2023 24ನೇ ಸಾಲಿನ ಶೈಕ್ಷಣಿಕ ವರ್ಷವನ್ನು ಮುಖ್ಯೋಪಾಧ್ಯರು ಸಹ ಶಿಕ್ಷಕರ ಸಹಕಾರದೊಂದಿಗೆ ಸಡಗರ ಸಂಭ್ರಮದಿಂದ ಪ್ರಾರಂಭಿಸಬೇಕೆಂದು ತಾಲೂಕು ಶಿಕ್ಷಣಾಧಿಕಾರಿ ಪದ್ಮನಾಭಕರಣ ಹೇಳಿದರು.
2023 24ನೇ ಸಾಲಿನ ಶೈಕ್ಷಣಿಕ ವರ್ಷವನ್ನು ಮುಖ್ಯೋಪಾಧ್ಯರು ಸಹ ಶಿಕ್ಷಕರ ಸಹಕಾರದೊಂದಿಗೆ ಸಡಗರ ಸಂಭ್ರಮದಿಂದ ಪ್ರಾರಂಭಿಸಬೇಕೆಂದು ತಾಲೂಕು ಶಿಕ್ಷಣಾಧಿಕಾರಿ ಪದ್ಮನಾಭಕರಣ ಹೇಳಿದರು.
ಕುಕನೂರ :
2023 24ನೇ ಸಾಲಿನ ಶೈಕ್ಷಣಿಕ ವರ್ಷವನ್ನು ಮುಖ್ಯೋಪಾಧ್ಯರು ಸಹ ಶಿಕ್ಷಕರ ಸಹಕಾರದೊಂದಿಗೆ ಸಡಗರ ಸಂಭ್ರಮದಿಂದ ಪ್ರಾರಂಭಿಸಬೇಕೆಂದು ತಾಲೂಕು ಶಿಕ್ಷಣಾಧಿಕಾರಿ ಪದ್ಮನಾಭಕರಣ ಹೇಳಿದರು.
2023-24ನೆಯ ಶೈಕ್ಷಣಿಕ ವರ್ಷದ ಶಾಲಾ ಪ್ರಾರಂಭೋತ್ಸವದ ಪ್ರಯುಕ್ತ ಕ್ಷೇತ್ರ ಶಿಕ್ಷಣಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಪಟ್ಟಣದ ಸರ್ಕಾರಿ ಪ್ರೌಢಶಾಲೆಯಲ್ಲಿ ಕುಕನೂರು ಯಲಬುರ್ಗಾ ತಾಲೂಕ ಮಟ್ಟದ ಶಾಲಾ ಮುಖ್ಯೋಪಾಧ್ಯಾಯರ ಸಭೆ ಜರುಗಿಸಲಾಯಿತು, ಈ ವೇಳೆ ಸಭೆಯ ಅಧ್ಯಕ್ಷತೆಯ ವಹಿಸಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಪದ್ಮನಾಭಕರಣ ಮಾತನಾಡುತ್ತಾ ಮುಖ್ಯೋಪಾಧ್ಯಾಯರು ತಮ್ಮ ಸಹ ಶಿಕ್ಷಕರಿಂದ ಮತ್ತು ಸಹ ಶಾಲಾ ಸುಧಾರಣಾ ಸಮಿತಿಯವರ ಸಹಕಾರದಿಂದ ಹೊಸ ಶೈಕ್ಷಣಿಕ ವರ್ಷವನ್ನು ಸಂಭ್ರಮದಿಂದ ಪ್ರಾರಂಭಿಸಬೇಕು.
ಶಾಲೆಯನ್ನು ಹಸಿರು ತಳಿರು ತೋರಣಗಳಿಂದ ಸಿಂಗರಿಸಿ ಮಕ್ಕಳನ್ನು ಆತ್ಮೀಯತೆಯಿಂದ ಬರಮಾಡಿಕೊಳ್ಳಬೇಕು, ಪ್ರಸಕ್ತ ಮಳೆಗಾಲ ಪ್ರಾರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಶೀತಲಗೊಂಡಿರುವ ಕಟ್ಟಡದಿಂದ ಶಾಲಾ ಮಕ್ಕಳನ್ನು ದೂರವಿರಿಸುವಂತೆ ಶಿಕ್ಷಕ ವರ್ಗದವರು ಜಾಗೃತಿ ವಹಿಸಬೇಕು ಎಂದು ಹೇಳಿದರು.
ಅಕ್ಷರ ದಾಸೋಹ ಸಮಿತಿಯ ಸಹಾಯಕ ನಿರ್ದೇಶಕರಾದ ಎಫ್.ಎಂ ಕಳ್ಳಿ ಮಾತನಾಡುತ್ತಾ ತಾಲೂಕಿನ ಎಲ್ಲಾ ಶಾಲೆಯಲ್ಲಿ ಮುಖ್ಯೋಪಾಧ್ಯಾಯರು ತಮ್ಮ ಶಾಲೆಯ ಅಡುಗೆ ಸಿಬ್ಬಂದಿಗಳ ಸಹಕಾರದಿಂದ ಅಡಿಗೆ ಕೋಣೆ ಮತ್ತು ಪರಿಕರಗಳನ್ನು ಸ್ವಚ್ಛಗೊಳಿಸಿ ಆಹಾರ ಧಾನ್ಯಗಳನ್ನು ಸರಿಯಾದ ಕ್ರಮದಲ್ಲಿ ಸ್ವಚ್ಛಗೊಳಿಸಿ ಊಟ ತಯಾರಿಸಲು ಸೂಚಿಸಬೇಕು ಯಾವುದೇ ಕಾರಣಕ್ಕೂ ಕಳಪೆ ಆಹಾರ ಧಾನ್ಯಗಳನ್ನು ಬಳಸಬಾರದು ಎಂದು ಕಟ್ಟು ನಿಟ್ಟಿನ ಸೂಚನೆ ನೀಡಿದರು. ತಾಲೂಕಿನ ಎಲ್ಲಾ ಶಾಲೆಗಳಲ್ಲಿ ಶಾಲಾ ಪ್ರಾರಂಭೋತ್ಸವದಂದು ಮಕ್ಕಳಿಗೆ ಸಿಹಿ ಊಟವನ್ನು ನೀಡಬೇಕು ಎಂದು ಹೇಳಿದರು.
ಬಿ ಆರ್ ಸಿ ಸಮನ್ವಯಾಧಿಕಾರಿ ಅಶೋಕ ಗೌಡರ್ ಮಾತನಾಡುತ್ತಾ ಎಲ್ಲಾ ಮುಖ್ಯೋಪಾಧ್ಯಕ್ಷರು ತಮ್ಮ ಶಾಲೆಯಲ್ಲಿ ಪ್ರಾರಂಭದ ದಿನದಿಂದಲೇ ದಾಖಲಾತಿ ಆಂದೋಲನ ಕೈಗೊಂಡು ಗ್ರಾಮದ ಎಲ್ಲಾ ಮಕ್ಕಳನ್ನು ಶಾಲೆಗೆ ದಾಖಲು ಮಾಡಿಕೊಳ್ಳಬೇಕು. ಈಗಾಗಲೇ ಶಾಲೆಗೆ ದಾಖಲಾಗಿರುವ ಮಕ್ಕಳನ್ನು ಮುಂದಿನ ತರಗತಿಗೆ ಬರ್ತಿ ನೀಡುವ ಮೂಲಕ ದಾಖಲು ಮಾಡಬೇಕು ಎಂದು ತಿಳಿಸಿದರು. ಎಲ್ಲಾ ಮುಖ್ಯೋಪಾಧ್ಯಾಯರು ಪ್ರತಿದಿನ ಬೆಳಿಗ್ಗೆ ಆನ್ಲೈನ್ ಸ್ಯಾಡ್ ಲಾಗಿನ್ ನಲ್ಲಿ ಕಡ್ಡಾಯ ಹಾಜರಾತಿ ನಮೂದಿಸಬೇಕು ಎಂದರು.
ಶಿಕ್ಷಣ ಇಲಾಖೆ ಅಧಿಕಾರಿಗಳ ಸಂಘದ ಜಿಲ್ಲಾ ಅಧ್ಯಕ್ಷ ಬಾಬುಸಾಬ್ ಲಾಯನದಾರ್ ಮಾತನಾಡಿ ಮಕ್ಕಳು ಶಾಲೆಯ ಕಡೆ ಆಕರ್ಷಿತರಾಗುವಂತೆ ಶಿಕ್ಷಕ ವರ್ಗದವರು ಪ್ರೀತಿಯಿಂದ ಬರಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಸಭೆಯಲ್ಲಿ ಮುಖ್ಯೋಪಾಧ್ಯಾಯರ ಸಂಘದ ಅಧ್ಯಕ್ಷ ವಿ ಎಸ್ ಬೆಣಕಲ್, ಬಸವರಾಜ ಅಂಗಡಿ, ಸುರೇಶ್ ಮಾದನೂರು, ವೀರಪ್ಪ ಗಾಣಿಗೇರಾ ಮತ್ತು ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ ಮುಖ್ಯೋಪಾಧ್ಯಾಯರು ಉಪಸ್ಥಿತರಿದ್ದರು.
ನಿಂಗರಾಜ ದೊಡ್ಡಮನಿ
Like
Dislike
Love
Angry
Sad
Funny
Wow
Your experience on this site will be improved by allowing cookies.
ಠೀಕೆಗಳು 0