿ ಹೆಚ್ಚಾಗಿ ಬೇಕರಿಯಲ್ಲಿ ಸಹಾಯಕರಾಗಿ ಕೆಲಸಕ್ಕೆ ಸೇರಿಕೊಂಡರು. ಬಾಗಲಕೋಟೆಯಿಂದ ಸ್ನೇಹಿತರೊಂದಿಗೆ ಬೆಂಗಳೂರಿಗೆ ಕೆಲಸ ಅರಸಿ ಹೋದಾಗ ಮತ್ತೆ ಬೇಕರಿ ಕೆಲಸಕ್ಕೆ ಸೇರಿಕೊಂಡು.
ಬೆಂಗಳೂರಿನಲ್ಲಿ ನಾನಾ ಕಡೆ ಕೆಲಸ ಮಾಡಿ ಪ್ರತಿಷ್ಠಿತ ಬೇಕರಿಯೊಂದಕ್ಕೆ ಸೇರಿಕೊಂಡಾಗ ಕೇಕ್ ಮಾಡುವ ವಿಧಾನವನ್ನು ಗಮನಿಸಿ ಕೇಕ್ ಮಾಡುವುದ್ರಲ್ಲಿ ಇಷ್ಟೊಂದು ಶ್ರಮ ಇರುತ್ತಾ ಎನ್ನುವುದು ಇವರಲ್ಲಿ ಕಾಡತೊಡಗಿತು ಹಠಬಿಡದೆ ಛಲದಿಂದ ಅಭ್ಯಾಸ ಬಲದಿಂದ ಎಲ್ಲಾ ಆಕಾರದ ಕೇಕ್ ಮಾಡುವುದ್ರಲ್ಲಿ ನೈಪುಣ್ಯತೆ ಪಡೆದುಕೊಂಡರ ಸುಮಾರು 8 ವರ್ಷಗಳ ಕಾಲ ಬೇಕರಿ ಉದ್ಯಮದ ಬಗ್ಗೆ ತಿಳಿದುಕೊಂಡರು ದೇವೇಂದ್ರಪ್ಪ. ಜೊತೆಗಿದ್ದ ಕೆಲಸಗಾರರಗಿಂತಲೂ ಅತೀ ಆಸಕ್ತಿಯಿಂದ ಕೇಕ್ ಮಾಡುವ ಎಲ್ಲಾ ವಿಧಾನವನ್ನು ಕಲಿತಿದ್ದೆ ಇಂದಿನ ಯಶಸ್ವಿ ಉದ್ಯಮದ ಬುನಾದಿಯಾಗಿದೆ.
ಹಳ್ಳಿಯಿಂದ ಹುಬ್ಬಳ್ಳಿಗೆ
ದೇವೇಂದ್ರಪ್ಪ ಸಿಂದೋಗಿ ಅವರಿಗೆ ಬದುಕು ನಿರ್ವಹಣೆಗಾಗಿ ಕೆಲಸ ಸಿಕ್ಕರೆ ಸಾಕು ಎನ್ನುವ ಸಂದರ್ಭದಲ್ಲಿ ಬೇಕರಿ ಉದ್ಯಮದ ಮೇಲಿನ ಆಸಕ್ತಿ ಹೆಚ್ಚಾಯಿತು.ಹಾಗೆಯೇ ಮತ್ತಷ್ಟು ದಿನಗಳ ಕಾಲ ಧಾರವಾಡದ ಪ್ರತಿಷ್ಠಿತ ಘಟಕದಲ್ಲಿ ಕೆಲಸ ಮಾಡಿದ ಅನುಭವವೂ ಇಂದಿನ ಯಶಸ್ಸಿನ ಒಂದು ಭಾಗವಾಗಿದೆ ಎನ್ನುತ್ತಾರೆ ದೇವೇಂದ್ರಪ್ಪ ಅವರು. ದೇವೇಂದ್ರಪ್ಪ ಸಿಂದೋಗಿ ಅವರು ಧಾರವಾಡದಲ್ಲಿ ಕೆಲಸ ಮಾಡುವ ಸಂದರ್ಭದಲ್ಲೆ ವೈವಾಹಿಕ ಜೀವನಕ್ಕೆ ಪಾದಾರ್ಪಣೆ ಮಾಡಿದರು. ವಿವಾಹ ನಂತರ ಬದುಕಿನಲ್ಲಿ ಮತ್ತಷ್ಟು ಭರವಸೆಯ ಕನಸುಗಳು ಚಿಗುರೊಡೆಯ ತೊಡಗಿದವು.ಕೆಲಸ ಮಾಡುವ ಆಸಕ್ತಿ ಹೆಚ್ಚಾಯಿತು.
ಕೇಕ್ ತಯಾರಿಸುವುದರಲ್ಲಿ ನೈಪುಣ್ಯತೆಯನ್ನು ಗಮನಿಸಿದ್ದ ಸ್ನೇಹಿತರಾದ ಬಸವರಾಜ ಹಾಸನ ಹಾಗೂ ಶೇಷಾಚಲ ಭಟ್ರು ಹೊಸ ಉದ್ಯಮ ಪ್ರಾರಂಭಿಸಲು ದುಂಬಾಲುಬಿದ್ದರು.ಸ್ನೇಹಿತರ ಸಲಹೆಯಂತೆ ಹೊಸ ಉದ್ಯಮ ಪ್ರಾರಂಭಿಸಲು ಹೊಸ ಹೆಜ್ಜೆಯನ್ನಿಟ್ಟರು ಅದೇ "ತ್ರಿವೇಣಿ ಪೇಸ್ಟ್ರೀಸ್ ಆ್ಯಂಡ್ ಬೇಕರಿ ." ಮಗಳ ಹೆಸರಿನಿಂದಲೇ ಪ್ರಾರಂಭವಾಯಿತು ಬೇಕರಿ ಉದ್ಯಮ
ಹೊಸ ಉದ್ಯಮ ಪ್ರಾರಂಭಿಸುವ ತಯಾರಿಯಲ್ಲಿದ್ದಾಗಲೇ ಮೊದಲನೇಯದಾಗಿ ಹೆಣ್ಣು ಮಗು ಜನಿಸಿದಾಗ ಊರ ವೇದಮೂರ್ತಿಗಳ ಸಲಹೆಯಂತೆ ತ್ರಿವೇಣಿ ಎಂದು ನಾಮಕರಣ ಮಾಡಲಾಗುತ್ತದೆ.ಮತ್ತೆ ಉದ್ಯಮಕ್ಕೆ ಹೆಸರು ಸೂಚಿಸಲು ಕೇಳಿದಾಗ ಮಗಳ ಹೆಸರನ್ನೆ ನಾಮಕರಣ ಮಾಡಿ ಭವಿಷ್ಯದಲ್ಲಿ ಮಹತ್ತರ ಬದಲಾವಣೆಯಾಗಿ ತ್ರಿವೇಣಿ ಎನ್ನುವ ಹೆಸರು ಪ್ರಸಿದ್ಧಿಯಾಗುತ್ತದೆ ಎಂದು ಶುಭ ಹಾರೈಸಿದ ಗಳಿಗೆಯಿಂದಲೆ ದೇವೇಂದ್ರಪ್ಪ ಅವರ ಬೇಕರಿ ಉದ್ಯಮ ಲಾಭದತ್ತ ಸಾಗುತ್ತಾ ಅವಳಿ ನಗರಗಳಾದ ಹುಬ್ಬಳ್ಳಿ ಧಾರವಾಡದಲ್ಲಿ ವಿಶೇಷ ಗೌರವಕ್ಕೆ ಪಾತ್ರವಾಗಿದೆ.
ಹುಬ್ಬಳ್ಳಿ ಧಾರವಾಡದಲ್ಲಿ ತ್ರಿವೇಣಿ ತುಂಬಾ ಫೇಮಸ್.! ಶ್ರಮವಹಿಸಿ ಕೆಲಸ ಮಾಡಿದರೆ ದೇವರು ಕೈ ಹಿಡಿಯುತ್ತಾನೆ ಎಂಬುದಕ್ಕೆ ಇವರ ಸಾಧನೆಯೇ ಸಾಕ್ಷಿ.ಮೊದ ಮೊದಲಿಗೆ ಹುಬ್ಬಳ್ಳಿ ವಾತಾವರಣ ಒರಟಂತೆ ಕಂಡರು. ಹೃದಯವಂತಿಕೆಯ ಜನರ ಪ್ರೀತಿ ನಂಬಿಕೆ ವಿಶ್ವಾಸ ಬಾಯಿಯಿಂದ ಬಾಯಿಗೆ ಹರಡಿದ ಪ್ರಚಾರದಿಂದಾಗಿ ಗ್ರಾಹಕರ ಸಂಖ್ಯೆ ಹೆಚ್ಚಾಗಿ ಹುಬ್ಬಳ್ಳಿ ಧಾರವಾಡದಂತಹ ನಗರದಲ್ಲಿ ಹಳ್ಳಿ ಹೈದನ ಬೇಕರಿ ಉದ್ಯಮ ಗಟ್ಟಿಯಾಗಿ ನೆಲೆನಿಂತು ಇಂದು ಸಾವಿರಾರು ಗ್ರಾಹಕರಿಗೆ ಉತ್ತಮ ಪದಾರ್ಥ ಒದಗಿಸಿ ನೂರಾರು ಜನರಿಗೆ ಆಸರೆ ಒದಗಿಸಿದೆ.ಶುಚಿ-ರುಚಿಗೆ ಹೆಸರಾದ ತ್ರಿವೇಣಿ ಬೇಕರಿ.
ಗ್ರಾಹಕರನ್ನು ಸೆಳೆಯುವಲ್ಲಿ ಸಂಪೂರ್ಣವಾಗಿ ಯಶಸ್ವಿಯಾಗಿದೆ ಇವರ ತಂಡ.ಎಲ್ಲಾ ಅಂಗಡಿಗಳಲ್ಲೂ ಸ್ವಚ್ಚತೆ ಕಾಪಾಡಿಕೊಂಡು ಒಂದೇ ತೆರನಾದ ಆರೋಗ್ಯಕ್ಕೆ ಹಿತಕರವಾಗುವಂತೆ ರುಚಿಯನ್ನು ಕಾಯ್ದುಕೊಂಡು ಬಂದಿದ್ದಾರೆ ಇಲ್ಲಿನ ಉದ್ಯೊಗಿಗಳು.ಕೆಲಸ ಮಾಡುವ ಉದ್ಯೋಗಿಗಳು ಕೂಡ ಅಷ್ಟೇ ನಯ ವಿನಯದ ಮೂಲಕ ಗ್ರಾಹಕರನ್ನು ಬರಮಾಡಿಕೊಂಡು ವ್ಯವಹಾರ ಮಾಡುತ್ತಾರೆ.
ಹತ್ತು ವರ್ಷ ಹನ್ನೊಂದು ತ್ರಿವೇಣಿ ಬೇಕರಿ ಶಾಖೆ ತೆರೆದ ಹೆಮ್ಮೆ.ಉದ್ಯಮ ಎನ್ನುವುದು ಕೈ ಹಿಡಿಬೇಕಷ್ಟೇ ಈ ನಿಟ್ಟಿನಲ್ಲಿ ನಂಬಿದ ದೇವರು ಕೂಡ ಕೈ ಬಿಡಲಿಲ್ಲ ಎನ್ನುತ್ತಾರೆ ದೇವೆಂದ್ರಪ್ಪ. ಹುಬ್ಬಳ್ಳಿ ಧಾರವಾಡ ಅವಳಿ ನಗರದಲ್ಲಿ ಉತ್ತಮ ಸೇವೆಯನ್ನು ಒದಗಿಸುವ ಮೂಲಕ ಗ್ರಾಹಕರನ್ನು ಕಾಯ್ದಿಟ್ಟುಕೊಂಡ ತ್ರಿವೇಣಿ ತಂಡ ಸತತ ಶ್ರಮದಿಂದ ಇಂದು ನಗರದಲ್ಲಿ ನಾನಾಕಡೆ 11 ಶಾಖೆಯನ್ನು ತೆರೆದು ಗ್ರಾಹಕರಿಗೆ ಸೇವೆ ಒದಗಿಸುತ್ತಿದೆ.
150 ಕ್ಕೂ ಅಧಿಕ ಜನರಿಗೆ ಉದ್ಯೋಗ ಕಲ್ಪಿಸಿದ ಖ್ಯಾತಿ.ಓದಿ ಸರ್ಕಾರಿ ನೌಕರಿ ಮಾಡಬೇಕೆಂಬ ಹಂಬಲವೇ ಹೆಚ್ಚಾಗಿದೆ.ಅಂದು ಕಡು ಬಡತನದಲ್ಲಿ ಜೀವನ ಸಾಗಿಸಿ 5ನೇ ತರಗತಿಗೆ ಓದು ನಿಲ್ಲಿಸಿದ್ದ ದೇವೆಂದ್ರಪ್ಪ ಅವರು ಇಂದು ಬೃಹತ್ ಮಟ್ಟದ ಉದ್ಯಮ ಪ್ರಾರಂಭಿಸುವ ಮೂಲಕ ರಾಜ್ಯದ ನಾನಾ ಭಾಗದ 150 ಕ್ಕೂ ಹೆಚ್ಚು ನಿರುದ್ಯೋಗ ಯುವಕ ಯುವತಿಯರಿಗೆ ಹಿರಿಯರಿಗೂ ಕೆಲಸ ನೀಡಿದ್ದಾರೆ.50 ಕ್ಕೂ ಹೆಚ್ಚು ಜನರು ತರಬೇತಿ ಪಡೆದು ಕೆಲಸಕ್ಕೆ ಅಣಿಯಾಗುತ್ತಿದ್ದಾರೆ. ಗ್ರಾಮೀಣ ಭಾಗದ ಮಹಿಳೆಯರಿಗೆ ಊಟ ವಸತಿಯ ಜೊತೆಗೆ ಕೈತುಂಬ ಸಂಬಳ ನೀಡುವ ಮೂಲಕ ನೂರಾರು ಕುಟುಂಬಕ್ಕೆ ಆಸರೆಯಾಗಿದ್ದಾರೆ.ಅಷ್ಟೇ ಅಲ್ಲದೆ ಆರ್ಥಿಕವಾಗಿಯೂ ಸಹಾಯ ಮಾಡಿ ಉದ್ಯೋಗಿಗಳ ಕಷ್ಟದಲ್ಲೂ ಜೊತೆಯಾಗಿದ್ದಾರೆ.ಸ್ವಾರ್ಥ ಸಮಾಜದಲ್ಲಿ ಇವರ ಸೇವೆ ನಿಜಕ್ಕೂ ರೋಲ್ ಮಾಡೆಲ್. ತ್ರಿವೇಣಿ ಬೇಕರಿ ಉದ್ಯಮಕ್ಕೆ ದಶಮಾನೋತ್ಸವದ ಸಂಭ್ರಮ.2013 ರಲ್ಲಿ ಪ್ರಾರಂಭವಾದ ತ್ರಿವೇಣಿ ಪೇಸ್ಟ್ರೀಸ್ ಆ್ಯಂಡ್ ಬೇಕರಿ ಹತ್ತು ವರ್ಷಗಳ ಕಾಲ ಉತ್ತಮ ಸೇವೆ ಒದಗಿಸಿ ದಶಮಾನೋತ್ಸವ ಸಂಭ್ರಮವನ್ನು ಇದೇ ಜು.೨೧ಕ್ಕೆ ಹುಬ್ಬಳ್ಳಿ ನಗರದಲ್ಲಿ ಆಚರಿಸಿಕೊಳ್ಳುತ್ತಿದೆ.ಈ ನಿಟ್ಟಿನಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗೆ ಆಟೋಟಗಳ ಸ್ಪರ್ಧೆ, ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ರಕ್ತದಾನ ಶಿಬಿರ ಹಮ್ಮಿಕೊಳ್ಳುವ ಮೂಲಕ ಆಚರಿಸುತ್ತಿದೆ.ಕಾರ್ಯಕ್ರಮದಲ್ಲಿ ಪೂಜ್ಯರು,ಗಣ್ಯರಿಂದ ಪ್ರೋತ್ಸಾಹದ ನುಡಿಗಳಿಂದ ಉದ್ಯೋಗಿಗಳಿಗೆ ಮತ್ತಷ್ಟು ಶಕ್ತಿ ತುಂಬುವ ಕೆಲಸ ಮಾಡುತ್ತಿದ್ದಾರೆ.
ಕೂಡು ಕುಟುಂಬದೊಂದಿಗೆ ವಾಸ.ಒಗ್ಗಟ್ಟಿನಲ್ಲಿ ಬಲವಿದೆ ಎಂಬುದು ಸಾಬೀತು. ದೇವೇಂದ್ರಪ್ಪ ಅವರದ್ದು ಇಂದಿಗೂ ಅವಿಭಕ್ತ ಕುಟುಂಬ.ಸಹೋದರರಾದ ಕನಕಪ್ಪ,ಕಾಡಪ್ಪ ಅವರ ಕುಟುಂಬ ಕೂಡ ತ್ರಿವೇಣಿ ಬೇಕರಿ ಉದ್ಯಮದ ಬೆಳವಣಿಗಾಗಿ ಶ್ರಮಿಸುತ್ತಿದೆ.ಇದರ ಮೂಲಕ ಒಗ್ಗಟ್ಟಿಲ್ಲಿ ಬಲವಿದೆ ಎಂಬುದನ್ನು ಸಮಾಜಕ್ಕೆ ಈ ಕುಟುಂಬವೇ ಕೈಗನ್ನಡಿಯಾಗಿದೆ.
ಕೃಷಿ ಕಾಯಕದಲ್ಲೂ ಖುಷಿ ಕಂಡ ದೇವೆಂದ್ರಪ್ಪ.
ಸ್ವಂತ ಊರಾದ ನೀರಲಗಿ ಗ್ರಾಮದಲ್ಲಿ ಸ್ವಂತ ಭೂಮಿಯ ಜೊತೆಗೆ ಸಾಗುವಳಿ ಭೂಮಿಯಲ್ಲಿ ಸ್ವತಃ ತಾವೇ ಕೃಷಿ ಮಾಡಿ ಬೆಳೆದ ಬೆಳೆಯಯನ್ನು ತಮ್ಮ ಉದ್ಯಮಕ್ಕೆ ಬಳಸುತ್ತಿದ್ದಾರೆ.ಬಿಡುವಿನ ಸಮಯದಲ್ಲಿ ಹೊಲಗಳಿಗೆ ಬೇಟಿ ನೀಡಿ ಕೃಷಿ ಕಾರ್ಯ ಮಾಡುತ್ತಾರೆ.ತ್ರಿವೇಣಿ ಬೇಕರಿ ಕೇಕ್ ಗೆ ಅವಳಿ ನಗರದ ಜನ ಪೀಧಾ!. ಈ ಬೇಕರಿಯಲ್ಲಿ ತಯಾರಿಸುವ ಕೇಕ್ ಗಳಿಗೆ ಜನ ಮನಸೋತಿದ್ದಾರೆ.ರುಚಿಯಾದ ಕೆಮಿಕಲ್ ರಹಿತವಾಗಿ ಆರೋಗ್ಯಕರ ಕೇಕ್ ಒದಗಿಸುವ ಮೂಲಕ ಹೆಸರಾಗಿದೆ.ಈ ಬೇಕರಿಯಲ್ಲಿ ಹಾರ್ಟ್, ಸ್ಪೈಡರ್ ಮ್ಯಾನ್,ಕಾರು,ಆಟಿಕೆ ಸಾಮಾನುಗಳಂತಹ ಕಸ್ಟಮೈಸ್ ಡಿಸೈನ್ ಒದಗಿಸುವ ಮೂಲಕ ಗ್ರಾಹಕರ ಪ್ರೀತಿಗೆ ಪಾತ್ರವಾಗಿದೆ.
ಐದು ಲಕ್ಷ ಹೂಡಿಕೆ ಹತ್ತು ರೂಪಾಯಿ ಬೋನ್ಗಿ ವ್ಯಾಪಾರ.ಉದ್ಯಮ ಪ್ರಾರಂಭಿಸುವ ಮೊದಲು ಹತ್ತು ಸಲ ಯೋಚನೆ ಮಾಡಿ ಸಾಧಕ ಬಾಧಕಗಳ ಬಗ್ಗೆ ತಿಳಿದುಕೊಂಡಿದ್ದ ದೇವೇಂದ್ರಪ್ಪ ಅವರು ಸ್ನೇಹಿತರ ಸಹಕಾರ ಪಡೆದು ಐದು ಲಕ್ಷ ಹೂಡಿಕೆಯೊಂದಿಗೆ ವ್ಯಾಪಾರ ಪ್ರಾರಂಭಿಸಿದ್ದು,ತ್ರಿವೇಣಿ ಬೇಕರಿ ಪ್ರಾರಂಭವಾದ ದಿನ ಬೆಳಿಗ್ಗೆಯಿಂದ ಸಂಜೆ ವರೆಗಿನ ಸಮಯದಲ್ಲಾದ ಮೊದಲ 10 ರೂ ರೂಪಾಯಿ ವ್ಯಾಪಾರ ಇಂದಿಗೂ ನಾ ಮರೆತಿಲ್ಲ ಎನ್ನುತ್ತಾರೆ ದೇವೆಂದ್ರಪ್ಪ ಸಿಂದೋಗಿ ಅವರು.
ತಂತ್ರಜ್ಞಾನದ ಮೂಲಕ ಉದ್ಯೋಗ ವಹಿವಾಟು ಹಾಗೂ ಉದ್ಯೋಗಿಗಳ ನಿಯಂತ್ರಣ.
ದಿನ ಕಳೆದಂತೆ ಉದ್ಯಮ ಬೆಳೆಯುತ್ತಾ ಹೊರಟಿತು ಕೈಯಿಂದ ಮಾಡುವ ವಿಧಾನದಿಂದ ತಂತ್ರಜ್ಞಾನದ ಮೂಲಕ ಉತ್ಪನ್ನ ತಯಾರಿಸುವ ಕಂಡುಕೊಂಡಿದೆ.ಪ್ರತಿಯೊಬ್ಬರ ಚಲನವಲನವನ್ನು ಸಿಸಿ ಕ್ಯಾಮರಾ ಮೂಲಕವೇ ಗಮನಿಸಿ ನಿಯಂತ್ರಿಸಲಾಗುತ್ತಿದೆ.ಬೃಹತ್ ಉತ್ಪನ್ನ ಘಟಕ ಸ್ಥಾಪಿಸಿ ಅದರ ಮೂಲಕವೇ ಬೇಕರಿ ಪದಾರ್ಥಗಳನ್ನು ತಯಾರಿಸಿ 11 ಶಾಖೆಗಳಿಗೂ ರಪ್ತು ಮಾಡಲಾಗುತ್ತಿದೆ.125 ಕೆಜಿ ಕೇಕ್ ತಯಾರಿಸಿ ಹುಬ್ಬಳ್ಳಿಯಲ್ಲಿ ದಾಖಲೆ ಮಾಡಿದ ತ್ರಿವೇಣಿ ಬೇಕರಿ ಸಿಬ್ಬಂದಿ.ಬೇಕರಿ ಪ್ರಾರಂಭಿಸಿದ ಸ್ವಲ್ಪ ದಿನಗಳಲ್ಲೆ ಪ್ರಮುಖ ಕಾರ್ಯಕ್ರಮಕ್ಕೆ ಗ್ರಾಹಕರ ಬೇಡಿಕೆಯಂತೆ ಅವರ ಹೇಳಿದ ಆಕೃತಿಯಂತೆಯೇ 125 ಕೆಜಿ ತಯಾರಿಸಿ ದಾಖಲೆ ಮಾಡುವ ಮೂಲಕ ಗಮನ ಸೆಳೆದಿದ್ದಾರೆ. 11 ಶಾಖೆಗಳು ಎಲ್ಲೆಲ್ಲಿವೆ. ತ್ರಿವೇಣಿ ಪೇಸ್ಟ್ರೀಸ್ ಆ್ಯಂಡ್ ಬೇಕರಿಯು ಪ್ರಸ್ತುತ 11 ಶಾಖೆಗಳ ಮೂಲಕ ಗ್ರಾಹಕರಿಗೆ ಸೇವೆ ಒದಗಿಸುತ್ತಿದೆ.
ಗೋಕುಲ ರೋಡ (ಮೊದಲ ಅಂಗಡಿ 2013)
ಶಿರೂರುಪಾರ್ಕ್,ಕೇಶ್ವಾಪುರ,ಅಕ್ಷಯಪಾರ್ಕ,ಗಣೇಶಪೇಟ, ಧಾರವಾಡದ ಸಪ್ತಾಪುರ ಭಾವಿ,ನವನಗರ,ವಿಜಯನಗರ,ಶ್ರೇಯಾನಗರ,ಹೆಗ್ಗೇರಿ ಕಾಲೋನಿ,ವಾಯ್,ಎಸ್.ಶೆಟ್ಟರ್ ಕಾಲೋನಿ ಪ್ರಚಾರ ಬಯಸದ ಕೊಡಗೈದಾನಿ ದೇವೇಂದ್ರಪ್ಪ ಸಿಂದೋಗಿ.ಬಡತನದಲ್ಲಿ ಅನುಭವಿಸಿದ ನೋವು ಹಸಿವಿನ ದಿನಗಳೆ ಇವರ ಸಾಮಾಜಿಕ ಕೆಲಸಕ್ಕೆ ಸ್ಪೂರ್ತಿ. ದುಡಿಮೆಯಿಂದ ಬಂದ ಆದಾಯದಲ್ಲೆ ಅನೇಕ ಧಾರ್ಮಿಕ ಕಾರ್ಯಗಳಿಗೆ,ಬಡ ಮಕ್ಕಳ ಶಿಕ್ಷಣ,ಸ್ವಚ್ಚತೆ,ಅನ್ನ ದಾಸೋಹ ಕಾರ್ಯಗಳಿಗೆ ಕಲ್ಯಾಣ ಕಾರ್ಯಗಳಿಗೆ ಕೈಲಾದಷ್ಟು ಸಹಾಯ ಮಾಡುತ್ತಾ ಪ್ರಚಾರ ಬಯಸದೆ ತಮ್ಮಷ್ಟಕ್ಕೆ ತಾವು ಬದುಕು ರೂಪಿಸಿಕೊಂಡಿದ್ದಾರೆ.ಕಷ್ಟದಲ್ಲಾದ ಸ್ನೇಹಿತರನ್ನು ಸಲಹೆ ನೀಡಿದ ಹಿರಿಯರನ್ನು ಕೆಲಸ ನೀಡಿದ ಮಾಲಕರನ್ನು,ಕೆಲಸ ಮಾಡುವ ಉದ್ಯೋಗಿಗಳನ್ನು ಕೈ ಹಿಡಿದ ಗ್ರಾಹಕರನ್ನು ಇಂದಿಗೂ ನೆನೆಸುತ್ತಾರೆ.ಇನ್ನೂ ರಾಜ್ಯದ ತುಂಬಾ ಹಾಗೂ ಹೊರ ರಾಜ್ಯದಲ್ಲೂ ಶಾಖೆ ತೆರೆದು ಸೇವೆ ಒದಗಿಸುವ ಆಸಕ್ತಿ ಇದೆ ಸಮಯ ಕೂಡಿ ಬರಲಿ ಎನ್ನುತ್ತಾರೆ ದೇವೇಂದ್ರಪ್ಪ.ಸತತ ಪರಿಶ್ರಮದಿಂದ ಇಂದು ಬೇಕರಿ ಉದ್ಯಮದಲ್ಲಿ ಯಶಸ್ಸು ಕಂಡಿದ್ದಾರೆ ಹಳ್ಳಿ ಹೈದ. ಇದನ್ನೆಲ್ಲಾ ಓದಿದ ಮೇಲೆ ನೀವೂ ಕೂಡ ಬೇಟಿ ನೀಡಬೇಕೆಂಬ ಆಸೆ ನಿಮ್ಮದಾದರೆ ಇಂದೇ ಭೇಟಿ ನೀಡಿ .ಕೊನೆಯದಾಗಿ ಹೇಳುವ ಮಾತೆಂದರೆ ಕೈಲಾಗದು ಎಂದೂ ಕೈ ಕಟ್ಟಿ ಕುಳಿತರೆ ಸಾಗದು ಕೆಲಸವು ಮುಂದೆ ಎನ್ನುವುದು ನೆನಪಿರಲಿ.ಸತತ ಪರಿಶ್ರಮ ತಾಳ್ಮೆ ಹಾಗೂ ದೇವರ ಮೇಲಿನ ನಂಬಿಕೆಯೊಂದಿಗೆ ಮುನ್ನಡೆದರೆ ಯಾವುದು ಅಸಾಧ್ಯವಲ್ಲ.ಊಟಕ್ಕಾಗಿ ದುಡಿದವರು ನಾವು ಊಟ ಹಾಕುವ ಶಕ್ತಿ ಕೊಟ್ಟಿದಾರೆ ದೇವ್ರು.ನಮ್ಮ ಪಾಲಿನ ದೇವ್ರು ಎಂದರೆ ಗ್ರಾಹಕರು ಅವರ ಪ್ರೀತಿಯ ಆಶಿರ್ವಾದ ನಮಗೆ ಹೀಗೆ ಇರಲಿ.ಹುಬ್ಬಳ್ಳಿ ಜನತೆಗೆ ನಾನುಚಿರೃಣಿಯಾಗಿತ್ತೇವೆ.
ದೇವೇಂದ್ರಪ್ಪ ಸಿಂದೋಗಿ ತ್ರಿವೇಣಿ ಪ್ರೆಸ್ಟಿಸ್ ಆ್ಯಂಡ್ ಬೇಕರಿ ಮಾಲಕರು ನೀರಲಗಿ ಕೊಪ್ಪಳ ಜಿಲ್ಲೆ ಕೊಪ್ಪಳ ತಾಲೂಕು. ತ್ರಿವೇಣಿ ಬೇಕರಿಯು ಪ್ರಸ್ತುತ ದಿನಗಳಲ್ಲಿ ಗ್ರಾಹಕರ ಇಚ್ಛಾನುಸಾರ ಸೇವೆ ಒದಗಿಸುತ್ತಿದೆ. ಉದ್ಯೋಗಿಗಳಿಗೆ ಎಲ್ಲಾ ಸೌಲಭ್ಯ ಒದಗಿಸಲಾಗಿದೆ.ಅತೀ ಹೆಚ್ಚು ಗ್ರಾಮೀಣ ಭಾಗದ ಯುವಕರಿಗೆ ಮಹಿಳೆಯರಿಗೆ ಕೆಲಸ ಒದಗಿಸಲಾಗಿದೆ.ಗ್ರಾಮೀಣ ಭಾಗದಿಂದ ಬಂದು ಇವತ್ತು ಯಶಸ್ವಿ ಉದ್ಯಮಿಯಾಗಿರುವುದಕ್ಕೆ ತುಂಬಾ ಹೆಮ್ಮೆ ಎನಿಸುತ್ತದೆ.
ದೊಡ್ಡೇಶ ಮರೆಬಾಳ ಜನೆರಲ್ ಮ್ಯಾನೇಜರ್
ತ್ರಿವೇಣಿ ಪೇಸ್ಟ್ರೀಸ್ ಮತ್ತು ಬೇಕರಿ ಸಮೂಹ
ವಿಶೇಷ ವರದಿ : ಶಿವನಗೌಡ ಪೊಲೀಸ್ ಪಾಟೀಲ ನವಲಹಳ್ಳಿ ಉಪನ್ಯಾಸಕರು ಕೊಪ್ಪಳ 9845646370
ಜಿಲ್ಲಾ ವರದಿಗಾರ : ವೀರೇಶ ಹಿರೇಮಠ - 7353824767
Like
Dislike
Love
Angry
Sad
Funny
Wow
ಠೀಕೆಗಳು 0