ಸಮಾಜ ಸೇವಕಿ, ಸರ್ಕಾರಿ ಶಾಲೆಗಳ ಉಳಿವಿಗಾಗಿ ಹೋರಾಟ ಮಾಡುವ ಕನ್ನಡತಿ ಅನು ಅವರ ಅನುಕರಣೆ ಪ್ರತಿಷ್ಠಾನ ಬಳಗದಿಂದ ಯಲಬುರ್ಗಾ ತಾಲೂಕು ತಾಳಕೇರಿ ಯುವಕರಿಂದ ಸರ್ಕಾರಿ ಪ್ರೌಢ ಶಾಲೆಗೆ ಬಣ್ಣ ಹಚ್ಚಿ ಚಿತ್ರಗಳನ್ನು ಬಿಡಿಸುವ ಮೂಲಕ ಶಾಲೆಗೆ ಹೊಸ ಸ್ಪರ್ಶ ನೀಡಿದರು.
ಸಮಾಜ ಸೇವಕಿ, ಸರ್ಕಾರಿ ಶಾಲೆಗಳ ಉಳಿವಿಗಾಗಿ ಹೋರಾಟ ಮಾಡುವ ಕನ್ನಡತಿ ಅನು ಅವರ ಅನುಕರಣೆ ಪ್ರತಿಷ್ಠಾನ ಬಳಗದಿಂದ ಯಲಬುರ್ಗಾ ತಾಲೂಕು ತಾಳಕೇರಿ ಯುವಕರಿಂದ ಸರ್ಕಾರಿ ಪ್ರೌಢ ಶಾಲೆಗೆ ಬಣ್ಣ ಹಚ್ಚಿ ಚಿತ್ರಗಳನ್ನು ಬಿಡಿಸುವ ಮೂಲಕ ಶಾಲೆಗೆ ಹೊಸ ಸ್ಪರ್ಶ ನೀಡಿದರು.
ಯಲಬುರ್ಗಾ :
ಸಮಾಜ ಸೇವಕಿ, ಸರ್ಕಾರಿ ಶಾಲೆಗಳ ಉಳಿವಿಗಾಗಿ ಹೋರಾಟ ಮಾಡುವ ಕನ್ನಡತಿ ಅನು ಅವರ ಅನುಕರಣೆ ಪ್ರತಿಷ್ಠಾನ ಬಳಗದಿಂದ ಯಲಬುರ್ಗಾ ತಾಲೂಕು ತಾಳಕೇರಿ ಯುವಕರಿಂದ ಸರ್ಕಾರಿ ಪ್ರೌಢ ಶಾಲೆಗೆ ಬಣ್ಣ ಹಚ್ಚಿ ಚಿತ್ರಗಳನ್ನು ಬಿಡಿಸುವ ಮೂಲಕ ಶಾಲೆಗೆ ಹೊಸ ಸ್ಪರ್ಶ ನೀಡಿದರು.
ನಂತರದಲ್ಲಿ ಮಾತನಾಡಿದ ಬಳಗದ ಯುವಕರು ಸರ್ಕಾರಿ ಕನ್ನಡ ಶಾಲೆಗಳು ಪ್ರಸ್ತುತ ದಿನಗಳಲ್ಲಿ ನಿರ್ಲಕ್ಷ್ಯಕ್ಕೆ ಒಳಗಾಗುತ್ತಿವೆ. ಈ ಕುರಿತು ಜನರಲ್ಲಿ ಅರಿವು ಮೂಡಿಸಬೇಕು. ಈ ಶಾಲೆಗಳಿಗೆ ದಾಖಲಾಗುವವರಲ್ಲಿ ಅತಿ ಹೆಚ್ಚಿನವರು ಬಡ ವಿದ್ಯಾರ್ಥಿಗಳಾಗಿರುವುದರಿಂದ ಅಂತಹ ಬಡ ಕುಟುಂಬದ ಮಕ್ಕಳಿಗೆ ಶಿಕ್ಷಣದ ಹಕ್ಕು ಕೊಡಿಸುವುದರ ಜೊತೆಗೆ ಸರ್ಕಾರಿ ಶಾಲೆ ಉಳಿಸುವ ಕೆಲಸಕ್ಕೆ ಗ್ರಾಮಸ್ಥರು ಎಲ್ಲರೂ ಕೈಜೋಡಿಸಬೇಕು ಎಂದರು.
ರಾಯಚೂರು ಜಿಲ್ಲೆ ಸಿಂಧನೂರು ತಾಲೂಕಿನ ಬೆರಗಿ ಸಣ್ಣ ಗ್ರಾಮದ ಸಮಾಜ ಸೇವಕಿ, ಸರ್ಕಾರಿ ಶಾಲೆಗಳ ಉಳಿವಿಗಾಗಿ ಹೋರಾಟ ನಡೆಸುತ್ತಾ ಬಂದಿರುವ ಕನ್ನಡತಿ ಅನು ಅಕ್ಕನವರು ಸಮಾನ ಮನಸ್ಕರ ಅನುಕರಣೆ ಪ್ರತಿಷ್ಠಾನ ಬಳಗವನ್ನು ಕಟ್ಟಿಕೊಂಡು ಸರ್ಕಾರಿ ಶಾಲೆಗಳು ಮತ್ತು ಹಳೆಯ ಸರ್ಕಾರಿ ಶಾಲೆಗಳಿಗೆ ಬಣ್ಣ ಸುಣ್ಣ ಹಚ್ಚುವುದರ ಮೂಲಕ ಆ ಶಾಲೆಗಳಿಗೆ ಹೊಸ ರೂಪವನ್ನು ಕೊಡುತ್ತಿದ್ದಾರೆ, ಅವರು ಮಾಡುವ ಕಾರ್ಯಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಬಿತ್ತರಿಸುವ ಮೂಲಕ ಇನ್ನಿತರ ಯುವಕರಿಗೆ ಸಮಾಜ ಸೇವೆ ಮಾಡಲು ಪ್ರೇರಣೆಯಾಗಿದ್ದಾರೆ ಮತ್ತು ಅನುಕರಣೆ ಪ್ರತಿಷ್ಠಾನದ ಬಳಗದವರು ಯಾವುದೇ ರೀತಿಯ ಫಲಾಪೇಕ್ಷೆ ಇಲ್ಲದೆ ಸಮಾಜ ಸೇವೆಗೆ ತಮ್ಮನ್ನ ತಾವೂ ತೋಡಗಿಸಿಕೊಂಡಿದ್ದಾರೆ.
ಸರಕಾರಿ ಶಾಲೆಗಳನ್ನ ಉಳಿಸಲು ಸಂಕಲ್ಪ ಮಾಡಿದ್ದಾರೆ ಇಗಾಗಲೆ ರಾಜ್ಯಾದ್ಯಂತ 22 ಜಿಲ್ಲೆಗಳಲ್ಲಿ ಸಂಚರಿಸಿ 113 ಶಾಲೆಗಳನ್ನ ಬಣ್ಣ ಹಚ್ಚುವುದರ ಮೂಲಕ ಅಭಿವೃದ್ಧಿಗೋಳಿಸಿದ್ದಾರೆ 114 ನೇ ಶಾಲೆ ಅಭಿವೃದ್ದಿ ಪಡಿಸಲು ಮುಂದೆ ಬಂದಿದ್ದಾರೆ ಅವರ ಕಾರ್ಯಕ್ಕೆ ಗ್ರಾಮಸ್ಥರು ಕೈ ಜೋಡಿಸಬೇಕಾಗಿದೆ.
ಅನು ಬಳಗದ ಕಾರ್ಯ ಮೆಚ್ಚಿ ತಾಳಕೇರಿ ಶಾಲೆಯ ವಿದ್ಯಾರ್ಥಿಗಳು ,ಪಾಲಕರ ದೇಣಿಗೆಯಿಂದ ಮುಖ್ಯೋಪಾಧ್ಯಾಯರು ಹಣವನ್ನು ಸಂಗ್ರಹಿಸಿ ಬಣ್ಣಗಳನ್ನ ತರಿಸಿದ್ದು ಶಾಲೆಯಲ್ಲಿ ಒಟ್ಟು10 ಕೊಠಡಿಗಳು, 30 ಕಿಟಕಿಗಳು, 10 ಬಾಗಿಲುಗಳಿದ್ದು ದುಬಾರಿ ವೆಚ್ಚದ ಗೋಡೆ ಬರಹದ ಬಣ್ಣ, ಚಿತ್ರಕಲೆಗಳಿಗೆ ಬಣ್ಣ ಹಾಗೂ ಚಿತ್ರಕಲಾವಿದ ಸಂಭಾವನೆಗೆ ಒಟ್ಟು 50 ಸಾವಿರಕ್ಕೂ ಹೆಚ್ಚು ಹಣ ಖರ್ಚಾಗುವ ಸಂಭವವಿದೆ ಎಂದರು.
ಸ್ಥಳಿಯ ತಾಳಕೇರಿ ಗ್ರಾಮದ ಗ್ರಾಮ ಪಂಚಾಯತಿ ಅಧ್ಯಕ್ಷರು ಸದಸ್ಯರು ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಮತ್ತು ಸಂಘ ಸಂಸ್ಥೆಯ ಸದಸ್ಯರು ಪ್ರತಿಯೊಬ್ಬ ಗ್ರಾಮಸ್ಥರು ಸಹಾಯ ಸಹಕಾರ ಮಾಡಬೇಕಾಗಿದೆ
ನೀವೂ ದೇಣಿಗೆ ಮಾಡಿದರೆ ಅವರು ಗ್ರಾಮದಲ್ಲಿರುವ ಅಗ್ಯತೆ ಇರುವ ಸ್ಥಳಗಳನ್ನ ಸ್ವಚ್ಛಗೊಳಿಸಲಿದ್ದಾರೆ ಅನು ಅನುಕರಣೆ ಪ್ರತಿಷ್ಠಾನ ತಂಡಕ್ಕೆ ಸಹಾಯ ಸಹಕಾರ ನೀಡಿ ಪ್ರೋತ್ಸಾಹಿಸ ಬೇಕಾಗಿದೆ ಎಂದರು.
ನಿಂಗರಾಜ ದೊಡ್ಡಮನಿ
Like
Dislike
Love
Angry
Sad
Funny
Wow
Your experience on this site will be improved by allowing cookies.
ಠೀಕೆಗಳು 0