ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ.ಪ್ರಸಕ್ತ ವರ್ಷದಲ್ಲಿ ರೂ. 7 ಅನ್ನು ಹೆಚ್ಚಿಸಿ ರೂ. 316/- ಕೂಲಿಯನ್ನು ನೀಡಲಾಗುತ್ತದೆ. ಪುರುಷ ಮತ್ತು ಮಹಿಳೆಯರಿಗೆ ಸಮಾನ ಕೂಲಿ ಹಣವನ್ನು ನೀಡಲಾಗುತ್ತಿದೆ.
ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ.ಪ್ರಸಕ್ತ ವರ್ಷದಲ್ಲಿ ರೂ. 7 ಅನ್ನು ಹೆಚ್ಚಿಸಿ ರೂ. 316/- ಕೂಲಿಯನ್ನು ನೀಡಲಾಗುತ್ತದೆ. ಪುರುಷ ಮತ್ತು ಮಹಿಳೆಯರಿಗೆ ಸಮಾನ ಕೂಲಿ ಹಣವನ್ನು ನೀಡಲಾಗುತ್ತಿದೆ.
ಕುಕನೂರು : ಬೇಸಿಗೆಯ ಉಷ್ಣತೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ನೆರೇಗಾ ಕಾರ್ಮಿಕರು ತಪಾಸಣೆ ಮಾಡಿಸಿಕೊಂಡು ಆರೋಗ್ಯ ಕಾಪಾಡಿಕೊಳ್ಳಿ ಎಂದು ಕಾರ್ಯನಿರ್ವಾಹಕ ಅಧಿಕಾರಿ ರಾಮಣ್ಣ ದೊಡ್ಡಮನಿ ಹೇಳಿದರು
ತಾಲೂಕಿನ ಇಟಗಿ ಗ್ರಾಮದ ನರೇಗಾ ನಾಲಾ ಸುಧಾರಣೆ ಕಾಮಗಾರಿ ಸ್ಥಳದಲ್ಲಿ ಆರೋಗ್ಯ ತಪಾಸಣಾ ಮತ್ತು ಮತದಾನ ಜಾಗೃತಿ ಕಾರ್ಯಕ್ರಮವನ್ನು ಎರ್ಪಡಿಸಿದ್ದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು ಗ್ರಾಮೀಣ ಭಾರತದ ಪ್ರದೇಶದಲ್ಲಿನ ಬಡ ಕೂಲಿಕಾರರಿಗೆ ಅಕುಶಲ ಕೂಲಿ ಕೆಲಸ ಒದಗಿಸುವ ಮಹಾತ್ವಾಕಾಂಕ್ಷಿ ಯೋಜನೆ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ.ಪ್ರಸಕ್ತ ವರ್ಷದಲ್ಲಿ ರೂ. 7 ಅನ್ನು ಹೆಚ್ಚಿಸಿ ರೂ. 316/- ಕೂಲಿಯನ್ನು ನೀಡಲಾಗುತ್ತದೆ. ಪುರುಷ ಮತ್ತು ಮಹಿಳೆಯರಿಗೆ ಸಮಾನ ಕೂಲಿ ಹಣವನ್ನು ನೀಡಲಾಗುತ್ತಿದೆ.
ಹೆಚ್ಚಿನ ಸಂಖ್ಯೆಯಲ್ಲಿ ಕೂಲಿಕಾರರು ಯೋಜನೆಯಲ್ಲಿ ತೋಡಗಿಸಿಕೊಳ್ಳಬೇಕು, ಬೇಸಿಗೆಯ ತಾಪಮಾನ ಹೆಚ್ಚುತ್ತಿರುವುದರಿಂದ ಕೆಲಸದ ಪ್ರಮಾಣದಲ್ಲಿ ಕಡಿತ ಮಾಡಿ ಆಯುಕ್ತರು ಆದೇಶ ಮಾಡಿದ್ದಾರೆ. ಇದರಿಂದಾಗಿ ನರೇಗಾ ಕೂಲಿಕಾರರಿಗೆ ಅನುಕೂಲ ವಾಗಲಿದೆ. ಅದೇ ರೀತಿ ಯಾವುದೇ ಕೆಲಸ ಮಾಡಲು ಆರೋಗ್ಯವಂತರಾಗಿರಲು ಸ್ಥಳದಲ್ಲಿ ಆರೋಗ್ಯ ತಪಾಸಣೆ ಅವಶ್ಯಕ ಅದಕ್ಕಾಗಿ ಕಾಮಗಾರಿ ಸ್ಥಳದಲ್ಲಿಯೇ, ಕೂಲಿಕಾರರ ಅರೊಗ್ಯ ತಪಾಸಣೆ ಮಾಡಲಾಗುತ್ತಿದೆ.
ಮತ್ತು ಬೇಸಿಗೆಯ ಅವಧಿಯಲ್ಲಿ ನಿರಂತರ ಕೆಲಸ ನೀಡಲಾಗುತ್ತದೆ, ಇದರೊಂದಿಗೆ ಪರಿಸರ ಸಂರಕ್ಷಣೆ ಆಗುತ್ತದೆ, ಭಾವಿ ಮತ್ತು ಬೋರ್ ವೆಲ್ ಗಳು ಭರ್ತಿಯಾಗುತ್ತವೆ ಎಂದರು. ಸಾರ್ವಜನಿಕರು, ಕೂಲಿಕಾರರು ಯಾವುದೇ ಆಸೆ ಆಮಿಷೆಗಳಿಗೆ ಓಳಗಾಗದೇ ಎಲ್ಲರೂ ಕಡ್ಡಾಯವಾಗಿ ಮೇ-10 ರಂದು ಮತದಾನ ಮಾಡಬೇಕು, ಮತದಾನ ನಮ್ಮ ಸಂವಿದಾನ ನೀಡಿರುವ ಒಂದು ವರ ಅದನ್ನು ಹಬ್ಬದ ಸಂಭ್ರಮಾಚರಣೆಯಂದು ಭಾವಿಸಿ ಒಳ್ಳೆಯ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದರು.
ನಂತರ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಮತದಾರರ ಪ್ರತಿಜ್ಞಾವಿಧಿ ಭೋಧನೆ ಮಾಡಿದರು.
ಸ್ಥಳದಲ್ಲಿ ಪಂಚಾಯತ ಅಭಿವೃದ್ಧಿ ಅಧಿಕಾರಿಗಳಾದ ಶರಣಪ್ಪ ಕೆಳಗಿನಮನಿ, ವೈಧ್ಯಾಧಿಕಾರಿಗಳು ತಾಲೂಕ ಐ.ಇ.ಸಿ ಸಂಯೋಜಕರಾದ ಲಕ್ಷ್ಮಣ ಕೆರಳ್ಳಿ, ಪಂಚಾಯತಿ ಸಿಬ್ಬಂದಿಗಳಾದ ರಮೇಶ್ ಬಾರಕೇರ, ಸಂಕಪ್ಪ ಹಳ್ಳಿ, ಬಿ.ಎಫ್.ಟಿ, ಗ್ರಾಮ ಕಾಯಕ ಮಿತ್ರರು, ಕಾಯಕ ಬಂಧುಗಳು ಮತ್ತು ಕೂಲಿಕಾರರು ಹಾಜರಿದ್ದರು.
Like
Dislike
Love
Angry
Sad
Funny
Wow
Your experience on this site will be improved by allowing cookies.
ಠೀಕೆಗಳು 0