ದೈಹಿಕ ಶಿಕ್ಷಣ ಮತ್ತು ಕ್ರೀಡೆಗಳು ಆರೋಗ್ಯಕರ ಸದೃಡ ಮತ್ತು ಉತ್ತಮ ಸಮಾಜವನ್ನ ನಿರ್ಮಿಸಲು ಭದ್ರ ಬುನಾದಿ ಎಂದೇ ಹೇಳಬಹಿದು. ಎಲ್ಲಾ ಮಾನವರ ಸಮಗ್ರಸ್ವರೂಪವು ಒಂದೇ ಆಗಿರುತ್ತದೆ.
ದೈಹಿಕ ಶಿಕ್ಷಣ ಮತ್ತು ಕ್ರೀಡೆಗಳು ಆರೋಗ್ಯಕರ ಸದೃಡ ಮತ್ತು ಉತ್ತಮ ಸಮಾಜವನ್ನ ನಿರ್ಮಿಸಲು ಭದ್ರ ಬುನಾದಿ ಎಂದೇ ಹೇಳಬಹಿದು. ಎಲ್ಲಾ ಮಾನವರ ಸಮಗ್ರಸ್ವರೂಪವು ಒಂದೇ ಆಗಿರುತ್ತದೆ.
ಗಜೇಂದ್ರಗಡ-ರಾಜೂರ :
ದೈಹಿಕ ಶಿಕ್ಷಣ ಮತ್ತು ಕ್ರೀಡೆಗಳು ಆರೋಗ್ಯಕರ ಸದೃಡ ಮತ್ತು ಉತ್ತಮ ಸಮಾಜವನ್ನ ನಿರ್ಮಿಸಲು ಭದ್ರ ಬುನಾದಿ ಎಂದೇ ಹೇಳಬಹಿದು. ಎಲ್ಲಾ ಮಾನವರ ಸಮಗ್ರಸ್ವರೂಪವು ಒಂದೇ ಆಗಿರುತ್ತದೆ. ವಿವಿಧ ಕುಲದ ಮಾನವರು ಭೌಗೋಳಿಕ ಪ್ರದೇಶಗಳಲ್ಲಿ ವಿಕಾಸಹೊಂದಿದವರು ವಿಭಿನ್ನವಾಗಿ ಕಾಣುತ್ತಾರೆ. ಅವರು ವಿಭಿನ್ನವಾದ ದೈಹಿಕ ಆಕಾರ ಬಾವನೆಗಳನ್ನ ಹೊಂದಿದರು ಸಹಿತ ಪ್ರಕ್ರೀಯಗಳು ಒಂದೇ ಆಗಿರುತ್ತವೆ. ಪ್ರತಿಯೊಬ್ಬರಿಗೂ ದೈಹಿಕ ವ್ಯಾಯಮದ ಅಗತ್ಯವಿರುತ್ತದೆ.
ಬಿಡುವಿಲ್ಲದ ಜೀವನದಲ್ಲಿ ಕ್ರೀಡೆಯು ಆರಾಮದಾಯಕ ಜೀವನ ನಡೆಸಲು ಉತ್ತಮವಾದ ದೇಹ, ಹೆಸರು, ಕಿರ್ತಿ ಹಣ ಪಡೆಯಲು ಶಿಕ್ಷಣ ಅಗತ್ಯ ಸದೃಢ ಮನಸು ಮತ್ತು ದೇಹವನ್ನು ಪಡೆಯಲು ಕ್ರೀಡೆಗಳಲ್ಲಿ ತೋಡಗಿಸಿಕೋಳ್ಳುವದು ಉತ್ತಮ ಮಾರ್ಗವಾಗಿದೆ.
ಕ್ರೀಡೆಗಳನ್ನ ಅವಲೋಕಿಸಿದರೆ ಪ್ರಾಚಿನ ಕಾಲದಿಂದಲೂ ಹೆಚ್ಚಿನಪ್ರಾಮುಖ್ಯತೆಯನ್ನ ಕೊಡಲಾಗಿದೆ. ಮಕ್ಕಳ ಬೆಳವಣಿಗೆ ಕ್ರೀಡೆಗಳಿಂದ ಅದು ಮನರಂಜನೆಯ ಆಟಗಳು ಆಗಿರಬಹುದು, ವೃತ್ತಿಪರ ಕ್ರೀಡೆಗಳಾಗಿರಬಹುದು, ಒತ್ತಡ ಮತ್ತು ಚಿಂತೆಗಳಿಂದ ಮುಕ್ತಿನಿಡುವಲ್ಲಿ ಕ್ರೀಡೆಯು ಸಹಕಾರಿಯಾಗಿದೆ. ಇದರಿಂದ ಸಮಯಪಾಲನೆ, ತಾಳ್ಮೆ, ಶಿಸ್ತು, ಸಮರ್ಪಣಾ ಮನೋಭಾವವನ್ನು ಕಲಿಸುತ್ತದೆ. ನಾವು ಕ್ರೀಡೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುವುದರಿಂದ ಆರೋಗ್ಯಕರವಾಗಿ ಸ್ಥೂಲಕಾಯ, ಬೋಜ್ಜು, ಹೃದಯ ಸಮಸ್ಯಗಳು, ರಕ್ತಶುದ್ದಿ ಮತ್ತು ಮದುಮೇಹದಂತ ಅದೇಷ್ಟೋ ಕಾಯಿಲೆಗಳಿಂದ ರಕ್ಷಣೆಯನ್ನು ಸಹ ಪಡೆಯಬಹುದು.
ನಮ್ಮನ್ನು ಧರ್ಯಶಾಲಿಯನ್ನಾಗಿ ಆತಂಕ, ಕೋಪದ ಮನಸ್ಥಿತಿಯನ್ನು ಕಡಿಮೇ ಮಾಡಿ ಸಂತೋಷದ ಭಾವನೆಯನ್ನ ನಿಡುತ್ತದೆ. ಇತ್ತಿಚಿನ ವರ್ಷಗಳಲ್ಲಿ ದೈಹಿಕ ಶಿಕ್ಷಣ ಮತ್ತು ಯೋಗವನ್ನ ಶಾಲಾ ಕಾಲೇಜುಗಳಲ್ಲಿ ಕಡ್ಡಾಯಗೋಳಿಸಲಾಗಿದೆ. ಕ್ರೀಡಾಚಟುವಟಿಕೆಗಳಲ್ಲಿ ಉತ್ತೇಜನದ ಸಲುವಾಗಿ ಗುಂಪುಗಳನ್ನಾಗಿ ಮಾಡಿ ಮನರಂಜನಾ ಕ್ರೀಡೆಗಳಿಗೆ ಪ್ರತಿಯೋಬ್ಬರು ಸ್ಪರ್ಧಿಸುವಂತೆ ಮಾಡಲಾಗಿದೆ. ಆರೋಗ್ಯದ ಹಿತದೃಷ್ಠಿಯಿಂದ ಕ್ರೀಡೆಗಳಲ್ಲಿ ಭಾಗವಹಿಸಲು ೩೦-೫೦ ನಿಮಿಷಗಳಕಾಲ ಚಂಡಿನಾಟ ಆಡುವದು, ೩೫ ನಿಮಿಷಗಳಕಾಲ ನಡಿಗೆ, ೧೫-೨೦ ನಿಮಿಷಗಳಕಾಲ ಬೈಸಿಕಲ್ ತುಳಿಯುವುದು, ೧೫-೨೦ ನಿಮಿಷಗಳಕಾಲ ಸ್ಕಿಪ್ಪಿಂಗ್ಮಾಡುವದು, ೧೫ ನಿಮಿಷಗಳಕಾಲ ಈಜುವದು, ೧೫-೨೦ ನಿಮಿಷಗಳಕಾಲ ಮೆಟ್ಟಿಲುಗಳನ್ನ ಹತ್ತುವದು-ಇಳಿಯುವುದು ಹೀಗೆ ಹಲವಾರು ರೀತಿಯ ಕ್ರೀಡಾ ಚಟುವಟಿಕೆಗಳಲ್ಲಿ ಬಾಗವಹಿಸುವುದರಿಂದ ಕ್ಯಾಲೊರಿಗಳು ಸುಡುತ್ತವೆ.
ವಾರಕ್ಕೆ ೧೦೦೦ ದಷ್ಟ ಕರಗಿಸಬೇಕು. ದಿನಕ್ಕೆ ೧೫೦ ರಷ್ಡು ಕ್ಯಾಲೊರಿಯಾಗಳನ್ನ ಸುಡುವಷ್ಟು ಚಟುವಟಿಕೆಗಳನ್ನ ಮಾಡಬೇಕು. ಕ್ರೀಡೆಗಳಲ್ಲಿ ಬಾಗವಹಿಸುವಿಕೆಯಿಂದ ಮನಸ್ಥಿತಿಯನ್ನ ಸುಧಾರಿಸಲು ಸಹಾಯವೆಂಬ ಕಲ್ಪನೆಯು ಇತರ ವೈಜ್ಞಾನಿಕ ಸಂಶೋನೆಗಳಿಂದ ದೃಡಪಟ್ಟಿದೆ. ದೈಹಿಕ ಚಟುವಟಿಕೆಯು ವಯಸ್ಸಾದವರಿಗೆ ಮತ್ತು ಯುವಕರಿಗೆ ಹಲವಾರು ಪ್ರಯೋಜನೆಗಳನ್ನ ನಿಡುತ್ತದೆ. ಚಲನಾ ಶೀಲತೆಯನ್ನ ಕಾಪಾಡಿಕೊಳ್ಳಲು ವ್ಯಾಯಾಮ ಪ್ರಮುಕವಾಗಿದೆ.
ಎಲ್ಲಾ ವಯಸ್ಸಿನ ಜನರು ಲಿಂಗಗಳಿಗನುಗುನವಾಗಿ ನಿಯಮಿತ ಕ್ರೀಡಾ ಚಟುವಟಿಕೆಗಳಲ್ಲಿ ಪ್ರಯೋಜನೆ ಪಡೆಯುವಂತಾಗಬೇಕು. ವಾಲಿಬಾಲ್, ಯೋಗ, ಓಟ, ನಡಿಗೆ, ಸ್ಕಿಪ್ಪಿಯಿಂಗ್, ಈಜು, ಇತ್ಯಾದಿಗಳ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸದಾಗ ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳಲು ಪ್ರೋತ್ಸಾಹಿಸುತ್ತದೆ.
ಆರೋಗ್ಯಕರ ದೇಹದಲ್ಲಿ ಆರೋಗ್ಯಕರ ಮನಸ್ಸನ್ನ ಬೆಂಬಲಿಸುತ್ತದೆ. ಸ್ವಾಮಿ ವಿವೇಕಾನಂದರು ಹೇಳಿದ ಹಾಗೆ ದೇಶವನ್ನಕಟ್ಟಲು ಬಲಿಷ್ಡವಾದ ಶರೀರವಿರಬೇಕು. ಆ ಶರೀರವನ್ನ ಸದೃಡಗೋಳಿಸಲು ವಿಶಾಲವಾದ ಆಟದ ಮೈದಾನ ಕಟ್ಟಿಸಬೇಕು. ಹತ್ತು ಆಸ್ಪತ್ರೆ ಕಟ್ಟಿಸುವ ಬದಲು ಒಂದು ವಿಶಾಲವಾದ ಆಟದ ಮೈದಾನವನ್ನ ಕಟ್ಟಿಸಬೇಕು. ಅದಾಗಲೇ ಆಟದ ಮೈದಾನದಲ್ಲಿ ಆರೋಗ್ಯವನ್ನ ವೃದ್ಧಿಸಿಕೊಳ್ಳಲು ಸಾಧ್ಯ.
ಈಗಿನ ಮೊಬೈಲ್ ಜಗತ್ತಿನಲ್ಲಿ ಎಲ್ಲಾ ವಯೋಮಾನದವರು ಆಟೋಟಗಳನ್ನ ಮರೆತು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಆರೋಗ್ಯಕ್ಕಾಗಿ ಕೆಲವು ಸಮಯವನ್ನ ತೆಗೆದುಕೊಂಡು ಆಟೋಟಗಳಲ್ಲಿ ಭಾಗವಹಿಸಿ ದೇಹವನ್ನ ಸದೃಡವಾಗಿ ಇಟ್ಟುಕೋಳ್ಳುವುದು ಸೂಕ್ತ ಎಂದರು......
ಮುಂದುವರೆಯುವುದು..........
ರವಿ ಹಲಗಿ
ದೈಹಿಕ ಉಪನ್ಯಾಸಕರು, ಅನ್ನದಾನೇಶ್ವರ ಪಿಯು ಕಾಲೇಜು, ಗಜೇಂದ್ರಗಡ.
Like
Dislike
Love
Angry
Sad
Funny
Wow
Your experience on this site will be improved by allowing cookies.
ಠೀಕೆಗಳು 1
Ravi Halagi
Nice tq u