ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ರಾಯರೆಡ್ಡಿ ಅವರ ಅಭಿಮಾನಿ ಅವರ ಗೆಲುವಿಗಾಗಿ 101 ತೆಂಗಿನ ಕಾಯಿ ಅಂಗಳ ಹರಕೆ ಕಟ್ಟಿಕೊಂಡು ಎಂದು ಗ್ರಾಮ ದೇವತೆಯಾದ ಹೋಲಿಗೆ ಮನೆಗೆ ಸಮರ್ಪಿಸಿ ಹರಕೆ ತೀರಿಸಿ ಅಭಿಮಾನ ಮರೆದರು.
ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ರಾಯರೆಡ್ಡಿ ಅವರ ಅಭಿಮಾನಿ ಅವರ ಗೆಲುವಿಗಾಗಿ 101 ತೆಂಗಿನ ಕಾಯಿ ಅಂಗಳ ಹರಕೆ ಕಟ್ಟಿಕೊಂಡು ಎಂದು ಗ್ರಾಮ ದೇವತೆಯಾದ ಹೋಲಿಗೆ ಮನೆಗೆ ಸಮರ್ಪಿಸಿ ಹರಕೆ ತೀರಿಸಿ ಅಭಿಮಾನ ಮರೆದರು.
ಕುಕನೂರು :
2023ರ ಸಾರ್ವತ್ರಿಕ ಚುನಾವಣೆಯಲ್ಲಿ ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಬಸವರಾಜ ರಾಯರೆಡ್ಡಿಯವರ ಅಭಿಮಾನಿ ಯಲಬುರ್ಗಾ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವಿಗಾಗಿ 101 ತೆಂಗಿನ ಕಾಯಿ ಅಂಗಳ ಹರಕೆ ಕಟ್ಟಿಕೊಂಡು ಎಂದು ಗ್ರಾಮ ದೇವತೆಯಾದ ಹೋಲಿಗೆ ಮನೆಗೆ ಸಮರ್ಪಿಸಿ ಹರಕೆ ತೀರಿಸಿ ಅಭಿಮಾನ ಮರೆದರು.
ಕುಕನೂರು ತಾಲೂಕಿನ ಬೆಣಕಲ್ ಗ್ರಾಮದ ನಿವಾಸಿಯಾದ ಆನಂದ್ ಭಜಂತ್ರಿ ಯವರು ಶಾಸಕ ಬಸವರಾಜ ರಾಯರೆಡ್ಡಿ ಅವರ ಅಪ್ಪಟ ಅಭಿಮಾನಿಯಾಗಿದ್ದು 2023ರ ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದ ಬಸವರಾಜ ರಾಯರೆಡ್ಡಿ ಅವರು ಯಲಬುರ್ಗಾ ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಲಿ ಎಂದು ಗ್ರಾಮ ದೇವತೆ ಶ್ರೀ ಆದಿಶಕ್ತಿ ಹುಲಿಗೆಮ್ಮನಿಗೆ ಹರಕೆ ಕಟ್ಟಿಕೊಂಡಿದ್ದರು ಅದರಂತೆ ಮಂಗಳವಾರ ತಮ್ಮ ಹರಿಕೆಯಾದ 101 ತೆಂಗಿನಕಾಯಿಯನ್ನು ತಾಯಿಗೆ ಸಮರ್ಪಿಸುವ ಮೂಲಕ ತಮ್ಮ ಹರಿಕೆಯನ್ನು ತೀರಿಸಿದ್ದಾರೆ.
ದಿನಾಂಕ 13 ಮೇ 2023 ರಂದು ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಚುನಾವಣಾ ಫಲಿತಾಂಶ ಹೋರ ಬಿದ್ದಿದ್ದು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಬಸವರಾಜ ರಾಯರೆಡ್ಡಿ ಅವರು ಚುನಾಯಿತರಾಗಿ ಆಯ್ಕೆಯಾಗಿರುತ್ತಾರೆ. ಅದರ ನಿಮಿತ್ಯ ಆನಂದ್ ಭಜಂತ್ರಿ ಅವರು ಗ್ರಾಮದ ಶ್ರೀಹುಲಿಗೆಮ್ಮ ದೇವಸ್ಥಾನದಲ್ಲಿ 101 ಕಾಯಿ ತೆಂಗಿನಕಾಯಿ ಸಮರ್ಪಣೆ ಮಾಡುವುದರೊಂದಿಗೆ ತಮ್ಮ ಹರಕೆಯನ್ನು ತೀರಿಸಿ ಬಸವರಾಜ ರಾಯರೆಡ್ಡಿ ಪರ ಜಯಘೋಷವನ್ನು ಹಾಕುತ್ತಾ ತಮ್ಮ ಅಭಿಮಾನವನ್ನು ಮೆರೆದಿರುತ್ತಾರೆ.
ಈ ವೇಳೆಯಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅನ್ನವ್ವ ತಿಪ್ಪರಸನಾಳ, ಉಪಾಧ್ಯಕ್ಷರಾದ ಷಣ್ಮುಖಪ್ಪ ವಜ್ರಬಂಡಿ, ಸುರೇಶ್ ತಿಪ್ಪರಸನಾಳ, ದೇವಪ್ಪ ವಜ್ರಬಂಡಿ, ಮಲ್ಲಪ್ಪ ಬಳಿಗೇರಿ, ಶರಣಪ್ಪ ಬಳಿಗೇರಿ, ಜಂಬಣ್ಣ ನಡುಲಮನಿ, ಬಸವರಾಜ ಹಂಚಿನಾಳ, ಶೇಕಪ್ಪ ಹೊಟ್ಟಿ, ಹಾಗೂ ಇನ್ನಿತರರು ಪಾಲ್ಗೊಂಡಿದ್ದರು.
ನಿಂಗರಾಜ ದೊಡ್ಡಮನಿ
Like
Dislike
Love
Angry
Sad
Funny
Wow
Your experience on this site will be improved by allowing cookies.
ಠೀಕೆಗಳು 0